ಬ್ರೇಕಿಂಗ್ ನ್ಯೂಸ್
09-11-22 07:45 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ದೇಶೀಯ ಬ್ರ್ಯಾಂಡ್ boAt ದೇಶದಲ್ಲಿ ತನ್ನ ವಿನೂತನ ಬ್ಲೂಟೂತ್ ಕಾಲಿಂಗ್ (BT) ಸ್ಮಾರ್ಟ್ವಾಚ್ ಒಂದನ್ನು ಪರಿಚಯಿಸಿದೆ. ಸ್ಪೋರ್ಟಿ ವಿನ್ಯಾಸ, 500-ನಿಟ್ ಸೂಪರ್-ಬ್ರೈಟ್ ಡಿಸ್ಪ್ಲೇ ಮತ್ತು 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೂಡ್ ಹೊಂದಿರುವ ಈ ಹೊಸ ಸ್ಮಾರ್ಟ್ವಾಚ್ ಸಾಧನವನ್ನು boAt Wave Ultima ಎಂದು ಹೆಸರಿಸಲಾಗಿದ್ದು, ಇದು ಕೈ ಸಹಾಯದಿಂದ ಕಾಲ್ ರಿಸೀವ್ ಮಾಡಬಹುದಾದ ಆಯ್ಕೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
boAt Wave Ultima ಸ್ಮಾರ್ಟ್ವಾಚ್ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಹೊಸ boAt Wave Ultima ಸ್ಮಾರ್ಟ್ವಾಚ್ನಲ್ಲಿ 500-ನಿಟ್ ಸೂಪರ್-ಬ್ರೈಟ್ನೆಸ್ ಹೊಂದಿರುವ 1.8-ಇಂಚಿನ ಕರ್ವ್ಡ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್ಪ್ಲೇಯು ಯಾವಾಗಲೂ ಆನ್ ಫಂಕ್ಷನ್ನೊಂದಿಗೆ ಬಂದಿರುವ ಎಡ್ಜ್-ಟು-ಎಡ್ಜ್ ವೈಶಿಷ್ಟ್ಯವನ್ನು ಹೊಂದಿದೆ. ಈ ಸಾಧನದಲ್ಲಿ ಇನ್ ಬ್ಯುಲ್ಟ್ HD ಸ್ಪೀಕರ್ ಮತ್ತು ಹೈ-ಸೆನ್ಸಿವಿಟಿ ಮೈಕ್ರೋಫೋನ್ಗಳನ್ನು ಅಳವಡಿಸಲಾಗಿದ್ದು, ಉತ್ತಮ ಸಂವಹನದ ಬ್ಲೂಟೂತ್ v5.3 ಚಿಪ್ ನೊಂದಿಗೆ ತಡೆರಹಿತವಾಗಿ ಬ್ಲೂಟೂತ್ ಕಾಲಿಂಗ್ (BT) ಸೇವೆ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಈ boAt Wave Ultima ಸ್ಮಾರ್ಟ್ವಾಚ್ ವ್ಯಾಯಾಮ, ಈಜು, ಜಾಗಿಂಗ್, ಯೋಗ ಮತ್ತು ಹೆಚ್ಚಿನ ಸಕ್ರಿಯ ಕ್ರೀಡೆಗಳನ್ನು ಒಳಗೊಂಡಂತೆ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಬೆಂಬಲಿಸಲಿದೆ. ಹಾರ್ಟ್ರೇಟ್ ಮಾನಿಟರ್, ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್ (SpO2) ಮಾಡಲು ಶಕ್ತವಾಗಿರುವ ಈ ಸಾಧನದಲ್ಲಿ ಬಳಕೆದಾರರು ತಮ್ಮ ಒತ್ತಡದ ಮಟ್ಟವನ್ನು ಟ್ರ್ಯಾಕ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಸ್ಮಾರ್ಟ್ವಾಚ್ ಒಂದೇ ಚಾರ್ಜ್ನಲ್ಲಿ 10 ದಿನಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

boAt Wave Ultima ಸ್ಮಾರ್ಟ್ವಾಚ್ನ ಬೆಲೆ ಮತ್ತು ಲಭ್ಯತೆ
ದೇಶದಲ್ಲಿ boAt Wave Ultima ಸ್ಮಾರ್ಟ್ವಾಚ್ ಸಾಧನವನ್ನು 2,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ಬ್ರೈಟ್ ರೆಡ್, ಆಕ್ಟೀವ್ ಬ್ಲಾಕ್ ಮತ್ತು ಟೀಲ್ ಗ್ರೀನ್ ಮೂರು ಬಣ್ಣಗಳಲ್ಲಿ ಮೃದುವಾದ ಸಿಲಿಕೋನ್ ಬ್ಯಾಂಡ್ ಹಾಗೂ IP68 ರೇಟಿಂಗ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿರುವ ಈ ಸಾಧನವನ್ನು ಇ-ಕಾಮರ್ಸ್ ತಾಣ Flipkart ಮತ್ತು boAt ಕಂಪೆನಿಯ ಅಧಿಕೃತ ವೆಬ್ಸೈಟ್ಗಳ ಮೂಲಕ ಖರೀದಿಸಬಹುದು. ಈ ಸ್ಮಾರ್ಟ್ವಾಚ್ ಖರೀದಿಗಾಗಿ ಕಂಪೆನಿಯಿಂದ ಯಾವುದೇ ಬಿಡುಗಡೆ ಕೊಡುಗೆ ನೀಡಲಾಗಿಲ್ಲ.
Boat Wave Ultima, A New Smartwatch Comes To India.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 02:04 pm
HK News Desk
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm