ಬ್ರೇಕಿಂಗ್ ನ್ಯೂಸ್
24-07-25 12:01 pm HK News Desk ಕ್ರೈಂ
ಅಹ್ಮದಾಬಾದ್, ಜುಲೈ 24 : ನಿಷೇಧಿತ ಅಲ್ಖೈದಾ ಭಯೋತ್ಪಾದಕ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ನಾಲ್ವರು ಶಂಕಿತ ಉಗ್ರರನ್ನು ಗುಜರಾತ್ ಉಗ್ರ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ಬಂಧಿತರನ್ನು ದಿಲ್ಲಿಯ ಮೊಹಮ್ಮದ್ ಪೈಕ್, ಗುಜರಾತ್ ನ ಅಹಮದಾಬಾದ್ ಮೂಲದ ಮೊಹಮ್ಮದ್ ಫರ್ದೀನ್, ಅರಾವಳಿ ಜಿಲ್ಲೆಯ ಸೈಫುಲ್ಲಾ ಖುರೇಶಿ ಮತ್ತು ಉತ್ತರಪ್ರದೇಶದ ನೋಯ್ಡಾದ ಜೀಶನ್ ಅಲಿ ಎಂದು ಗುರುತಿಸಲಾಗಿದೆ.
'ಬಂಧಿತರು 'ಭಾರತ ಉಪಖಂಡದಲ್ಲಿ ಅಲ್ಖೈದಾ' (ಎಕ್ಯೂಐಎಸ್) ಸಂಘಟನೆ ಜತೆಗೆ ಗುರುತಿಸಿಕೊಂಡಿದ್ದರು. ಇವರು ಮೂಲ ಸಂಘಟನೆ ಅಲ್ಖೈದಾ ಜತೆಗೆ ನಿರಂತರವಾಗಿ ಸಂಪರ್ಕ ಹೊಂದಿದ್ದರು. ಹಲವು ದಿನಗಳಿಂದ ಬಂಧಿತರ ಮೇಲೆ ಕಣ್ಣಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಭಯೋತ್ಪಾದನೆ ನಿಗ್ರಹ ದಳದ ಡಿಐಜಿ ಸುನೀಲ್ ಜೋಷಿ ಮಾಹಿತಿ ನೀಡಿದ್ದಾರೆ.
ಇವರು ಜಾಲತಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಅಲ್ಲದೆ, ಪಾಕಿಸ್ತಾನಿಗಳ ಜೊತೆಗೆ ನಿರಂತರ ಕನೆಕ್ಷನ್ ಇಟ್ಟುಕೊಂಡಿದ್ದರು. ಭಾರತದಲ್ಲಿ ಆಪರೇಶನ್ ಸಿಂಧೂರ್ ವಿರುದ್ಧ ಯುವ ಜನರನ್ನು ಎತ್ತಿಕಟ್ಟುವುದು, ಆಮೂಲಕ ದೇಶದ ಆಂತರಿಕ ಭದ್ರತೆಗೆ ಅಪಾಯ ತರುವುದು, ಅಲ್ಲದೆ ದೇಶದಲ್ಲಿ ಷರಿಯಾ ಕಾನೂನು ತರುವ ಉದ್ದೇಶ ಹೊಂದಿದ್ದರು. ದಾಳಿ ನಡೆಸಿದ ವೇಳೆ ಮೊಹಮ್ಮದ್ ಪೈಕ್ ಮನೆಯಲ್ಲಿ ಜಿಹಾದಿ ಚಟುವಟಿಕೆ ಪ್ರಸಾರದ ಕುರಿತ ಪುಸ್ತಕ ಸಾಮಗ್ರಿಗಳು ಪತ್ತೆಯಾಗಿವೆ. ಸದ್ಯ ಅಲ್ ಕೈದಾ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಕ್ರಿಯವಾಗಿದ್ದು ಭಾರತದಲ್ಲೂ ಪ್ರತಿಗಾಮಿ ಚಟುವಟಿಕೆಗಾಗಿ ಸಂಘಟನೆಯನ್ನು ಬೆಳೆಸುವ ಬಗ್ಗೆ ಟಾರ್ಗೆಟ್ ಇರಿಸಿದ್ದರು.
2024ರ ಮೇ 20ರಂದು ಅಹಮದಾಬಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಉಗ್ರರನ್ನು ಎಟಿಎಸ್ ಬಂಧಿಸಿತ್ತು. 2023ರಲ್ಲಿ ಅಲ್ಖೈದಾ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಬಂಧಿತರು ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ವಿವಿಧ ವೇದಿಕೆ ಮತ್ತು ಆ್ಯಪ್ ಗಳ ಮೂಲಕ ಆಲ್ ಖೈದಾ ಸಂಘಟನೆಯ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿದ್ದರು ಎನ್ನಲಾಗಿದೆ.
In a major counter-terror operation, the Gujarat Anti-Terrorism Squad (ATS) has arrested four suspected operatives allegedly linked to the banned terrorist organization Al-Qaeda in the Indian Subcontinent (AQIS). The suspects have been identified as Mohammad Paik from Delhi, Mohammad Fardeen from Ahmedabad, Saifullah Qureshi from Aravalli district in Gujarat, and Zeeshan Ali from Noida, Uttar Pradesh.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am