ಬ್ರೇಕಿಂಗ್ ನ್ಯೂಸ್
01-07-23 02:02 pm Source: news18 ಕ್ರೀಡೆ
ಟೀಂ ಇಂಡಿಯಾದ ಪ್ರಾಯೋಜಕರಾಗಿರುವ ಬೈಜಸ್ ತನ್ನ ಒಪ್ಪಂದವನ್ನು ರದ್ದುಗೊಳಿಸಿರುವುದು ಗೊತ್ತೇ ಇದೆ. ಬಿಸಿಸಿಐ ಮತ್ತು ಬೈಜಸ್ ನಡುವಿನ ಒಪ್ಪಂದವು ಈ ವರ್ಷದ ಏಪ್ರಿಲ್ನಲ್ಲಿ ಕೊನೆಗೊಂಡಿತು. ತಂಡದ ಪ್ರಾಯೋಜಕರಿಗೆ ಬಿಸಿಸಿಐ ಬಿಡ್ಗಳನ್ನು ಆಹ್ವಾನಿಸಿದೆ ಎಂದು ತಿಳಿದಿದೆ. ಬಿಸಿಸಿಐ ಇತ್ತೀಚೆಗೆ ತಂಡದ ಪ್ರಾಯೋಜಿಕರಿಗಾಗಿ ಹುಡುಕಾಟ ನಡೆಸುತ್ತಿದೆ.
ಈ ಹಿಂದೆ ಐಪಿಎಲ್ನ ಪ್ರಮುಖ ಪ್ರಾಯೋಜಕರಾಗಿದ್ದ ಬೆಟ್ಟಿಂಗ್ ಆಪ್ ಡ್ರೀಮ್ 11 ಟೀಂ ಇಂಡಿಯಾದ ಪ್ರಾಯೋಜಕರಾಗಿ ಕಾರ್ಯನಿರ್ವಹಿಸಲಿದೆ.ಬಿಸಿಸಿಐ ಅಧಿಕೃತವಾಗಿ ಟ್ವಿಟರ್ ಮೂಲಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಡ್ರೀಮ್ 11 ಹಿಂದೆ ಬೈಜಸ್ ಪಾವತಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪಾವತಿಸುವ ಸಾಧ್ಯತೆಯಿದೆ. ಡ್ರೀಮ್ 11 ಟೀಂ ಇಂಡಿಯಾದ ಮುಂದಿನ ಪ್ರಾಯೋಜಕರಾಗಲಿದೆ ಎಂಬ ಸುದ್ದಿ ಬಂದಾಗ ಅಭಿಮಾನಿಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಟೀಮ್ ಇಂಡಿಯಾದ ಪ್ರಾಯೋಜಕರಾಗಿ ಬೆಟ್ಟಿಂಗ್ ಆ್ಯಪ್ ಅನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಬಗ್ಗೆ ಕಾಮೆಂಟ್ಗಳು ಬರುತ್ತಿವೆ. ಮದ್ಯಪಾನ, ಧೂಮಪಾನ, ಅಶ್ಲೀಲ ಚಿತ್ರಗಳು ಮತ್ತು ಬೆಟ್ಟಿಂಗ್ಗೆ ಸಂಬಂಧಿಸಿದ ಕಂಪನಿಗಳು ಬಿಡ್ನಲ್ಲಿ ಭಾಗವಹಿಸಬಾರದಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ. ಬಿಸಿಸಿಐ Dream 11 ನಂತಹ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆಯಲು ಸಿದ್ಧವಾಗಿದೆ. ಆದರೆ ಬಿಸಿಸಿಐ ದೃಷ್ಟಿಯಲ್ಲಿ, ಡ್ರೀಮ್ 11 ಬೆಟ್ಟಿಂಗ್ ಅಪ್ಲಿಕೇಶನ್ ಅಲ್ಲ, ಇದು ಫ್ಯಾಂಟಸಿ ಸ್ಪೋರ್ಟ್ಸ್ ಲೀಗ್ ಕಂಪನಿಯಾಗಿದೆ.
ಬಿಸಿಸಿಐಗಿಂತ ದೇಶದ ಬಹುತೇಕ ಯುವಕರಿಗೆ ಡ್ರೀಮ್ ಇಲೆವೆನ್ ಬಗ್ಗೆ ಹೆಚ್ಚು ತಿಳಿದಿದೆ. 'ನಿಮಗೆ ಕ್ರಿಕೆಟ್ ಜ್ಞಾನ ಇದೆಯೇ? ಆದರೆ ‘ಮನೆಯಲ್ಲೇ ಕುಳಿತು ಲಕ್ಷ ಗಳಿಸಬಹುದು’ ಎಂಬ ಜಾಹೀರಾತಿಗೆ ಆಕರ್ಷಿತರಾಗಿ ಡ್ರೀಮ್ 11ರಂತಹ ಆ್ಯಪ್ ಗಳಲ್ಲಿ ತಂಡವನ್ನು ಆಯ್ಕೆ ಮಾಡಿಕೊಂಡು ಹಣದ ಬೆಟ್ಟಿಂಗ್ ಮೂಲಕ ಕೈ ಸುಟ್ಟುಕೊಂಡವರು ಹಲವರಿದ್ದಾರೆ. ಆದರೆ, ಹಣದ ಮಾಯಾಜಾಲದಲ್ಲಿ ಮೌಲ್ಯಗಳನ್ನು ಮರೆತಿರುವ ಬಿಸಿಸಿಐ, ಡ್ರೀಮ್ 11ಕ್ಕೆ ಟೀಂ ಇಂಡಿಯಾದ ಪ್ರಾಯೋಜಕತ್ವದ ಹಕ್ಕನ್ನು ಕಟ್ಟಲು ಸಿದ್ಧವಾಗುತ್ತಿರುವುದು ಎಷ್ಟು ಸರಿ. ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ಮಾಡುವುದು ಅಪರಾಧ. ಇಂತಹ ದಂಧೆಯಲ್ಲಿ ತೊಡಗಿರುವ ಕಂಪನಿಗೆ ಪ್ರಾಯೋಜಕತ್ವದ ಹಕ್ಕು ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಬಿಸಿಸಿಐ ಗೆ ಕೇಳುತ್ತಿದ್ದಾರೆ.
Bcci Announces Dream11 as the new team India lead sponsor.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am