ಬ್ರೇಕಿಂಗ್ ನ್ಯೂಸ್
08-07-22 08:06 pm Source: Vijayakarnataka ಡಿಜಿಟಲ್ ಟೆಕ್
ವಿಶ್ವದಾದ್ಯಂತ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಸುರಕ್ಷಿತವಾಗಿಡಲು ಗೂಗಲ್ ಸಂಸ್ಥೆಯು ತೆಗೆದುಕೊಳ್ಳುವ ಪರಿಣಾಮಕಾರಿ ಕ್ರಮಗಳು ಸಹ ಸೈಬರ್ ಕ್ರಿಮಿಗಳನ್ನು ಹೊಸಕಿಹಾಕಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಡೆವಲಪರ್ಗಳ ರೂಪದಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ತಲುಪುತ್ತಿರುವ ಹಾಗೂ ಬ್ಯಾಂಕ್ OTP ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವ ಹೊಸ ನಾಲ್ಕು ಕಳ್ಳ ಅಪ್ಲಿಕೇಷನ್ಗಳನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಗುರುತಿಸಲಾಗಿದ್ದು, ಈಗಾಗಲೇ 100,000+ ಬಳಕೆದಾರರಿಂದ ಡೌನ್ಲೋಡ್ ಮಾಡಲಾಗಿರುವ ನಾಲ್ಕು ಹೊಸ ದುರುದ್ದೇಶಪೂರಿತ ಅಪ್ಲಿಕೇಶನ್ಗಳನ್ನು ಈಗಲೇ ಡಿಲೀಟ್ ಮಾಡಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಹೌದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ನಾಲ್ಕು ಹೊಸ ದುರುದ್ದೇಶಪೂರಿತ ಅಪ್ಲಿಕೇಶನ್ಗಳನ್ನು ಕಂಡುಹಿಡಿಯಲಾಗಿದ್ದು, ಈ ಅಪ್ಲಿಕೇಶನ್ಗಳಲ್ಲಿ ಜೋಕರ್ ಎಂಬ ಮಾಲ್ವೇರ್ ಪತ್ತೆಯಾಗಿದೆ. ಜೋಕರ್ ಮಾಲ್ವೇರ್ ಸಹಾಯದಿಂದ ಬಳಕೆದಾರರ ಓಟಿಪಿ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವುದನ್ನು ಸೈಬರ್ ತಜ್ಷರು ಕಂಡುಹಿಡಿದಿದ್ದಾರೆ. ಇದಾದ ನಂತರ ಈ ಕಳ್ಳ ಅಪ್ಲಿಕೇಶನ್ಗಳ ಕುರಿತು Google ಸಂಸ್ಥೆಯು ಸಹ ತಿಳಿದು, ಈ ಎಲ್ಲಾ ನಾಲ್ಕು ಅಪ್ಲಿಕೇಷನ್ಗಳನ್ನು ತನ್ನ ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ. ಆದರೆ, ಈಗಾಗಲೇ ಈ ನಾಲ್ಕು ಅಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡಿ ಬಳಸುತ್ತಿರುವ ಗ್ರಾಹಕರು ಈ ಮಾಲ್ವೇರ್-ಸೋಂಕಿತ ಅಪ್ಲಿಕೇಶನ್ಗಳನ್ನು ಈಗಲೇ ಡಿಲೀಟ್ ಮಾಡಿ ಸುರಕ್ಷಿತರಾಗಿರಲು ಕೇಳಿಕೊಳ್ಳಲಾಗಿದೆ.

ಜೋಕರ್ ಮಾಲ್ವೇರ್ ಪತ್ತೆಯಾದ ನಾಲ್ಕು ಅಪ್ಲಿಕೇಶನ್ಗಳು ಇವು.
ಕೆಲವೊಂದು ದುರುದ್ದೇಶಪೂರಿತ ಅಪ್ಲಿಕೇಶನ್ಗಳನ್ನು Play Store ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ಪತ್ತೆಹಚ್ಚಲು ಕಷ್ಟವಾಗುತ್ತದೆ. Google ನಿಂದ ಮಾಡಿದ ಅಪ್ಲಿಕೇಶನ್ಗಳ ಸಾಮಾನ್ಯ ಭದ್ರತಾ ಸ್ಕ್ರೀನಿಂಗ್ ಅನ್ನು ಬೈಪಾಸ್ ಮಾಡಲು ಹ್ಯಾಕರ್ಗಳು ಉತ್ತಮ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ನಿಮ್ಮ Android ಸ್ಮಾರ್ಟ್ಫೋನ್ನಲ್ಲಿ ನೀವು ಈ ಮೇಲಿನ ನಾಲ್ಕು ಅಪ್ಲಿಕೇಶನ್ಗಳಲ್ಲಿ ಯಾವುದನ್ನಾದರೂ ಡೌನ್ಲೋಡ್ ಮಾಡಿದ್ದರೆ, ಕೂಡಲೇ ಡಿಲೀಟ್ ಮಾಡಿಬಿಡಿ. ಗೂಗಲ್ Play Store ನಿಂದಲೂ ಅಪರಿಚಿತ ಡೆವಲಪರ್ಗಳು ಹೋಸ್ಟ್ ಮಾಡಿರುವ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರಿಕೆಯನ್ನು ವಹಿಸಿ. ವಿಶ್ವಾಸಾರ್ಹ ಮತ್ತು ಸುರಕ್ಷಿತ ಎಂದು ನಿಮಗೆ ತಿಳಿದಿರುವ ಕಂಪನಿಗಳು ಅಥವಾ ಸಾಕಷ್ಟು ಜನರು ರಿವ್ಯೂ ಮಾಡಿರುವ ಉತ್ತಮ ಅಪ್ಲಿಕೇಷನ್ಗಳನ್ನು ಮಾತ್ರ ಡೌನ್ಲೋಡ್ ಮಾಡಿ.
Four New Malicious Apps Have Been Discovered On The Google Play Store.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm