ಬ್ರೇಕಿಂಗ್ ನ್ಯೂಸ್
09-09-21 05:58 pm Mangaluru Correspondent ಕರಾವಳಿ
ಉಳ್ಳಾಲ, ಸೆ.9: ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಸಾರ್ವಜನಿಕರು ದಾಟಿ ಹೋಗುತ್ತಿದ್ದ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಗಳಿಗಳನ್ನು ಇನ್ನು ಯಾರೂ ದಾಟುವಂತಿಲ್ಲ. ರೈಲ್ವೇ ಇಲಾಖೆಯು ಜನರು ಹಳಿ ದಾಟದಂತೆ ಕಬ್ಬಿಣದ ತಡೆಬೇಲಿ ಹಾಕಿದ್ದು ಇದರ ವಿರುದ್ಧ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಅನ್ನೋ ರೈಲ್ವೇ ಮೇಲ್ಸೇತುವೆ ಸಾರ್ವಜನಿಕರು ರೈಲ್ವೇ ಹಳಿ ದಾಟಲಿರುವ ಏಕೈಕ ಅಧಿಕೃತ ಮಾರ್ಗ. ಓವರ್ ಬ್ರಿಡ್ಜ್ ಎಂಬ ಹೆಸರಿನ ಈ ಮೇಲ್ಸೇತುವೆ ತೊಕ್ಕೊಟ್ಟು ಉಳ್ಳಾಲ ಮುಖ್ಯ ರಸ್ತೆಯ ಪ್ರಮುಖ ಕೊಂಡಿಯೂ ಆಗಿದೆ. ಆದರೆ ಸ್ವಾತಂತ್ರ್ಯ ಪೂರ್ವದಿಂದಲೂ ತೊಕ್ಕೊಟ್ಟಿನ ಸ್ಥಳೀಯರು ಮಾತ್ರ ರೈಲ್ವೇ ಹಳಿ ದಾಟಲು ಅಧಿಕೃತ ಓವರ್ ಬ್ರಿಡ್ಜನ್ನು ಬಿಟ್ಟು ಸುಲಭ ಉಪಾಯವೆಂಬಂತೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಮಾರ್ಗವನ್ನೇ ಅವಲಂಬಿಸಿದ್ದರು. ಕಳೆದ ಹಲವಾರು ವರುಷಗಳಿಂದ ಸ್ಥಳೀಯರು ಈ ಅನಧಿಕೃತ ರೈಲ್ವೇ ಹಳಿ ದಾಟುವ ಪದ್ಧತಿಯನ್ನ ಅನುಸರಿಸಿದ್ದು ಇದರ ಪರಿಣಾಮ ಈ ಪ್ರದೇಶದಲ್ಲಿ ಅನೇಕ ಅಮೂಲ್ಯ ಜೀವಗಳು ರೈಲ್ವೇ ದುರಂತಕ್ಕೆ ಒಳಗಾಗಿ ದಾರುಣ ಸಾವಿಗೀಡಾಗಿದ್ದು ನಡೆದಿತ್ತು.









ಇದೀಗ ರೈಲ್ವೇ ಇಲಾಖೆ ಇದರ ಬಗ್ಗೆ ಎಚ್ಚೆತ್ತು ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಕ್ರಾಸಿಂಗ್ ಬಳಿ ತಿಂಗಳ ಹಿಂದೆ ರೈಲ್ವೇ ಹಳಿ ಅತಿಕ್ರಮಣದ ವಿರುದ್ಧ ಎಚ್ಚರಿಕೆಯ ನಾಮಫಲಕವನ್ನೂ ಹಾಕಿತ್ತು. ಆದರೆ ಇದನ್ನೆಲ್ಲ ಕ್ಯಾರೇ ಮಾಡದ ಇಲ್ಲಿನ ಮಂದಿ ರೈಲ್ವೇ ಹಳಿ ಬದಿಯಲ್ಲೇ ಸಾರಾಸಗಟಾಗಿ ಭರ್ಜರಿ ಮೀನು ವ್ಯಾಪಾರ ಮಾಡುತ್ತಿದ್ದರು. ಇದರ ದುಷ್ಪರಿಣಾಮವೋ ಏನೋ ರೈಲ್ವೇ ಇಲಾಖೆಯವರು ಇಂದು ಏಕಾಏಕಿ ರಕ್ಷಣಾತ್ಮಕ ಕಾರ್ಯವನ್ನ ಕೈಗೊಂಡಿದ್ದಾರೆ.
ರೈಲ್ವೇ ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತರ ಅನಿಲ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗಿನಿಂದಲೇ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಬದಿಗಳಲ್ಲಿ ಕಬ್ಬಿಣದ ಸಲಾಕೆಗಳ ಬೇಲಿ ಅಳವಡಿಸುವ ಕಾಮಗಾರಿಯನ್ನ ಆರಂಭಿಸಲಾಗಿದೆ. ರೈಲ್ವೇ ಇಲಾಖೆಯ ನುರಿತ ವೆಲ್ಡರ್ ಗಳು ರೈಲ್ವೇ ಹಳಿ ದಾಟದಂತೆ ಕಬ್ಬಿಣದ ಬೃಹತ್ ಸಲಾಕೆಗಳ ಬೇಲಿ ರಚಿಸಿಯೇ ಬಿಟ್ಟಿದ್ದಾರೆ.
ಆದರೆ ಸ್ಥಳೀಯ ವ್ಯಾಪಾರಿಗಳು ಮತ್ತು ರಿಕ್ಷಾ ಚಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾದ ಆಯೂಬ್ ಮಂಚಿಲರನ್ನ ಕರೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಅಧ್ಯಕ್ಷರಾದ ಚಿತ್ರಕಲಾ ಮತ್ತು ಉಪಾಧ್ಯಕ್ಷ ಆಯೂಬ್ ಅವರು ರೈಲ್ವೇ ಹಿರಿಯ ಅಭಿಯಂತರ ಅನಿಲ್ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಅನೇಕ ವರ್ಷಗಳಿಂದ ಸ್ಥಳೀಯರು ಇದೇ ರೈಲ್ವೇ ಹಳಿಯನ್ನು ನೆಚ್ಚಿಕೊಂಡಿದ್ದು ತರಾತುರಿಯಲ್ಲಿ ನಿರ್ಬಂಧ ವಿಧಿಸಿದರೆ ಸಮಸ್ಯೆ ಎದುರಾಗುತ್ತದೆ. ಸ್ಥಳೀಯರು ಸುಲಭವಾಗಿ ಹಳಿ ದಾಟಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಗರ ಉಪಾಧ್ಯಕ್ಷರಾದ ಆಯೂಬ್ ಮಂಚಿಲ ರೈಲ್ವೇ ಅಧಿಕಾರಿಯಲ್ಲಿ ಕೇಳಿ ಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೇ ಅಧಿಕಾರಿಗಳು ನಮಗೆ ತಡೆ ಬೇಲಿ ಹಾಕುವಂತೆ ರೈಲ್ವೇ ಇಲಾಖೆಯಿಂದ ಆದೇಶ ಬಂದಿದ್ದು ಅದನ್ನು ಮೀರಲು ಸಾಧ್ಯವಿಲ್ಲ ಎಂದಿದ್ದಾರೆ.
Mangalore Thokottu Railway officers install rod frame to restrict moment of public people oppose
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 06:22 pm
HK News Staffer
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm