ಬ್ರೇಕಿಂಗ್ ನ್ಯೂಸ್
22-09-21 10:05 pm Headline Karnataka News Network ಕರಾವಳಿ
ಪುತ್ತೂರು, ಸೆ.22: 5 ಶೇಕಡಾ ಬಡ್ಡಿಯಲ್ಲಿ ಹತ್ತು ಲಕ್ಷ ಲೋನ್ ಮಾಡಿಸಿಕೊಡುವ ಆಮಿಷಕ್ಕೊಳಗಾದ ವ್ಯಕ್ತಿಯೊಬ್ಬ ಬರೋಬ್ಬರಿ ಏಳು ಲಕ್ಷ ರೂಪಾಯಿ ಕಳಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮಕುಂಜ ಗ್ರಾಮದ ಮಹಮ್ಮದ್ ನಜೀರ್ ಎಂಬವರು ಹಣ ಕಳಕೊಂಡವರು. ಕಳೆದ ಜನವರಿಯಲ್ಲಿ ತನ್ನ ಮೊಬೈಲಿಗೆ ಕ್ಯಾಪಿಟಲ್ ಇಂಡಿಯಾ ಫೈನಾನ್ಸ್ ಲಿಮಿಟೆಡ್ ಎಂಬ ಹೆಸರಲ್ಲಿ ಮೆಸೇಜ್ ಬಂದಿತ್ತು. ಅಲ್ಲದೆ, ಲೋನ್ ಪಡೆಯಲು 9582853543 ನಂಬರಿಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಸದ್ರಿ ನಂಬರಿಗೆ ಕರೆ ಮಾಡಿ ಮಾತನಾಡಿದಾಗ, 5 ಶೇ. ಬಡ್ಡಿಯಲ್ಲಿ 5 ಲಕ್ಷ ಲೋನ್ ನೀಡುವುದಾಗಿ ತಿಳಿಸಿದ್ದರು.

ಅದಕ್ಕಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಕಾಪಿ, ಫೋಟೋ ಕಳುಹಿಸಲು ಹೇಳಿದ್ದು, ಅವರು ಹೇಳಿದಂತೇ ಮಹಮ್ಮದ್ ನಜೀರ್ ಮಾಡಿದ್ದರು. ಆನಂತರ ವಿವಿಧ ಮೊಬೈಲ್ ನಂಬರ್ ಗಳಲ್ಲಿ ಕರೆ ಬಂದಿದ್ದು, ರಿಜಿಸ್ಟ್ರೇಶನ್, ಜಿಎಸ್ಟಿ ಹಾಗೂ ವಿವಿಧ ಚಾರ್ಜ್ ಹೆಸರಲ್ಲಿ ಹಣ ಕಳುಹಿಸಲು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ಕಳುಹಿಸಿದ್ದು ಒಟ್ಟು 5,20,727 ರೂಪಾಯಿ ಕಳುಹಿಸಿದ್ದಾರೆ. ಇದೇ ವೇಳೆ, ಬಜಾಜ್ ಸರ್ವ್ ಕಂಪನಿಯ ಹೆಸರಲ್ಲಿ ಮೆಸೇಜ್ ಬಂದಿದ್ದು, 7074047721 ನಂಬರಿಗೆ ಕರೆ ಮಾಡಲು ಸೂಚಿಸಲಾಗಿತ್ತು.
ಕರೆ ಮಾಡಿದಾಗ, 5 ಶೇ. ಬಡ್ಡಿಯಲ್ಲಿ 9 ಲಕ್ಷ ಲೋನ್ ತೆಗೆಸಿಕೊಡುವುದಾಗಿ ಹೇಳಿದ್ದರು. ಅಲ್ಲದೆ, ದಾಖಲಾತಿಗಳನ್ನು ಕಳುಹಿಸುವಂತೆ ತಿಳಿಸಿದ್ದರು. ರಿಜಿಸ್ಟ್ರೇಶನ್ ಮತ್ತು ವಿವಿಧ ರೀತಿಯ ಚಾರ್ಜಸ್ ಹೆಸರಲ್ಲಿ ಹಣ ಪಾವತಿಸಲು ಕೇಳಿದ್ದು, ಮಹಮ್ಮದ್ ನಜೀರ್ ಹಂತ ಹಂತವಾಗಿ 2,03,598 ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದಾರೆ. ಈ ರೀತಿಯಾಗಿ ಒಟ್ಟು ಬರೋಬ್ಬರಿ 7,24,325 ರೂಪಾಯಿ ಹಣವನ್ನು ಕಳಕೊಂಡಿದ್ದು, ಮೋಸ ಹೋಗಿದ್ದಾರೆ. ಸಾಲ ಕೇಳಲು ಹೋಗಿದ್ದ ಮಹಮ್ಮದ್ ನಜೀರ್ ತಾನೇ ಅಪಾರ ಮೊತ್ತದ ಹಣವನ್ನು ಕಳಕೊಂಡಿದ್ದರು. ಇದೀಗ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 419, 420 ಮತ್ತು 66 (ಡಿ), 66 (ಸಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Puttur Man falls trap to Double interest of Money loose Rs Seven Lakhs case registered. He fell trapped to the scam after he received a SMS on his phone.
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm