ಬ್ರೇಕಿಂಗ್ ನ್ಯೂಸ್
31-12-20 03:05 pm Source: GIZBOT Mutthuraju H M ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಮಾನಿಟರ್ಗಳ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಮಾನಿಟರ್ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಬೆನ್ಕ್ಯೂ ಸಂಸ್ಥೆ ಭಾರತದಲ್ಲಿ ಎರಡು ಹೊಸ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಐ-ಕೇರ್ ಎಂಟರ್ಟೈನ್ಮೆಂಟ್ ಮಾನಿಟರ್ಗಳಾಗಿವೆ. ಈ ಮಾನಿಟರ್ಗಳು 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ.

ಹೌದು, ತೈವಾನೀಸ್ ಮೂಲದ ಬೆನ್ಕ್ಯೂ ಸಂಸ್ಥೆ ಕಣ್ಣಿನ ಆರೈಕೆಯನ್ನು ನೀಡುವ ಜೊತೆಗೆ ಮನರಂಜನೆಯನ್ನು ಒದಗಿಸಬಲ್ಲ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆ ಆಗಿವೆ. ಇನ್ನು ಈ ಮಾನಿಟರ್ಗಳನ್ನ EW 3280 U 32 ಇಂಚಿನ ಮಾನಿಟರ್ ಮತ್ತು EW 2780 Q 27 ಹೆಸರಿಸಲಾಗಿದೆ. ಇದು ಎರಡೂ ವರ್ಧಿತ ಎಚ್ಡಿಆರ್ಐ ತಂತ್ರಜ್ಞಾನದೊಂದಿಗೆ ಬರುತ್ತವೆ, ಆಡಿಯೊಫೈಲ್ ತಜ್ಞರ ‘ಟ್ರೆವೊಲೊ' ತಂಡದಿಂದ ಕಸ್ಟಮೈಸ್ ಮಾಡಿದ ಸ್ಪೀಕರ್ಗಳನ್ನು ಹೊಂದಿವೆ.

ಬೆನ್ಕ್ಯೂ ಸಂಸ್ಥೆ ಪರಿಚಯಿಸಿರುವ ಹೊಸ ಮಾನಿಟರ್ಗಳು ‘ಬ್ರೈಟ್ನೆಸ್ ಇಂಟೆಲಿಜೆನ್ಸ್ ಪ್ಲಸ್' ಎಂಬ ಬ್ರೈಟ್ನೆಸ್ ಮತ್ತು ಕಲರ್ ಟೆಂಪರೇಚರ್-ಸೆನ್ಸಿಂಗ್ ಟೆಕ್ನಾಲಜಿ ಯನ್ನು ಹೊಂದಿವೆ. ಈ ಮಾನಿಟರ್ಗಳು ತನ್ನ ಮನರಂಜನಾ ಸರಣಿಯನ್ನು ಮನರಂಜನಾ ವಿಷಯವನ್ನು ಆನಂದಿಸಲು ಪರಿಪೂರ್ಣ ಒಡನಾಡಿಯನ್ನಾಗಿ ಮಾಡಲು ವಿಶಾಲ ಬಣ್ಣದ ಹರವು ಹೊಂದಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಅಸಾಧಾರಣ ಆಡಿಯೊ-ದೃಶ್ಯ ಇಮ್ಮರ್ಶನ್ ಅನ್ನು ಸಹ ನೀಡಿದೆ. ಜೊತೆಗೆ ತನ್ನ ಬಳಕೆದಾರರ ಕಣ್ಣಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಣ್ಣಿನ ಆರೈಕೆ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ.

ಇನ್ನು ಈ ಎರಡು ಮಾನಿಟರ್ಗಳಲ್ಲಿ EW 3280U ಮಾನಿಟರ್ 95% DCI-P3 ಮತ್ತು EW-2780 Q 99% SRGB (ಸ್ಟ್ಯಾಂಡರ್ಡ್ ರೆಡ್ ಗ್ರೀನ್ ಬ್ಲೂ) ಜೊತೆಗೆ, ಬಳಕೆದಾರರು ಕ್ರಮವಾಗಿ ಎಕ್ಸ್ಬಾಕ್ಸ್ / ಪ್ಲೇಸ್ಟೇಷನ್ ಮತ್ತು ಚಲನಚಿತ್ರಗಳು ಅಥವಾ ಸರಣಿಗಳಲ್ಲಿ ರಿಯಲ್ ಲೈಪ್ ಕಲರ್ಗಳೊಂದಿಗೆ ಕನ್ಸೋಲ್ ಗೇಮ್ನಲ್ಲಿ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ. ಇದಲ್ಲದೆ ಹೊಸ ಬೆನ್ಕ್ಯೂ ಎಂಟರ್ಟೈನ್ಮೆಂಟ್ ಸೀರೀಸ್ ಮಾನಿಟರ್ಗಳು ರಿಮೋಟ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ. ಅದು ಡಿಸ್ಪ್ಲೇನಲ್ಲಿ ಒನ್-ಟಚ್ ಫೈವ್-ಫಂಕ್ಷನ್ ನ್ಯಾವಿಗೇಟರ್ ಕಂಟ್ರೋಲ್ ಮತ್ತು ಅನುಕೂಲಕರ ವಾಲ್ಯೂಮ್ ವೀಲ್ನೊಂದಿಗೆ ಸಂಯೋಜಿಸಲ್ಪಟ್ಟಿದೆ.
This News Article is a Copy of GIZBOT
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm