ಬ್ರೇಕಿಂಗ್ ನ್ಯೂಸ್
            
                        05-04-21 06:23 pm Headline Karnataka News Network ಡಿಜಿಟಲ್ ಟೆಕ್
            53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರೋದು ಕಳೆದ ಶನಿವಾರ ಬಯಲಾಗಿದೆ. ಈ ಬೃಹತ್ ಮಟ್ಟದ ಸೋರಿಕೆಯಲ್ಲಿ ಹ್ಯಾಕರ್ಗಳು ಸ್ವತಃ ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಅವರ ಖಾಸಗಿ ಮೊಬೈಲ್ ಫೋನ್ ನಂಬರ್ ಕೂಡ ಲೀಕ್ ಮಾಡಿದ್ದು, ಸಾರ್ವಜನಿಕವಾಗಿ ಸುಲಭವಾಗಿ ನಂಬರ್ ಸಿಗುವಂತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಳೆದ ಜನವರಿಯಲ್ಲಿ ಫೇಸ್ಬುಕ್ ಅಕೌಂಟ್ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಹ್ಯಾಕರ್ಗಳು ಫೇಸ್ಬುಕ್ ಅಕೌಂಟ್ಗಳಿಗೆ ಲಿಂಕ್ ಆಗಿರೋ 53 ಕೋಟಿ ಫೋನ್ ನಂಬರ್ಗಳನ್ನ ಕದ್ದು, ದೊಡ್ಡ ಡೇಟಾಬೇಸ್ ರಚಿಸಿ ಅದನ್ನ ಹ್ಯಾಕರ್ಸ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕನಿಷ್ಟ ಕಂಪ್ಯೂಟರ್ ಜ್ಞಾನವುಳ್ಳ ಯಾರು ಬೇಕಾದ್ರೂ ಈ ಫೋನ್ ನಂಬರ್ಗಳನ್ನ ಪಡೆಯಬಹುದಾಗಿದೆ ಎಂದು ವರದಿಯೊಂದು ದೃಢಪಡಿಸಿದೆ.

ಸ್ವತಃ ಮಾರ್ಕ್ ಝಕರ್ಬರ್ಗ್ ಅವರ ಪರ್ಸನಲ್ ಫೋನ್ ನಂಬರ್ ಸೋರಿಕೆಯಾಗಿರೋದು ಈ ಹ್ಯಾಕಿಂಗ್ನ ಗಂಭೀರತೆ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಫೇಸ್ಬುಕ್ನಿಂದ ಸ್ಪಷ್ಟನೆ ಬೇಕಾದ್ರೆ ಪತ್ರಕರ್ತರು ಈಗ ನೇರವಾಗಿ ಝಕರ್ಬರ್ಗ್ ಅವರಿಗೇ(ಲೀಕ್ ಆಗರೋ ನಂಬರ್ಗೆ) ಕರೆ ಮಾಡಿ ಅಂತ ಡೇಟಾ ಸೆಕ್ಯೂರಿಟಿ ತಜ್ಞ ಡೇವ್ ವಾಕರ್ ಎಂಬವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಹ್ಯಾಕರ್ಗಳು ಹಲವಾರು ಜನರ ಫೋನ್ ನಂಬರ್ಗಳನ್ನೊಳಗೊಂಡ ಸೂಕ್ಷ್ಮ ಮಾಹಿತಿಯನ್ನ ಆನ್ಲೈನ್ ಮೂಲಕ ಫ್ರೀಯಾಗಿ ನೀಡ್ತಿದ್ದರು ಎಂದು ವರದಿಯಾಗಿದೆ. ಅಲ್ಲದೆ ಹ್ಯಾಕರ್ಸ್ ಫೋರಂನಲ್ಲಿ ಕಳೆದ ಜನವರಿಯಿಂದ ಫೋನ್ ನಂಬರ್ಗಳು ಹರಿದಾಡ್ತಿವೆ ಅಂತ ತಿಳಿದುಬಂದಿದೆ.
            
            
            In a major privacy breach, personal data of around 53.3 crores Facebook users from 106 countries have allegedly been posted online for free on low-level hacking forums.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm