ಬ್ರೇಕಿಂಗ್ ನ್ಯೂಸ್
15-12-20 04:17 pm Source: MYKHEL ಕ್ರೀಡೆ
ಗೋವಾ: ಜೆಮ್ಷೆಡ್ಪುರ ಎಫ್ ಸಿ ಪರ ನೆರಿಜಸ್ ವಾಸ್ಕಿಸ್ (9ನೇ ನಿಮಿಷ) ಹಾಗೂ ಮುಂಬೈ ಸಿಟಿ ಪರ ಬಾರ್ಥಲೋಮ್ಯೊ ಒಗ್ಬಚೆ (15ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 28ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು. ನಿರೀಕ್ಷೆಯಂತೆ ಮುಂಬೈ ಸಿಟಿ ಹಾಗೂ ಜೆಮ್ಷೆಡ್ಪುರ ತಂಡಗಳ ನಡುವಿನ ಪ್ರಥಮಾರ್ಧ ಅತ್ಯಂತ ರೋಚಕವಾಗಿ ನಡೆಯಿತು. ಆಕ್ರಮಣಕಾರಿ ಆಟವಾಡಿದ ಇತ್ತಂಡಗಳಿಗೆ ಸಮಬಲದ ಯಶಸ್ಸು.
ಬಾರ್ಥಲೋಮ್ಯೋ ಒಗ್ಬಚೆ ಮಾಡಿದ ಪ್ರಮಾದದಿಂದಾಗಿ ಜೆಎಫ್ ಸಿ 9ನೇ ನಿಮಿಷದಲ್ಲಿ ಗೊಲು ಗಳಿಸಿ ಮುನ್ನಡೆಯಿತು. ನೆರಿಜಸ್ ವಾಸ್ಕಿಸ್ ಗಳಿಸಿ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಪಂದ್ಯದ ಆರಂಭದಲ್ಲಿ ಸಾಮಾನ್ಯ ಪಾಸ್ ಗಳು ಉದಾಸೀನದಿಂದ ಕೂಡಿರುತ್ತದೆ. ಒಗ್ಬಚೆ ನೀಡಿದ ಪಾಸ್ ಅದೇ ರೀತಿಯಿಂದ ಕೂಡಿತ್ತು.
ಜಾಕಿಚಾಂದ್ ಸಿಂಗ್ ಈ ಪಾಸನ್ನು ನಿಯಂತ್ರಿಸಿದರು. ವೇಗದಲ್ಲಿ ಚೆಂಡನ್ನು ಮುನ್ನಡೆಸಿದ ಸಿಂಗ್ ಪೆನಾಲ್ಟಿ ವಲಯಕ್ಕೆ ಚೆಂಡನ್ನು ಪಾಸ್ ಮಾಡಿದರು. ಸಮಯ ಹಾಗೂ ಅಂತರ ಎರಡರ ಸದುಪಯೋಗ ಪಡೆದ ವಾಸ್ಕಿಸ್ ಸುಲಭವಾಗಿ ಗೋಲು ಗಳಿಸಿದರು.
ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ ಜೆಎಫ್ ಸಿ ಯ ಈ ಮುನ್ನಡೆಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಜೆಎಫ್ ಸಿ ಗೋಲು ಗಳಿಸುವಲ್ಲಿ ಕಾರಣರಾಗಿದ್ದ ಒಗ್ಬಚೆ ತಮ್ಮ ತಂಡಕ್ಕೆ ನೆರವಾಗಿ ಆ ನೋವನ್ನು ಕೂಡಲೇ ಮರೆಯುವಂತೆ ಮಾಡಿದರು. ಲೆ ಫ್ರಾಂಡೆ ಅವರ ಕಾರ್ನರ್ ಕಿಕ್ ಬಿಪಿನ್ ಸಿಂಗ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಬಾರ್ಥಲೋಮ್ಯೊ ಒಗ್ಬಚೆಗೆ ನೀಡಿದರು. ಒಗ್ಬಚೆ ಎದುರಾಳಿ ತಂಡದ ಗೋಲ್ ಕೀಪರ್ ಟಿ ಪಿ ರೆಹನೇಶ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಐಟರ್ ಮನ್ರಾಯ್ ಅವರು ಎರಡನೇ ಬಾರಿಗೆ ರೆಡ್ ಹಳದಿ ಕಾರ್ಡ್ ಗಳಿಸಿ ರೆಡ್ ಕಾರ್ಡ್ ಮೂಲಕ ಅಂಗಣದಿಂದ ಹೊರನಡೆದದ್ದು ಟಾಟಾ ಪಡೆಗೆ ತುಂಬಲಾರದ ನಷ್ಟವಾಯಿತು. ಕೇವಲ 10 ಮಂದಿ ಆಟಗಾರರಿದ್ದರೂ ಜೆಎಫ್ ಸಿ ಉತ್ತಮ ರೀತಿಯಲ್ಲಿ ಹೋರಾಟ ನೀಡಿತು.
This News Article is a Copy of MYKHEL
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
05-03-26 05:02 pm
HK News Staffer
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
05-03-26 07:38 pm
HK News Staffer
ಸಾಕ್ಷಿಗಳು ಬರ್ತಾರೆ, ಹೋಗ್ತಾರೆ.. ಧರ್ಮಸ್ಥಳದಲ್ಲಿ ಹ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm