ಬ್ರೇಕಿಂಗ್ ನ್ಯೂಸ್
25-03-21 10:58 am Source: MYKHEL ಕ್ರೀಡೆ
ಬೆಂಗಳೂರು: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಈ ಬಾರಿ ಸಿಎಸ್ಕೆಗೆ ಆರಿಸಲ್ಪಟ್ಟಾಗ ತಂಡದ ನಾಯಕ ಎಂಎಸ್ ಧೋನಿ ಹೇಳಿದ ಮಾತನ್ನು ಉತ್ತಪ್ಪ ಸ್ಮರಿಸಿಕೊಂಡಿದ್ದಾರೆ.
2017ರ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಎಂಎಸ್ ಧೋನಿ ನಾಯಕರಾಗಿದ್ದಾಗ ರಾಬಿನ್ ಉತ್ತಪ್ಪ ಕೂಡ ತಂಡದಲ್ಲಿದ್ದರು. ಹೀಗಾಗಿ ಮತ್ತೆ ಸಿಎಸ್ಕೆ ನಾಯಕತ್ವದ ತಂಡ ಸೇರಿಕೊಂಡ ಬಗ್ಗೆ ಉತ್ತಪ್ಪ ಮಾತನಾಡಿದ್ದಾರೆ. ತಂಡ ಸೇರಿದ ಕೂಡಲೇ ಧೋನಿ ಹೇಳಿದ್ದೇನೆಂದು ಇಎಸ್ಪಿಎನ್ ಕ್ರಿಕ್ಇನ್ಫೋ ಜೊತೆ ಉತ್ತಪ್ಪ ಹೇಳಿಕೊಂಡಿದ್ದಾರೆ. 'ನನಗೆ ಕರೆ ಮಾಡಿದ ಧೋನಿ, ನಿನ್ನನ್ನು ಈ ತಂಡಕ್ಕೆ ಕರೆತರುವಲ್ಲಿ ನನ್ನ ನಿರ್ಧಾರವೇನಿಲ್ಲ. ಇದನ್ನು ನಿನಗೆ ನಾನು ತಿಳಿಸಬಯಸುತ್ತೇನೆ. ಅದು ನಮ್ಮ ಲೀಡರ್ಶಿಪ್ ಗುಂಪಿನ ನಿರ್ಧಾರ. ನಿನ್ನ ಸ್ವಂತ ಸಾಮರ್ಥ್ಯ, ಕೌಶಲಗಳೊಂದಿಗೆ ನಿನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ಎಲ್ಲರಲ್ಲೂ ಹೇಳಿದ್ದೆ. ಯಾಕೆಂದರೆ ಧೋನಿ ಇದ್ದಿದ್ದಕ್ಕೆ ನಿನ್ನನ್ನು ಸಿಎಸ್ಕೆಗೆ ಆರಿಸಲಾಯ್ತು ಅನ್ನೋ ಮಾತು ನಾಳೆ ಬರಬಾರದು ಅಲ್ವಾ?' ಎಂದು ಧೋನಿ ಹೇಳಿರುವುದಾಗಿ ಉತ್ತಪ್ಪ ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಉತ್ತಪ್ಪ, 'ಪ್ರಾಮಾಣಿಕತೆ ಇದ್ದವರಲ್ಲಿ ಈ ನಡೆ ಅದ್ಭುತವಾದುದು ಅಲ್ಲವೆ? ನಾನು ಖಂಡಿತವಾಗಿಯೂ ಇದನ್ನು ಮೆಚ್ಚಿಕೊಳ್ಳುತ್ತೇನೆ. ನನ್ನ ಸ್ವಂತ ಕೌಶಲ್ಯದಿಂದ, ನನ್ನ ಸ್ವಂತ ವಿಶ್ವಾಸಾರ್ಹತೆಯಿಂದ ನಾನು ಸಿಎಸ್ಕೆಗೆ ಬಂದಿದ್ದೇನೆ ಅನ್ನೋದು ನನಗೆ ಗೊತ್ತು. ಇದೇ ಕಾರಣಕ್ಕೆ ನಾನು ಧೋನಿಯನ್ನು ಪ್ರೀತಿಸುತ್ತೇನೆ,' ಎಂದಿದ್ದಾರೆ.
This News Article Is A Copy Of MYKHEL
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm