ಬ್ರೇಕಿಂಗ್ ನ್ಯೂಸ್
27-01-22 11:50 am Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.27 : ಮರಕಡ ಶ್ರೀ ಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ(72) ಬುಧವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.
ಮರಕಡದ ಮನೆಯಲ್ಲಿ ತಡರಾತ್ರಿ 11 ಗಂಟೆ ವೇಳೆಗೆ ಸ್ವಾಮೀಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಮಂಗಳೂರಿನ ಮರಕಡ ಅಲ್ಲದೆ ಕೋಟೆಕಾರಿನ ಮಡ್ಯಾರಿನಲ್ಲೂ ಶ್ರೀ ಪರಾಶಕ್ತಿ ಕ್ಷೇತ್ರವನ್ನ ನಿರ್ಮಿಸಿದ್ದರು. ಕ್ಷೇತ್ರದಲ್ಲಿ ಕಪಿಲಾ ಎಂಬ ವಿಶಾಲವಾದ ಗೋ ಶಾಲೆಯನ್ನ ನಿರ್ಮಿಸಿ ಗೋವುಗಳಿಗೆ ಆಶ್ರಯ ಕಲ್ಪಿಸಿದ್ದರು. ಅಲ್ಲದೆ ಕೋಟೆಕಾರಿನ ನಡಾರ್ ಎಂಬಲ್ಲಿ ದೇವರ ಮನೆಯನ್ನೂ ಸ್ಥಾಪಿಸಿದ್ದರು.

ಸ್ವಾಮೀಜಿಯ ಮೃತದೇಹವನ್ನು ಇಂದು ಸಂಜೆ ಮಡ್ಯಾರಿನ ಪರಾಶಕ್ತಿ ಕ್ಷೇತ್ರ ಅಥವಾ ದೇವರ ಮನೆಗೆ ತರುವ ಸಾಧ್ಯತೆಗಳಿದ್ದು ಇಂದೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಅವರ ಭಕ್ತರು ತಿಳಿಸಿದ್ದಾರೆ.

ಮರಕಡದಲ್ಲಿ ನೂತನ ಶ್ರೀ ಗುರು ಪರಾಶಕ್ತಿ ಮಠ ನಿರ್ಮಾಣವಾಗಿದ್ದು ಇದೇ ಫೆ.16 ರಂದು ಸ್ವಾಮೀಜಿಗಳ ಮಠ ಪ್ರವೇಶ ಕಾರ್ಯಕ್ರಮ ನಿಗದಿಯಾಗಿತ್ತು. ಮೇ 8 ಕ್ಕೆ ವಿಜೃಂಭಣೆಯ ಬ್ರಹ್ಮಕಲಶದ ಕಾರ್ಯಕ್ರಮವೂ ನಿಗದಿಯಾಗಿತ್ತು. ಬ್ರಹ್ಮಕಲಶದ ಮೊದಲೇ ಸ್ವಾಮೀಜಿ ಇಹಲೋಕ ತ್ಯಜಿಸಿದ್ದು ಅವರ ಭಕ್ತ ವರ್ಗದವರನ್ನು ಶೋಕಕ್ಕೀಡು ಮಾಡಿದೆ. ಸ್ವಾಮೀಜಿಗಳು ತನ್ನ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನ ಅಗಲಿದ್ದಾರೆ.
Marakada Mutt swami Narendranath Yogi (72) dies of heart attack. He died last night at the Mutt around 11 PM.
10-11-25 12:22 pm
Bangalore Correspondent
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm