ಬ್ರೇಕಿಂಗ್ ನ್ಯೂಸ್
25-02-21 11:22 am Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗಾಗಲೇ ಪ್ಲೇ ಆಫ್ ತಲಪುವಲ್ಲಿ ವಿಫಲವಾಗಿರುವ ಜೆಮ್ಷೆಡ್ಪುರ ಮತ್ತು ಬೆಂಗಳೂರು ಎಫ್ ಸಿ ತಂಡಗಳು ಗುರುವಾರ ನಡೆಯಲಿರುವ ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದು ನಿರ್ಗಮಿಸುವ ಗುರಿಹೊಂದಿವೆ. ಋತುವಿನುದ್ದಕ್ಕೂ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾದ ಕಾರಣ ಇತ್ತಂಡಗಳು ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾದವು. ಓವೆನ್ ಕೊಯ್ಲ್ ಅವರ ಪಡೆ ಈಗ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು ಬೆಂಗಳೂರಿಗಿಂತ ಎರಡು ಅಂಕ ಮೇಲುಗೈ ಸಾಧಿಸಿದೆ.
ನಾಳೆ ಪಂದ್ಯದಲ್ಲಿ ಕನಿಷ್ಠ ಡ್ರಾ ಕಂಡರೂ ಆರನೇ ಸ್ಥಾನ ಉಳಿದುಕೊಳ್ಳಲಿದೆ. ಸೋಲನುಭವಿಸಿದರೆ ಆ ಸ್ಥಾನ ಬೆಂಗಳೂರಿನ ಪಾಲಾಗಲಿದೆ. ಮುಂಬೈ ಸಿಟಿ ಎಫ್ ಸಿ ತಂಡದ ವಿರುದ್ಧ ತೋರಿದ ಪ್ರದರ್ಶನವನ್ನೇ ಮುಂದುವರಿಸುವ ಗುರಿಯೊಂದಿಗೆ ತಂಡ ಅಂಗಣಕ್ಕಿಳಿಯಲಿದೆ.

ಉತ್ತಮ ಪ್ರದರ್ಶನ ನೀಡಲಿದ್ದೇವೆ
"ನಾವು ಮುಂಬೈ ವಿರುದ್ಧ ತೋರಿದ ಪ್ರದರ್ಶನವನ್ನೇ ಪುನರಾವರ್ತನೆ ಮಾಡಲಿದ್ದೇವೆ," ಎಂದು ಕೊಯ್ಲ್ ಹೇಳಿದ್ದಾರೆ. " ನಾವು ಪ್ಲೇ ಆಫ್ ಸ್ಥಾನದ ಹತ್ತಿರ ಬಂದಿದ್ದೇವೆ, ಈ ಉತ್ತಮ ಪ್ರದರ್ಶನ ನೀಡಲಿದ್ದೇವೆ,ಬೆಂಗಳೂರಿಗೆ ಈಗಲೂ ಎಎಫ್ ಸಿ ಕಪ್ ಆಡುವ ಅವಕಾಶವಿದೆ. ಇದರಿಂದಾಗಿ ಅವರು ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದ್ದೇ ಇರುತ್ತದೆ. ಆದ್ದರಿಂದ ನಾವು ಸವಾಲಿಗೆ ಸಜ್ಜಾಗಿರಬೇಕು," ಎಂದು ಹೇಳಿದರು.

ಬೆಂಗಳೂರು ವಿಫಲ ಪ್ರದರ್ಶನ
ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾಗಿತ್ತು. ಕಾರ್ಲಸ್ ಕ್ಬಾಡ್ರಾಟ್ ಅವರು ಲೀಗ್ ನ ಮಧ್ಯದಲ್ಲೇ ತಂಡವನ್ನು ತೊರೆದಾಗಿನಿಂದ ಬೆಂಗಳೂರು ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿತ್ತು. ಜಯದ ಕೊರತೆಯ ನಡುವೆಯೂ ಮಧಯಂತರ ಕೋಚ್ ನೌಶಾದ್ ಮೂಸಾ ತಂಡದ ಘನತೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು.

ಪ್ಲೇಆಫ್ಗೆ ಹೋರಾಡಿದ್ದೆವು
""ತಂಡದ ಪ್ರದರ್ಶನದಲ್ಲಿ ಸ್ಥಿರತೆ ಇರಲಿಲ್ಲ. ಆದರೆ ಯಾವಾಗಲೂ ಧನಾತ್ಮಕ ಅಂಶ ಇರುತ್ತಿತ್ತು, ನಮ್ಮಲ್ಲಿರುವ ಶಕ್ತಿಯಲ್ಲೇ ನಾವು ಪ್ಲೇ ಆಫ್ ಹಂತ ತಲುಪಲು ಹೋರಾಡಿದೆವು. ನಾವು ಯಾವಾಗಲೂ ಜಯಕ್ಕಾಗಿ ಹೋರಾಡುತ್ತಿದ್ದೇವು, ಪ್ರತಿಯೊಂದು ತಂಡವು ನಮ್ಮದು ಉತ್ತಮ ತಂಡವೆಂದು ಹೇಳುತ್ತಿತ್ತು. ನಾವು ಯಾವಾಗಲೂ ನಮ್ಮಿಂದ ಉತ್ತಮವಾದುದನ್ನೇ ನೀಡಲು ಯತ್ನಿಸುತ್ತಿದ್ದೆವು," ಎಂದರು. ಗಾಯಗೊಂಡಿರುವ ಬಿಸ್ವಾಸ್ ದಾರ್ಜೀ ಮತ್ತು ಅಮಾನತುಗೊಂಡಿರುವ ಆಶಿಕ್ ಕರುನಿಯಾನ್ ನಾಳೆಪ ಪಂದ್ಯದಲ್ಲಿ ಆಡುತ್ತಿಲ್ಲ. ಜೆಮ್ಷೆಡ್ಪುರ ತಂಡದಲ್ಲಿ ನೆರಿಜಸ್ ವಾಸ್ಕಿಸ್ ನಾಳೆಯ ಪಂದ್ಯದಲ್ಲಿ ಆಡುತ್ತಿಲ್ಲ.
This News Article is a Copy of MYKHEL
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm