ಬ್ರೇಕಿಂಗ್ ನ್ಯೂಸ್
27-09-21 01:20 pm Mangaluru Correspondent ಕರಾವಳಿ
ಉಳ್ಳಾಲ, ಸೆ.27: ಹಿರಿಯ ಜನಪದ ವಿದ್ವಾಂಸರು, ಸಾಹಿತಿ ಪ್ರೊ.ಡಾ.ಅಮೃತ ಸೋಮೇಶ್ವರ ಅವರ 86ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ "ಗೌರವಶ್ರೀ" ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರದಾನ ಮಾಡಲಾಗುವ 2020ನೇ ಸಾಲಿನ ಗೌರವಶ್ರೀ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಸಾಹಿತಿ ಮತ್ತು ಜನಪದ ವಿದ್ವಾಂಸರಾದ ಪ್ರೊ.ಡಾ.ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿತ್ತು. ಕಳೆದ ಸೆ.12 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಅನಾರೋಗ್ಯದ ಕಾರಣ ಸಾಹಿತಿ ಅಮೃತರಿಗೆ ಬೆಂಗಳೂರಿಗೆ ತೆರಳಲು ಆಗಿರಲಿಲ್ಲ. ಇಂದು ಅಮೃತರ ಸೋಮೇಶ್ವರದ ಸ್ವಗೃಹ ಒಲುಮೆಯಲ್ಲಿ "ಗೌರವ ಶ್ರೀ" ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ವಿ ವಸಂತ್ ಕುಮಾರ್ ಮಾತನಾಡಿ ಅಮೃತರಂತಹ ಮಹಾನ್ ಸಾಹಿತಿಗೆ ಪ್ರಶಸ್ತಿ ಪ್ರದಾನ ಮಾಡಿರುವುದರಿಂದ ಈ ಪ್ರಶಸ್ತಿಯ ಗೌರವ ಇಮ್ಮಡಿಯಾಗಿದೆ. ಅವರ ರಚನೆಯ "ಮಾನವತೆ ಗೆದ್ದಾಗ"ಎಂಬ ಕೃತಿಗೆ ಇಂದು ಅವರೇ ನಿದರ್ಶನರಾಗಿದ್ದಾರೆ. ಸುದೀರ್ಘ ಸಾಹಿತ್ಯ ಜೀವನದಲ್ಲಿ ಅವರು ಅಮೃತತ್ವವನ್ನು ಪ್ರಾಪ್ತಿಸಿದ್ದಾರೆ. ಅವರ ಜೀವನ ಶೈಲಿಯೇ ನಮಗೆಲ್ಲರಿಗೂ ಮಾದರಿ. ಅವರ ಮಾರ್ಗದರ್ಶನ ಅಕಾಡೆಮಿಗೆ ಮುಂದೆಯೂ ಅಗತ್ಯವಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಅಮೃತ ಸೋಮೇಶ್ವರ ಅವರು ಮನೆಯಲ್ಲೇ ಪ್ರಶಸ್ತಿ ಪ್ರದಾನದ ಸನ್ನಿವೇಶ ಸೃಷ್ಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ನನ್ನ ಪಾಡಿಗೆ ನಾನು ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಆಶೆ ,ಆಕಾಂಕ್ಷೆ ಇಲ್ಲದೆ ನನ್ನ ಇತಿ, ಮಿತಿಯಲ್ಲಿ ಮಾಡಿದ ಕೆಲಸವನ್ನ ಗಮನಿಸಿ ಗೌರವಿಸಿದಕ್ಕೆ ಕೃತಜ್ಞತೆ ಅರ್ಪಿಸಿದರು.
ಅಕಾಡೆಮಿ ಅಧ್ಯಕ್ಷರು, ಪದಾಧಿಕಾರಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಮೃತ ಸೋಮೇಶ್ವರ ಅವರು ಕೇಕ್ ಕತ್ತರಿಸಿ 86ನೇ ಹುಟ್ಟುದಿನವನ್ನ ಆಚರಿಸಲಾಯಿತು. ಅಮೃತರ ಮೊಮ್ಮಗಳಾದ ಸೃಷ್ಟಿ ಸೋಮೇಶ್ವರ ಅವರು ಅಜ್ಜನದ್ದೇ ಸಾಹಿತ್ಯದ 'ಎಂಚಿತ್ತಿ ಮಗನ್ ಪಡೆಯಲ್ ಪಾರ್ವತಿ...' ಎಂಬ ಭಕ್ತಿಗೀತೆಯನ್ನ ಹಾಡಿ ರಂಜಿಸಿದಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆದ ಎನ್. ಕರಿಯಪ್ಪ , ಪದಾಧಿಕಾರಿಗಳಾದ ಹರೀಶ್ ಕುಮಾರ್, ಡಾ.ಬಿ.ಎಂ ಶರಭೇಂದ್ರ ಸ್ವಾಮಿ, ಮಂಗಳೂರು ಆಕಾಶವಾಣಿಯ ಸೂರ್ಯನಾರಾಯಣ ಭಟ್, ಅಮೃತ ಸೋಮೇಶ್ವರರ ಧರ್ಮ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ, ಸೃಷ್ಟಿ ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.
Ullal Tulu scholar and writer Dr Amrut Someshwar honoured by Sahitya Academy awards Gourawa Shree on 86th birthday. The program was held in Someshwar in Mangalore.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm