ಬ್ರೇಕಿಂಗ್ ನ್ಯೂಸ್
08-02-21 03:56 pm Source: MYKHEL Sadashiva ಕ್ರೀಡೆ
ಚೆನ್ನೈ: ಇಂಗ್ಲೆಂಡ್ನ ಯುವ ಆಫ್ ಸ್ಪಿನ್ನರ್ ಡಾಮ್ ಬೆಸ್ ಗೆ ಭಾರತ ಪ್ರವಾಸ ಹೆಚ್ಚು ಅವಿಸ್ಮರಣೀಯವಾಗಿರಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್ನ 3ನೇ ದಿನದಾಟದ ವೇಳೆ ಬೆಸ್ 55 ರನ್ಗೆ 4 ವಿಕೆಟ್ ಮುರಿದಿದ್ದರು.
23ರ ಹರೆಯದ ಡೊಮಿನಿಕ್ ಬೆಸ್, 23 ಎಸೆತಗಳಲ್ಲಿ ಒಟ್ಟು 4 ವಿಕೆಟ್ ಮುರಿದಿದ್ದರು. ಅದರಲ್ಲಿ ಸಿಕ್ಕಿದ ಮೊದಲ ವಿಕೆಟ್ ಎಂದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರದ್ದು. 24.4ನೇ ಓವರ್ನಲ್ಲಿ ಬೆಸ್ ಎಸೆತಕ್ಕೆ ಕೊಹ್ಲಿ, ಆಲ್ಲಿ ಪೋಪ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಆಗ ಕೊಹ್ಲಿ ಕೇವಲ 11 ರನ್ ಗಳಿಸಿದ್ದರು. ಭಾನುವಾರ (ಫೆಬ್ರವರಿ 7) 3ನೇ ದಿನದಾಟ ಮುಕ್ತಾಯದ ಬಳಿಕ ಮಾತನಾಡಿದ ಡಾಮ್ ಬೆಸ್, 'ನನ್ನ ವೃತ್ತಿ ಬದುಕಿನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ನನಗೆ ಅತೀ ಹೆಚ್ಚು ತೃಪ್ತಿ ನೀಡಿದ ವಿಕೆಟ್. ಕೊಹ್ಲಿ ಖಂಡಿತಾ ಒಬ್ಬ ಬೆಸ್ಟ್ ಪ್ಲೇಯರ್. ಆತ ತುಂಬಾ ವಿಶೇಷ. ಅದಕ್ಕಿಂತಲೂ ನಾನು ವಿಕೆಟ್ ಪಡೆದಿದ್ದು ಖುಷಿ ನೀಡಿದೆ,' ಎಂದು ಹೇಳಿದ್ದಾರೆ.
ಭಾನುವಾರ 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ದ್ವಿಶತಕದ ಕೊಡುಗೆಯೊಂದಿಗೆ 190.1 ಓವರ್ಗೆ 578 ರನ್ ಗಳಿಸಿದ್ದರೆ, ಮೊದಲ ಇನ್ನಿಂಗ್ಸ್ ಆಡುತ್ತಿರುವ ಭಾರತ 74 ಓವರ್ಗೆ 6 ಪ್ರಮುಖ ವಿಕೆಟ್ ಕಳೆದು 257 ರನ್ ಪೇರಿಸಿತ್ತು.
This News Article is a Copy of MYKHEL
17-04-26 01:39 pm
HK News Staffer
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
ಆದಿಚುಂಚನಗಿರಿಯಲ್ಲಿ 80 ಕೋಟಿ ವೆಚ್ಚದ ಮಂದಿರ ಉದ್ಘಾಟ...
15-04-26 07:05 pm
17-04-26 11:27 am
HK News Staffer
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
17-04-26 12:33 pm
HK News Staffer
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
16-04-26 10:36 pm
HK News Staffer
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am
ಯೋಗೀಶಗೌಡ ಕೊಲೆ ಕೇಸಲ್ಲಿ ಕಾಂಗ್ರೆಸ್ ಶಾಸಕ ಅಪರಾಧಿ ;...
15-04-26 11:40 pm