ಬ್ರೇಕಿಂಗ್ ನ್ಯೂಸ್
27-01-22 11:50 am Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.27 : ಮರಕಡ ಶ್ರೀ ಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ(72) ಬುಧವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.
ಮರಕಡದ ಮನೆಯಲ್ಲಿ ತಡರಾತ್ರಿ 11 ಗಂಟೆ ವೇಳೆಗೆ ಸ್ವಾಮೀಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಮಂಗಳೂರಿನ ಮರಕಡ ಅಲ್ಲದೆ ಕೋಟೆಕಾರಿನ ಮಡ್ಯಾರಿನಲ್ಲೂ ಶ್ರೀ ಪರಾಶಕ್ತಿ ಕ್ಷೇತ್ರವನ್ನ ನಿರ್ಮಿಸಿದ್ದರು. ಕ್ಷೇತ್ರದಲ್ಲಿ ಕಪಿಲಾ ಎಂಬ ವಿಶಾಲವಾದ ಗೋ ಶಾಲೆಯನ್ನ ನಿರ್ಮಿಸಿ ಗೋವುಗಳಿಗೆ ಆಶ್ರಯ ಕಲ್ಪಿಸಿದ್ದರು. ಅಲ್ಲದೆ ಕೋಟೆಕಾರಿನ ನಡಾರ್ ಎಂಬಲ್ಲಿ ದೇವರ ಮನೆಯನ್ನೂ ಸ್ಥಾಪಿಸಿದ್ದರು.
ಸ್ವಾಮೀಜಿಯ ಮೃತದೇಹವನ್ನು ಇಂದು ಸಂಜೆ ಮಡ್ಯಾರಿನ ಪರಾಶಕ್ತಿ ಕ್ಷೇತ್ರ ಅಥವಾ ದೇವರ ಮನೆಗೆ ತರುವ ಸಾಧ್ಯತೆಗಳಿದ್ದು ಇಂದೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಅವರ ಭಕ್ತರು ತಿಳಿಸಿದ್ದಾರೆ.
ಮರಕಡದಲ್ಲಿ ನೂತನ ಶ್ರೀ ಗುರು ಪರಾಶಕ್ತಿ ಮಠ ನಿರ್ಮಾಣವಾಗಿದ್ದು ಇದೇ ಫೆ.16 ರಂದು ಸ್ವಾಮೀಜಿಗಳ ಮಠ ಪ್ರವೇಶ ಕಾರ್ಯಕ್ರಮ ನಿಗದಿಯಾಗಿತ್ತು. ಮೇ 8 ಕ್ಕೆ ವಿಜೃಂಭಣೆಯ ಬ್ರಹ್ಮಕಲಶದ ಕಾರ್ಯಕ್ರಮವೂ ನಿಗದಿಯಾಗಿತ್ತು. ಬ್ರಹ್ಮಕಲಶದ ಮೊದಲೇ ಸ್ವಾಮೀಜಿ ಇಹಲೋಕ ತ್ಯಜಿಸಿದ್ದು ಅವರ ಭಕ್ತ ವರ್ಗದವರನ್ನು ಶೋಕಕ್ಕೀಡು ಮಾಡಿದೆ. ಸ್ವಾಮೀಜಿಗಳು ತನ್ನ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನ ಅಗಲಿದ್ದಾರೆ.
Marakada Mutt swami Narendranath Yogi (72) dies of heart attack. He died last night at the Mutt around 11 PM.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
18-06-25 10:24 am
Mangalore Correspondent
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm