ಬ್ರೇಕಿಂಗ್ ನ್ಯೂಸ್
17-04-21 06:04 pm Source: Gizbot Bureau ಡಿಜಿಟಲ್ ಟೆಕ್
ವಾಟ್ಸಾಪ್ ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈಗಾಗಲೇ ಹಲವು ಮಾದರಿಯ ಅನುಕೂಲಕರ ಫೀಚರ್ಸ್ ಪರಿಚಯಿಸಿದೆ. ಜೊತೆಗೆ ಕಾಲಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಎರಡು ಪ್ರಮುಖ ಫೀಚರ್ಸ್ಗಳನ್ನು ಪರಿಚಯಿಸಿದೆ. ಈ ಫೀಚರ್ಸ್ಗಳ ಮೂಲಕ ಬಳಕೆದಾರರು ಈಗ ದೊಡ್ಡ ಚಿತ್ರ ಮತ್ತು ವೀಡಿಯೊ ಪ್ರೀವ್ಯೂ ಅನ್ನು ನೋಡಲು ಸಾಧ್ಯವಾಗುತ್ತದೆ.
ಹೌದು, ವಾಟ್ಸಾಪ್ ಐಒಎಸ್ ಮಾದರಿಯಲ್ಲಿ ಎರಡು ಮೇಜರ್ ಫೀಚರ್ಸ್ಗಳನ್ನು ಲಾಂಚ್ ಮಾಡಿದೆ. ಈ ಹೊಸ ಅಪ್ಡೇಟ್ ಮೂಲಕ ಡಿಸ್ಅಪಿಯರಿಂಗ್ ಮೆಸೇಜ್ ಫೀಚರ್ಸ್ ಅನ್ನು ಸಹ ಸುಧಾರಿಸಿದೆ. ಈ ಫೀಚರ್ಸ್ಗಳನ್ನು ನೀವು ವಾಟ್ಸಾಪ್ನ ಇತ್ತೀಚಿನ 2.21.71 ಸ್ಥಿರ ಐಒಎಸ್ ಆವೃತ್ತಿಯಲ್ಲಿ ಕಾಣಬಹುದು. ಹೊಸ ಅಪ್ಡೇಟ್ ಈಗಾಗಲೇ ಆಪಲ್ನ ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಇನ್ನು ಈ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ವಾಟ್ಸಾಪ್ ಹೊಸ ಫೀಚರ್ಸ್ ಮೂಲಕ ಐಒಎಎಸ್ ನಲ್ಲಿ ನೀವು ಹಂಚಿಕೊಳ್ಳುವ ಫೋಟೋಗಳು ಅಥವಾ ವೀಡಿಯೊಗಳನ್ನು ವೀಕ್ಷಿಸುವುದನ್ನು ಸುಲಭಗೊಳಿಸಿದೆ. ಜೊತೆಗೆ ಈ ಫೋಟೋ ಅಥವಾ ವೀಡಿಯೊಗಳ ಮೇಲೆ ಕ್ಲಿಕ್ ಮಾಡದೆ ಫುಲ್ ಫೋಟೋ ಮತ್ತು ವೀಡಿಯೊವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಒಮ್ಮೆ ನೀವು ಯಾವುದೆ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಂಡರೆ, ನೀವು ಪ್ರಸ್ತುತ ನೋಡುವ ಸಣ್ಣ ಚದರ ಪೂರ್ವವೀಕ್ಷಣೆಗಿಂತ ವಾಟ್ಸಾಪ್ ದೊಡ್ಡದಾಗಿರಲಿದೆ. ಈ ಫೀಚರ್ಸ್ ವಾಟ್ಸಾಪ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಇನ್ನೂ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಇದನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇನ್ನು ಈ ಹೊಸ ಅಪ್ಡೇಟ್ ಮೂಲಕ ಗ್ರೂಪಿನಲ್ಲಿ ಭಾಗವಹಿಸುವ ಎಲ್ಲರೂ ಕೂಡ ಡಿಸ್ಅಪಿಯರಿಂಗ್ ಮೆಸೇಜ್ಗಳ ಸೆಟ್ಟಿಂಗ್ ಅನ್ನು ಬದಲಾಯಿಸಲು ಸಹ ಅನುಮತಿಸುತ್ತದೆ. ಈ ಹಿಂದೆ ಡಿಸ್ಅಪಿಯರಿಂಗ್ ಮೆಸೇಜ್ಗಳನ್ನು ನಿಯಂತ್ರಿಸಲು ಗ್ರೂಪ್ ಅಡ್ಮಿನ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದಾಗ್ಯೂ, ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಆನ್ ಅಥವಾ ಆಫ್ ಮಾಡಲು ನಿರ್ವಾಹಕರಿಗೆ ಮಾತ್ರ ಅನುಮತಿಸಲು ಗ್ರೂಪ್ ಅಡ್ಮಿನ್ ಇನ್ನೂ ಗ್ರೂಪ್ ಸೆಟ್ಟಿಂಗ್ಗಳನ್ನು ಬದಲಾಯಿಸಬಹುದು.

ಸದ್ಯ ಮೆಸೇಜಿಂಗ್ ಅಪ್ಲಿಕೇಶನ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೊಸ ಡಿಸ್ಅಪಿಯರಿಂಗ್ ಮೆಸೇಜ್ ಫೀಚರ್ಸ್ ಈಗಾಗಲೇ ಲಭ್ಯವಿದೆ. ನಿಮಗೆ ತಿಳಿದಿರುವಂತೆ , ಡಿಸ್ಅಪಿಯರಿಂಗ್ ಮೆಸೇಜ್ಗಳ ಫೀಚರ್ಸ್ ಏಳು ದಿನಗಳ ನಂತರ ಒಬ್ಬ ವ್ಯಕ್ತಿ ಅಥವಾ ಗ್ರೂಪ್ ಚಾಟ್ನಲ್ಲಿ ಸಂದೇಶಗಳನ್ನು ಅಳಿಸುತ್ತದೆ. ಆದರೆ, ನೀವು ಮೊದಲು ಈ ಫೀಚರ್ಸ್ ಅನ್ನು ಬಳಸಲು ಮೊದಲು ಸಕ್ರಿಯಗೊಳಿಸಬೇಕಾಗುತ್ತದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ನೀವು ಈ ಹಿಂದೆ ಯಾವುದೇ ಚಾಟ್ಗೆ ಕಳುಹಿಸಿದ ಸಂದೇಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಹ ಗಮನಿಸಬಹುದಾಗಿದೆ.
This News Article Is A Copy Of GIZBOT BUREAU
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 01:23 pm
HK News Desk
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm