ಬ್ರೇಕಿಂಗ್ ನ್ಯೂಸ್
28-08-21 11:15 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 28: ಈಗಿನ ಕೆಲವು ಯುವಕ- ಯುವತಿಯರಿಗೆ ಟಿಕ್ ಟಾಕ್ ವಿಡಿಯೋ ಮಾಡುವುದು ಟ್ರೆಂಡ್ ಆಗಿದೆ. ಆದರೆ, ಎಲ್ಲಿ ಯಾವುದನ್ನು ಮಾಡಬೇಕು ಎಂಬ ಅರಿವು ಇಲ್ಲದೆಯೋ, ಏನಾಗುತ್ತೆ ಎಂಬ ದಾರ್ಷ್ಟ್ಯವೋ ಸಿಕ್ಕಸಿಕ್ಕಲ್ಲಿ ಟಿಕ್ ಟಾಕ್ ಮಾಡಿ ಸಿಕ್ಕಿಬೀಳುತ್ತಾರೆ. ಹಳೆಯಂಗಡಿ ಪ್ರಸಿದ್ಧ ಪಾವಂಜೆ ದೇವಸ್ಥಾನದಲ್ಲಿ ಇಬ್ಬರು ಹುಡುಗಿಯರ ಜೊತೆ ಯುವಕನೊಬ್ಬ ಟಿಕ್ ಟಾಕ್ ವಿಡಿಯೋ ಮಾಡಿದ್ದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲ್ಕಿ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ತನ್ನೊಂದಿಗೆ ಇಬ್ಬರು ಹುಡುಗಿಯರ ಜೊತೆ ವಿಡಿಯೋ ಮಾಡಿದ್ದಾನೆ. ದೇವಸ್ಥಾನದ ಒಳಗಿನ ಅಂಗಣದಲ್ಲಿ ವಿಡಿಯೋ ಮಾಡಿರುವಂತಿದೆ. ನಾಲ್ಕು ಮಾದರಿಯ ಬೇರೆ ಬೇರೆ ವಿಡಿಯೋಗಳು ವೈರಲ್ ಆಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವಂಜೆ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನದಲ್ಲಿ ಈ ರೀತಿ ವಿಡಿಯೋ ಮಾಡಲಾಗಿದೆ ಎನ್ನಲಾಗುತ್ತಿದ್ದು ಸ್ಥಳೀಯ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬ ಯುವಕನಿಗೆ ಫೋನ್ ಮಾಡಿ, ಇನ್ಮುಂದೆ ದೇವಸ್ಥಾನಕ್ಕೆ ಕಾಲಿಟ್ಟಲ್ಲಿ ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಧಮಕಿ ಹಾಕಿದ್ದಾನೆ. ನಾವು ಕೈಮುಗಿಯುವ ಜಾಗದಲ್ಲಿ ನೀನು ಈ ರೀತಿ ವಿಡಿಯೋ ಮಾಡಿದ್ದೀಯಲ್ಲಾ. ನಿನಗೆ ಯಾರು ಅವಕಾಶ ಕೊಟ್ಟಿದ್ದು ಎಂದು ಕೇಳಿದ್ದಾರೆ. ಅಲ್ಲಿನ ಅರ್ಚಕ ಭಟ್ರಿಗೆ ಹೇಳಿ, ಮಾಡಿದ್ದೇವೆ ಎಂದಿದ್ದಾನೆ. ಯಾರು ಆತ ಭಟ್ಟ, ನಿನಗೆ ಈ ರೀತಿ ವಿಡಿಯೋ ಮಾಡಲು ಹೇಳಿದ್ದು. ಬಾ, ದೇವಸ್ಥಾನಕ್ಕೆ ಬಂದು ಹೇಳು.. ನಾನು ವಿಡಿಯೋ ಡಿಲೀಟ್ ಮಾಡಿದ್ದೇನೆ ಎಂದು ಹುಡುಗ ಹೇಳಿದ್ದಕ್ಕೆ, ಅದು ಎಲ್ಲಾ ಗ್ರೂಪುಗಳಲ್ಲಿ ಬರ್ತಿದೆ. ನೀನು ಡಿಲೀಟ್ ಮಾಡೋದೇನು.. ನಿನ್ನ ಕೈಕಾಲು ತೆಗೀತೇನೆ ಎಂದು ಧಮ್ಕಿ ಹಾಕುವ ಆಡಿಯೋ ಕೂಡ ವೈರಲ್ ಆಗಿದ್ದು ಯುವಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬಂದಿದೆ.
ಇದೇ ವೇಳೆ, ದೇವಸ್ಥಾನದ ವತಿಯಿಂದ ತಪ್ಪಿತಸ್ಥ ಯುವಕ ಮತ್ತು ಹುಡುಗಿಯರು ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹುಡುಗ- ಹುಡುಗಿಯರ ಹುಚ್ಚಾಟಕ್ಕೆ ದೇವಸ್ಥಾನದ ಮರ್ಯಾದೆ ಹರಾಜು ಆಗುವಂತಾಗಿದೆ.
Video:
Mangalore Tiktok vidoe inside Pavanje temple haleangadi goes viral. Boy from Mulki and girls were seen acting inappropriately shooting their videos for Tiktok.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm