S T Srinivas, Ankola Port Scam: ಅಂಕೋಲಾ ಕೇಣಿಯಲ್ಲಿ ಬಂದರು ನಿರ್ಮಾಣಕ್ಕೆ ಜಮೀನು ; ಜೆಎಸ್ ಡಬ್ಲ್ಯು ಕಂಪನಿಗೆ ಹತ್ತು ಕೋಟಿ ವಂಚಿಸಿದ ತುಮಕೂರಿನ ಕಾಂಗ್ರೆಸ್ ಮುಖಂಡ ಬಂಧನ 

20-07-25 08:52 pm       HK News Desk   ಕ್ರೈಂ

ಅಂಕೋಲಾ ತಾಲೂಕಿನ ‌ಕೇಣಿಯಲ್ಲಿ ಬಂದರು ನಿರ್ಮಾಣಕ್ಕೆ ಜಾಗ ತೆಗೆಸಿಕೊಡುತ್ತೇನೆ ಎಂದು ಹೇಳಿ ಹತ್ತು ಕೋಟಿ ರೂ. ಪಡೆದು ವಂಚನೆ ಎಸಗಿದ ತುಮಕೂರು ಜಿಲ್ಲೆ ಮೂಲದ ಕಾಂಗ್ರೆಸ್ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.‌ 

ಕಾರವಾರ, ಜುಲೈ 20 : ಅಂಕೋಲಾ ತಾಲೂಕಿನ ‌ಕೇಣಿಯಲ್ಲಿ ಬಂದರು ನಿರ್ಮಾಣಕ್ಕೆ ಜಾಗ ತೆಗೆಸಿಕೊಡುತ್ತೇನೆ ಎಂದು ಹೇಳಿ ಹತ್ತು ಕೋಟಿ ರೂ. ಪಡೆದು ವಂಚನೆ ಎಸಗಿದ ತುಮಕೂರು ಜಿಲ್ಲೆ ಮೂಲದ ಕಾಂಗ್ರೆಸ್ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.‌ 

ತುಮಕೂರು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಎಸ್.ಟಿ ಶ್ರೀನಿವಾಸ್ ಎಂಬಾತನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದು ಅಂಕೋಲಾದಲ್ಲಿ ಬಂದರು ನಿರ್ಮಾಣಕ್ಕೆ ಜಾಗ ತೆಗೆಸಿಕೊಡುವುದಾಗಿ ಹೇಳಿ ಜೆ ಎಸ್ ಡಬ್ಲ್ಯೂ ಕಂಪನಿಯಿಂದ ಹತ್ತು ಕೋಟಿ ಪಡೆದು ವಂಚನೆ  ಮಾಡಿರುವ ಆರೋಪ ಕೇಳಿಬಂದಿದೆ. ಮೂವರು ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಪ್ರಕರಣ ದಾಖಲಾದ ಒಂದು ವರ್ಷದಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಮುಖ ಆರೋಪಿ ಅಂಕೋಲಾದ ಅಜಿತ್ ನಾಯಕ್ ಮತ್ತು ಗುರುಪ್ರಸಾದ್ ರೇವಣಕರ್ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಹತ್ತು ಕೋಟಿ ವಂಚನೆಯಾದ ಬಗ್ಗೆ ಆರೋಪಿಗಳ ವಿರುದ್ಧ ಕಂಪನಿಯ ಪ್ರಾಜೆಕ್ಟ್ ಇನ್ಚಾರ್ಜ್ ಭರಮಪ್ಪ ದೂರು ನೀಡಿದ್ದಾರೆ.

A prominent Congress leader from Tumakuru district has been arrested by Karwar police for allegedly defrauding JSW Company of ₹10 crore under the pretext of securing land for a proposed port construction in Keni, Ankola taluk.