ಬ್ರೇಕಿಂಗ್ ನ್ಯೂಸ್
20-05-22 12:05 pm Mangalore Correspondent ಕರಾವಳಿ
ಮಂಗಳೂರು, ಮೇ 20 : ನಾರಾಯಣ ಗುರುಗಳಂತಹ ದಾರ್ಶನಿಕರ ಬಗೆಗಿನ ಪಠ್ಯವನ್ನು ತೆಗೆದು ಹಾಕಿದ್ದು ಘೋರ ಅಪರಾಧ. ತೆಗೆದು ಹಾಕಿದ ಪಠ್ಯವನ್ನು ಮತ್ತೆ ಸೇರಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಈ ಪ್ರಮಾದಕ್ಕಾಗಿ ನಾರಾಯಣ ಗುರುಗಳನ್ನು ಕುಲಗುರುಗಳೆಂದು ಹೇಳಿಕೊಳ್ಳುವ ಸಮುದಾಯಕ್ಕೆ ಸೇರಿದ ಕರಾವಳಿಯ ಇಬ್ಬರು ನಾಯಕರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಸಮುದಾಯದ ಪರವಾಗಿ ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರು, ನಾಯಕರಿಗೆ ಬೇರೆ ಬೇರೆಯದೇ ಆದ ವ್ಯಕ್ತಿಗಳು ಆದರ್ಶರಾಗಿರಬಹುದು. ಗೋಡ್ಸೆ, ಗಾಂಧಿ ಅಭಿಮಾನಿಗಳು ಇರಬಹುದು. ಒಂದು ಸಂಘಟನೆಯ ಮುಖ್ಯಸ್ಥ ಹೆಡಗೇವಾರ್ ಬಗ್ಗೆ ಅಭಿಮಾನ ಇರಬಹುದು. ಯಾರು ಬೇಕಾದರೂ ಪ್ರಚಾರ ಸಭೆಯಲ್ಲಿ ಗೋಡ್ಸೆ, ಹೆಡಗೇವಾರ್ ಆದರ್ಶ ಎಂದು ಹೇಳಿಕೊಳ್ಳಬಹುದು. ಅದಕ್ಕೆ ನಮ್ಮ ಆಕ್ಷೇಪವಿಲ್ಲ.
ಆದರೆ ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿತವಾಗಿರುವ ಕರ್ನಾಟಕದಲ್ಲಿ ಒಬ್ಬ ದಾರ್ಶನಿಕ ವ್ಯಕ್ತಿಗೆ ಅಪಮಾನ ಆಗುವುದು ಆಗಬಾರದಿತ್ತು. ದಾರ್ಶನಿಕ ವ್ಯಕ್ತಿಗಳಿಗೆ ಅಪಮಾನ ಮಾಡುವುದು ಘೋರ ಅಪರಾಧ. ಇದರ ಹಿಂದಿನ ದುರುದ್ದೇಶ ಏನೆನ್ನುವುದು ತಿಳಿಯುತ್ತದೆ. ಇದು ಒಂದು ರೀತಿಯ ರಾಜಕೀಯ ಗಿಮಿಕ್. ಪಿಟ್ಟಿ ಪಾಲಿಟಿಕ್ಸ್ ಅಂತ ಹೇಳಬೇಕಷ್ಟೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಒಪ್ಪುವುದಾದರೆ ಮಂಗಳೂರಿನ ರೈಲು ನಿಲ್ದಾಣ ಅಥವಾ ಏರ್ಪೋರ್ಟ್ ಗೆ ಅವರ ಹೆಸರು ಇಡಬೇಕಿತ್ತು. ಚುನಾವಣೆ ನೆಪದಲ್ಲಿ ಏನೋ ಹೆಸರು ಬದಲಾವಣೆ ಮಾಡಬಹುದು. ಆದರೆ ಇದರ ಹಿಂದಿನ ನೀತಿ ಏನು ಎನ್ನುವುದು ತಿಳಿಯ ಬೇಕಾಗುತ್ತದೆ. ನಾರಾಯಣ ಗುರುಗಳ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಒಬ್ಬ ಮಂತ್ರಿ ಹೇಳುತ್ತಾರೆ. ಆದರೆ ಈ ವಿಚಾರವನ್ನು ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಲ್ಲ. ಪ್ರತಿಷ್ಠಿತ ಪತ್ರಿಕೆಗಳು, ಚಿಂತಕರು ಪ್ರಶ್ನೆ ಎತ್ತಿರುವುದು. ಹಾಗಾಗಿ ಉತ್ತರ ಕೊಡಬೇಕಾಗುತ್ತದೆ ಎಂದು ರೈ ಹೇಳಿದರು.
ಪಠ್ಯ ಪುಸ್ತಕ ಮರು ಪರಿಷ್ಕರಣಾ ಸಮಿತಿಯ ಬಗ್ಗೆಯೇ ಆಕ್ಷೇಪ ಇದೆ. ದಾರ್ಶನಿಕ ವ್ಯಕ್ತಿಗಳ ಹೆಸರು, ಅವರ ವಿಚಾರಗಳನ್ನು ಪಠ್ಯದಿಂದ ತೆಗೆದು ಹಾಕುವುದರ ಹಿಂದಿನ ಅಜೆಂಡಾ ಅರ್ಥ ಮಾಡಬೇಕಾಗುತ್ತದೆ. ಏನೇ ರಾಜಕೀಯ ಇರಲಿ, ಬಿಲ್ಲವ, ಈಡಿಗರ ಪಾಲಿನ ಗುರುಗಳಿಗಾದ ಅವಮಾನಕ್ಕಾಗಿ ಅವರನ್ನು ಪ್ರತಿನಿಧಿಸುವ ನಾಯಕರು ರಾಜಿನಾಮೆ ನೀಡಬೇಕು ಎಂದು ಪರೋಕ್ಷವಾಗಿ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಹೆಸರೇಳದೆ ರಮಾನಾಥ ರೈ ರಾಜಿನಾಮೆಗೆ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್ ಮತ್ತಿತರರಿದ್ದರು.
Mangalore Text on Narayana Guru, Periyar removed from class 10 Ramanath Rai slams BJP.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm