ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್ಲೆ ; ಬಂದರು ಠಾಣೆಗೆ ದೂರು

29-07-26 09:43 pm       HK News Desk   ಕ್ರೈಂ

ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್ ಆವರಣದಲ್ಲಿ ಕೆಲವು ವಕೀಲರು ಸೇರಿಕೊಂಡು ವ್ಯಕ್ತಿಯೊಬ್ಬನಿಗೆ ಹಲ್ಲೆಗೈದ ಆರೋಪ ಕೇಳಿಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷನೆಂದು ಹೇಳಿಕೊಳ್ಳುವ ಪ್ರವೀಣಚಂದ್ರ ರಾವ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.

ಮಂಗಳೂರು, ಜುಲೈ 29 ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್ ಆವರಣದಲ್ಲಿ ಕೆಲವು ವಕೀಲರು ಸೇರಿಕೊಂಡು ವ್ಯಕ್ತಿಯೊಬ್ಬನಿಗೆ ಹಲ್ಲೆಗೈದ ಆರೋಪ ಕೇಳಿಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷನೆಂದು ಹೇಳಿಕೊಳ್ಳುವ ಪ್ರವೀಣಚಂದ್ರ ರಾವ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.

ಚೆಕ್ ಬೌನ್ಸ್ ಕೇಸ್ ವಿಚಾರದಲ್ಲಿ ಕೋರ್ಟಿಗೆ ಬಂದಿದ್ದ ಪ್ರವೀಣಚಂದ್ರ ರಾವ್, ಕೆಲವು ವಕೀಲರ ವಿರುದ್ಧ ಬಾರ್ ಕೌನ್ಸಿಲ್ ಗೆ ದೂರು ಕೊಡಲು ಅಧ್ಯಕ್ಷ ಜಗದೀಶ ಶೇಣವ ಬಳಿಗೆ ತೆರಳಿದ್ದರು. ಈ ವೇಳೆ, ಚೆಕ್ ಬೌನ್ಸ್ ಕೇಸಿನ ಪ್ರತಿವಾದಿಯ ವಕೀಲ ವಿನಯ್ ಕುಮಾರ್ ಎಂಬವರು ತನ್ನ ಸಂಗಡಿಗರ ಜೊತೆಗೆ ಬಂದು ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ, ಬಾರ್ ಕೌನ್ಸಿಲ್ ಬಳಿಯ ಕೋಣೆಯಲ್ಲಿ ಕೂಡಿ ಹಾಕಿ ವಕೀಲರು ಹಲ್ಲೆ ನಡೆಸಿದ್ದಾರೆಂದು ಪ್ರವೀಣಚಂದ್ರ ರಾವ್ ಬಂದರು ಠಾಣೆಗೆ ದೂರು ನೀಡಿದ್ದಾರೆ.

ಜುಲೈ 28ರ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತೀವ್ರ ಹಲ್ಲೆಗೀಡಾದ ಪ್ರವೀಣ್ ಅವರ ಮುಖ, ಕುತ್ತಿಗೆಯ ಭಾಗದಲ್ಲಿ ರಕ್ತ ಬಂದು ಊದಿಕೊಂಡಿತ್ತು. ಬಳಿಕ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಂದರು ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಎಫ್ಐಆರ್ ಮಾಡಿಲ್ಲ. ದೂರಿನಲ್ಲಿ ಹಲ್ಲೆ ಮಾಡಿರುವ ಕೆಲವು ವಕೀಲರ ಹೆಸರನ್ನು ನಮೂದಿಸಲಾಗಿದೆ.