ಬ್ರೇಕಿಂಗ್ ನ್ಯೂಸ್
13-08-25 05:40 pm Udupi Correspondent ಕ್ರೈಂ
ಕುಂದಾಪುರ, ಆ.13 : ವಾಟ್ಸ್ಆ್ಯಪ್ ಗ್ರೂಪ್ಗೆ ವ್ಯಕ್ತಿಯೊಬ್ಬರನ್ನು ಸೇರಿಸಿ ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿ ಬಳಿಕ ಅವರ ಬ್ಯಾಂಕ್ ಖಾತೆಯಿಂದಲೇ ಸುಮಾರು 10 ಲಕ್ಷ ರೂ. ಲಪಟಾಯಿಸಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ.
ಕಿರಿಮಂಜೇಶ್ವರ ಗ್ರಾಮದ ನಾಗೂರು ನಿವಾಸಿ ಅಲ್ತಾಫ್ ಹುಸೇನ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬಂದಿರುವ ಲಿಂಕ್ ಅನ್ನು ತೆರೆದಾಗ ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿದ್ದರು. ಗ್ರೂಪ್ನಲ್ಲಿದ್ದ ಪರಿನಿಥಿ ಜೈನ್ ಎಂಬ ಮಹಿಳೆ ತಮ್ಮ ಕಂಪೆನಿಯ ಬಗ್ಗೆ ಹೇಳಿಕೊಂಡು ವಿಳಾಸ, ದೂರವಾಣಿ ಸಂಖ್ಯೆ ನೀಡಿ ವಾಟ್ಸ್ಆ್ಯಪ್ ಮೂಲಕ ಷೇರು ಮಾರುಕಟ್ಟೆ ಬಗ್ಗೆ ನಿರಂತರ ಮಾಹಿತಿ ನೀಡಿದ್ದಳು. ಅನುಪ್ ತಿವಾರಿ ಎಂಬಾತನೂ ಪ್ರತಿನಿತ್ಯ ಪ್ರಮುಖ ಷೇರುಗಳ ಮಾಹಿತಿ ಒದಗಿಸುತ್ತಿದ್ದ.
ಕೆಲವು ದಿನಗಳ ಬಳಿಕ ಒಂದು ವೆಬ್ಸೈಟ್ ವಿಳಾಸ ಕಳುಹಿಸಿ ಅದರಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿ ಲಾಗಿನ್ ಐ.ಡಿ. ಮತ್ತು ಪಾಸ್ ವರ್ಡ್ ನೀಡಿದ್ದರು. ಇದಾದ ಬಳಿಕ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗೆ ಅಲ್ತಾಫ್ ಅವರು ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 10,15,000 ರೂ. ಪಾವತಿಸಿದ್ದರು. ಅವರ ವೆಬ್ ಸೈಟ್ನಲ್ಲಿ ಹೂಡಿಕೆ ಮಾಡಿದ ಹಣ ಮತ್ತು ಅದರ ಲಾಭಾಂಶದ ಸೇರಿ ದುಪ್ಪಟ್ಟು ಆಗಿ ಒಟ್ಟು ಮೊತ್ತ 75,42,343 ಇದೆ ಎಂದು ತೋರಿಸುತ್ತಿತ್ತು. ಆ ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ವೆಬ್ ಸೈಟ್ ಖಾತೆ ಬ್ಲಾಕ್ ಆಗಿತ್ತು.
ಈ ಬಗ್ಗೆ ಪರಿನಿಥಿ ಜೈನ್ ಅವರಲ್ಲಿ ಪ್ರಶ್ನಿಸಿದಾಗ ಈ ಮೊತ್ತದಲ್ಲಿ ಶೇ. 20ರಷ್ಟು ಕಮಿಷನ್ ಕಂಪೆನಿಗೆ ನೀಡಬೇಕು ಎಂದಿದ್ದಾಳೆ. ಹೂಡಿಕೆ ಮಾಡಿರುವ ಹಣದಲ್ಲಿ ಕಮಿಷನ್ ಕಡಿತ ಮಾಡಿ ಉಳಿದ ಹಣ ನೀಡುವಂತೆ ಅಲ್ತಾಫ್ ತಿಳಿಸಿದರೆ, ಅದಕ್ಕೆ ಪರಿಮಿಥಿ ಜೈನ್ ಒಪ್ಪದೇ ಇದ್ದಾಗ ಅನುಮಾನಗೊಂಡು ಕಂಪೆನಿಯ ವಿಳಾಸ ಇದ್ದ ಬೆಂಗಳೂರಿನ ಜಾಗಕ್ಕೆ ಹೋಗಿ ವಿಚಾರಿಸಿದರು. ಅಲ್ಲಿ ಅ ಕಂಪೆನಿಯೇ ಇಲ್ಲ ಎಂದು ತಿಳಿದಾಗ ತಾನು ಮೋಸ ಹೋಗಿರುವುದು ಖಚಿತವಾಗಿದ್ದು, ನ್ಯಾಯ ಒದಗಿಸುವಂತೆ ಬೈಂದೂರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
A man from Uppunda in Byndoor taluk lost over ₹10 lakh after being lured into a fake stock market investment scheme through a WhatsApp group. The scam came to light when he went to the company’s listed address in Bengaluru, only to discover it did not exist.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 05:34 pm
HK News Staffer
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm