ಬ್ರೇಕಿಂಗ್ ನ್ಯೂಸ್
17-05-21 08:06 pm Headline Karnataka News Network ಡಿಜಿಟಲ್ ಟೆಕ್
ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಭಾರತೀಯ ಬಳಕೆದಾರರಿಗೆ ಚಂದಾದಾರಿಕೆಯಲ್ಲಿ ಬದಲಾವಣೆಯನ್ನು ಮಾಡಿದೆ.
ಅಮೆಜಾನ್ ಪ್ರೈಂಗೆ ಕಡಿಮೆ ಹಣ ತೆತ್ತು ಒಂದು ತಿಂಗಳ ಮಟ್ಟಿಗೆ ಚಂದಾದಾರರಾಗಿ ಸಿನಿಮಾ, ವೆಬ್ ಸರಣಿಗಳನ್ನು ವೀಕ್ಷಿಸಬಹುದಾದ ಅವಕಾಶ ಇತ್ತು. ಅದನ್ನು ರದ್ದು ಮಾಡಿದೆ ಅಮೆಜಾನ್ ಪ್ರೈಂ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿರ್ದೇಶನದ ಕಾರಣ ಅಮೆಜಾನ್ ಪ್ರೈಂ ಈ ನಿರ್ಣಯ ಕೈಗೊಂಡಿದೆ.

ಆಟೋಮೇಟೆಡ್ ಟ್ರ್ಯಾನ್ಸಾಕ್ಷನ್ಗಳನ್ನು ಮಾಡಬಾರದೆಂದು ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿದ್ದು, ಅದೇ ಕಾರಣದಿಂದ ಇನ್ನು ಮುಂದೆ ತಿಂಗಳ ಚಂದಾದಾರಿಕೆ ನಿಲ್ಲಿಸಿ ಅದರ ಬದಲಿಗೆ ಮೂರು ತಿಂಗಳು ಹಾಗೂ ವರ್ಷದ ಸಬ್ಸ್ಕ್ರಿಪ್ಷನ್ ಅನ್ನು ಮಾತ್ರವೇ ಬಳಸುವಂತೆ ಅಮೆಜಾನ್ ಪ್ರೈಂ ಪ್ರಕಟಣೆ ಹೊರಡಿಸಿದೆ.
ಅಮೆಜಾನ್ ಪ್ರೈಂನ ಒಂದು ತಿಂಗಳ ಸಬ್ಸ್ಕ್ರಿಪ್ಷನ್ ದರ 129 ರುಗಳಿತ್ತು. ಆದರೆ ಇನ್ನು ಮುಂದೆ ಇದರ ಬದಲಿಗೆ ಅಮೆಜಾನ್ ಪ್ರೈಂನ ಮೂರು ತಿಂಗಳ ಸಬ್ಸ್ಕ್ರಿಷನ್ಗೆ 299 ರು ನೀಡಬೇಕಾಗಿದೆ. ಅಥವಾ ಒಂದು ವರ್ಷದ ಸಬ್ಸ್ಕ್ರಿಪ್ಷನ್ ಪಡೆಯಲು 999 ರು ನೀಡಬೇಕಾಗಿರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಒಂದು ತಿಂಗಳ ಪ್ಲಾನ್ಗಳು ತಿಂಗಳ ನಂತರ ನಿಂತು ಹೋಗಲಿವೆ. ಒಂದು ತಿಂಗಳ ಸಬ್ಸ್ಕ್ರಿಪ್ಷನ್ ಅನ್ನು ಏಪ್ರಿಲ್ 27 ರಿಂದಲೇ ರದ್ದು ಮಾಡಿ ಮೂರು ತಿಂಗಳ ಹಾಗೂ ವರ್ಷದ ಪ್ಲಾನ್ಗಳನ್ನಷ್ಟೆ ಚಾಲ್ತಿಯಲ್ಲಿ ಇಡಲಾಗಿದೆ. ಅಮೆಜಾನ್ ಪ್ರೈಂಗೆ ಭಾರತದಲ್ಲಿ ಸುಮಾರು 10 ಕೋಟಿ ಬಳಕೆದಾರರಿದ್ದಾರೆ. ನೆಟ್ಫ್ಲಿಕ್ಸ್ಗೆ ಹೋಲಿಸಿದರೆ ಭಾರತದ ಸ್ಥಳೀಯ ಕಂಟೆಂಟ್ ಅಮೆಜಾನ್ ಪ್ರೈಂನಲ್ಲಿ ಹೆಚ್ಚಿಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ ಭಾಷೆಯ ಸಿನಿಮಾಗಳು, ವೆಬ್ ಸರಣಿಗಳು ಅಮೆಜಾನ್ ಪ್ರೈಂನಲ್ಲಿ ಹೆಚ್ಚು. ನೆಟ್ಫ್ಲಿಕ್ಸ್ಗೆ ಹೋಲಿಸಿದರೆ ಬೆಲೆ ಸಹ ಬಹಳ ಕಡಿಮೆ ಇರುವ ಕಾರಣ ಸಹಜವಾಗಿಯೇ ಅಮೆಜಾನ್ ಪ್ರೈಂ ಭಾರತೀಯರ ಮೆಚ್ಚಿನ ಒಟಿಟಿ ಆಗಿದೆ.
Have you been enjoying movies, TV shows, early deliveries, and more on Amazon Prime with a 1-month subscription? You might have to consider other plans as the company has discontinued the Rs 129/month subscription plan in India. The change was in adherence to a policy by the Reserve Bank of India.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 02:04 pm
HK News Desk
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm