ಬ್ರೇಕಿಂಗ್ ನ್ಯೂಸ್
            
                        14-02-21 04:06 pm Source: GIZBOT Manthesh ಡಿಜಿಟಲ್ ಟೆಕ್
            ಫೇಸ್ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆದರೆ ಇತ್ತೀಚಿಗೆ ವಾಟ್ಸಾಪ್ ಹೊಸ ನಿಯಮಗಳ ಜಾರಿಯಿಂದ ತನ್ನ ಜನಪ್ರಿಯತೆಗೆ ಪೆಟ್ಟು ಮಾಡಿಕೊಂಡಿದೆ. ಅದಾಗ್ಯೂ ವಾಟ್ಸಾಪ್ ಬಳಕೆ ಮುಂಚೂಣಿಯಲ್ಲಿಯೇ ಇದೆ. ಈಗಾಗಲೇ ಸಂಸ್ಥೆಯು ಹಲವು ಆಕರ್ಷಕ ಫೀಚರ್ಸ್ ಪರಿಚಯಿಸಿ ಗಮನ ಸೆಳೆದಿದೆ. ಹಾಗೆಯೇ ಈ ವರ್ಷವು ಕೆಲವು ಮಹತ್ತರ ಫೀಚರ್ಸ್ ಅಳವಡಿಸಲಿದೆ.
ಹೌದು, ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಕೆಲವು ಫೀಚರ್ಸ್ಗಳು ಬಳಕೆದಾರರಿಗೆ ಅತ್ಯುತ್ತಮ ಅನಿಸಿವೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಯು ವಾಟ್ಸಾಪ್ ಪೇಮೆಂಟ್ ಸೇವೆಯನ್ನು ಶುರು ಮಾಡಿ ಸದ್ದು ಮಾಡಿತು. ಹಾಗೆಯೇ ಗ್ರೂಪ್ ವಿಡಿಯೊ ಕಾಲಿಂಗ್ ಮಿತಿಯಲ್ಲಿ ಹೆಚ್ಚಳ ಮಾಡಿತು. ಅದೇ ರೀತಿ ಈ ವರ್ಷವು ಸಹ ವಾಟ್ಸಾಪ್ ಲಾಗ್ಔಟ್ ಸೇರಿದಂತೆ ಇನ್ನು ಕೆಲವು ಕುತೂಹಲಕರ ಫೀಚರ್ಸ್ಗಳನ್ನು ಸೇರಿಸುವ ಲಕ್ಷಣಗಳನ್ನು ಹೊರಹಾಕಿದೆ.

ವಾಟ್ಸಾಪ್ ಲಾಗ್ಔಟ್ ಫೀಚರ್
ವಾಟ್ಸಾಪ್ ನೂತನವಾಗಿ ಲಾಗ್ಔಟ್ ಫೀಚರ್ ಅನ್ನು ಶೀಘ್ರದಲ್ಲೇ ತರಲು ಸಜ್ಜಾಗಿದೆ. ಕಂಪನಿಯು ಈಗಾಗಲೇ ಇದನ್ನು ಪರೀಕ್ಷಿಸಲು ಪ್ರಾರಂಭಿಸಿದೆ. WABetaInfo ತಾಣದ ವರದಿಯ ಪ್ರಕಾರ, ಈ ಫೀಚರ್ ಭಿನ್ನವಾಗಿ, ವಾಟ್ಸಾಪ್ ಬೀಟಾ ಅಪ್ಡೇಟ್ 2.21.30.16 ನಲ್ಲಿ ಗುರುತಿಸಲ್ಪಟ್ಟಿದೆ.

ಮಲ್ಟಿ ಡಿವೈಸ್ ಲಾಗ್ಇನ್
ವಾಟ್ಸಾಪ್ ಮಲ್ಟಿ ಡಿವೈಸ್ ಲಾಗ್ ಇನ್ ಫೀಚರ್ ವಾಟ್ಸಾಪ್ ನ ಬಹುನಿರೀಕ್ಷಿತ ಫೀಚರ್ ಆಗಿದೆ. ವಾಟ್ಸಾಪ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಈ ಫೀಚರ್ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರು ಬಹು ಸಾಧನಗಳಿಗೆ ಸೈನ್ ಇನ್ ಮಾಡಲು ಸಾಧ್ಯವಾಗುತ್ತದೆ.

ವಾಟ್ಸಾಪ್ ವೆಬ್ನಲ್ಲಿ ಆಡಿಯೊ ಮತ್ತು ವೀಡಿಯೊ ಕರೆ
ವಾಟ್ಸಾಪ್ ಬಳಕೆದಾರರು ಬಹಳ ಕುತೂಹಲದಿಂದ ಕಾಯುತ್ತಿರುವ ಮತ್ತೊಂದು ಫೀಚರ್ ಅಂದರೇ ವಾಟ್ಸಾಪ್ ವೆಬ್ನಲ್ಲಿ ಆಡಿಯೊ ಮತ್ತು ವೀಡಿಯೊ ಕರೆಗೆ ಅವಕಾಶ. ಈ ಫೀಚರ್ ಡೆಸ್ಕ್ಟಾಪ್ಗಳು ಮತ್ತು ಲ್ಯಾಪ್ಟಾಪ್ಗಳಲ್ಲಿ ವೀಡಿಯೊ ಕರೆಗಳು ಮತ್ತು ಧ್ವನಿ ಕರೆಗಳನ್ನು ಅನುಮತಿಸುತ್ತದೆ.

ವೆಕೇಶನ್ ಮೋಡ್
ಫೇಸ್ಬುಕ್ ಒಡೆತನದ ವಾಟ್ಸಾಪ್ನಲ್ಲಿ 'ವೆಕೇಶನ್ ಮೋಡ್' ಫೀಚರ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ಫೀಚರ್ ಆರ್ಕೈವ್ ಮಾಡಿದ ಚಾಟ್ಗಳಂತೆ ಹೆಚ್ಚು ಕಾರ್ಯನಿರ್ವಹಿಸುತ್ತದೆ. ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸುವವರೆಗೆ ನಿರ್ದಿಷ್ಟ ಸಂಪರ್ಕದಿಂದ ಸಂದೇಶಗಳು ಅಥವಾ ಕರೆಗಳು ತೊಂದರೆಗೊಳಗಾಗುವುದಿಲ್ಲ. ಈ ವೈಶಿಷ್ಟ್ಯವನ್ನು 'ವೆಕೇಶನ್ ಮೋಡ್' ಎಂದು ಹೆಸರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
This News Article is a Copy of GIZBOT
            
            
            
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm