ಬ್ರೇಕಿಂಗ್ ನ್ಯೂಸ್
03-06-22 08:42 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಏಪ್ರಿಲ್ 2022ರ ವೇಳೆಗೆ ಶೇ.24% ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಸ್ಯಾಮ್ಸಂಗ್ ಮತ್ತೆ ಮಾರುಕಟ್ಟೆಯ ದಿಗ್ಗಜನಾಗಿ ಹೊರಹೊಮ್ಮಿದೆ. ಟೆಕ್ ದೈತ್ಯ ಆಪಲ್ ಹಾಗೂ ಚೀನಾದ ಸ್ಮಾರ್ಟ್ಫೋನ್ ಕಂಪೆನಿಗಳ ವಿರುದ್ಧ ಸೆಣೆಸಾಡುತ್ತಿರುವ ಸ್ಯಾಮ್ಸಂಗ್ ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶೇ. 24% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದ್ದು, ಜೂನ್ 2017ರ ನಂತರ ಮೊದಲ ಬಾರಿಗೆ ಸ್ಯಾಮ್ಸಂಗ್ ಮತ್ತೆ ಪುಟಿದೆದ್ದಿದೆ.
ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, 2022 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 24 ಪ್ರತಿಶತದಷ್ಟು ವಿಶ್ವ ಸ್ಮಾರ್ಟ್ಫೋನ್ ಮಾರುಕಟ್ಟೆ ಪಾಲನ್ನು ಹೊಂದಿರುವ ಅತ್ಯುತ್ತಮ-ಮಾರಾಟದ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದರೆ, ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಟೆಕ್ ದೈತ್ಯ ಆಪಲ್ ಶೇ. 15% ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಚೀನಾ ಮೂಲದ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶಿಯೋಮಿ ಕಂಪೆನಿ ಶೇ.12 ರಷ್ಟು ಪಾಲನ್ನು ಪಡೆದಿದೆ.

ವಿಶ್ವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಏಪ್ರಿಲ್ 2017 ರ ನಂತರ ಸ್ಯಾಮ್ಸಂಗ್ ಜಾಗತಿಕ ಪ್ರಾಬಲ್ಯದ ಈ ಮಟ್ಟವನ್ನು ತಲುಪಿಲ್ಲ. ಆಗ, ಸ್ಯಾಮ್ಸಂಗ್ ಕಂಪೆನಿಯು ಶೇ.25% ಮಾರುಕಟ್ಟೆ ಪಾಲನ್ನು ಹೊಂದಿತ್ತು. ಇದೀಗ ಏಪ್ರಿಲ್ 2022 ರಲ್ಲಿ ಸ್ಯಾಮ್ಸಂಗ್ ಆ ದಾಖಲೆಯನ್ನು ಸರಿಗಟ್ಟಲು ಕೇವಲ 1% ರಷ್ಟು ಹಿಂದುಳಿದಿದೆ. ಆದರೆ, ಸ್ಯಾಮ್ಸಂಗ್ ತನ್ನ ಬಜೆಟ್ ಸ್ಮಾರ್ಟ್ಫೋನ್ಗಳ ಮೂಲಕ ಇದನ್ನು ಕೂಡ ಸಾಧಿಸಬಹುದು ಎಂದು ಕೌಂಟರ್ಪಾಯಿಂಟ್ ರಿಸರ್ಚ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸ್ಯಾಮ್ಸಂಗ್ ಕಂಪೆನಿಯ ಈ ಯಶಸ್ಸಿನ ಹಿಂದಿನ ಮೂಲ ಕಾರಣ Galaxy S22 ಸರಣಿ ಮತ್ತು Galaxy A ಸ್ಮಾರ್ಟ್ಫೋನ್ಗಳು ಎಂದು ಕೌಂಟರ್ಪಾಯಿಂಟ್ ರಿಸರ್ಚ್ ತಿಳಿಸಿದೆ. ಮಧ್ಯಮ ಶ್ರೇಣಿ ಹಾಗೂ ಕಡಿಮೆ ಬೆಲೆಯ Galaxy S22 ಮತ್ತು Galaxy A ಸ್ಮಾರ್ಟ್ಫೋನ್ಗಳು ಕಂಪೆನಿ ಉತ್ತಮ ಉತ್ಪನ್ನಗಳಾಗಿರುವುದರಿಂದ ಸ್ಯಾಮ್ಸಂಗ್ ಕಂಪೆನಿಯು ಧನಾತ್ಮಕ ಫಲಿತಾಂಶವನ್ನು ಕಂಡಿದೆ. ಈ ಪ್ರಾಬಲ್ಯ ಮತ್ತಷ್ಟು ಮುಂದುವರೆಯಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಹಲವು ವರ್ಷಗಳ ನಂತರ ಸ್ಯಾಮ್ಸಂಗ್ ಇಂತಹ ಯಶಸ್ಸನ್ನು ಪಡೆಯಲು ಭಾರತದ ಮೊಬೈಲ್ ಮಾರುಕಟ್ಟೆಯು ಹೆಚ್ಚು ಪ್ರಭಾವ ಬೀರಿದೆ. ಭಾರತ, ಲ್ಯಾಟಿನ್ ಅಮೇರಿಕಾ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಯಾಮ್ಸಂಗ್ನ ಕೊಡುಗೆಗಳು ಕಂಪೆನಿ ಅಸ್ತಿತ್ವವನ್ನು ವಿಸ್ತರಿಸಲು ಸಹಾಯ ಮಾಡಿದೆ. 2022 ರ ಅಂತ್ಯದ ವೇಳೆಗೆ ಫೀಚರ್ ಫೋನ್ ಮಾರುಕಟ್ಟೆಯನ್ನು ತ್ಯಜಿಸುವ ಉದ್ದೇಶವನ್ನು ಹೊಂದಿರುವುದಾಗಿ ಸ್ಯಾಮ್ಸಂಗ್ ಸಮೂಹವು ಘೋಷಿಸಿದ ಸ್ವಲ್ಪ ಸಮಯದಲ್ಲಿ ಇಂತಹದೊಂದು ಸಿಹಿಸುದ್ದಿ ಸಿಕ್ಕಿದೆ.
Samsung Tops Its Highest Global Smartphone Market Share In 5 Years.
30-07-26 10:28 am
HK News Staffer
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
30-07-26 12:18 pm
HK News Staffer
ಮಂಗಳೂರು ಪೊಲೀಸರಿಂದ 82 ಕೋಟಿ ರೂ. ಮೌಲ್ಯದ ಡ್ರಗ್ಸ್...
29-07-26 10:45 pm
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm
ಒಮಾನ್ನಲ್ಲಿ ಕೆಲಸದ ವೇಳೆ ದುರಂತ; ವಾಹನದ ಅಡಿಗೆ ಸಿಲ...
29-07-26 05:27 pm