ಬ್ರೇಕಿಂಗ್ ನ್ಯೂಸ್
19-08-21 11:39 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 19: ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆ ಅಲ್ಲಿರುವ ಸಾವಿರಾರು ಭಾರತೀಯರನ್ನು ವಾಯುಪಡೆ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತಿದೆ. ಈ ನಡುವೆ, ಉಳ್ಳಾಲದ ಉಳಿಯ ನಿವಾಸಿಯೊಬ್ಬರು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ.
ಮೆಲ್ವಿನ್ ಮೊಂತೇರೋ ವಾಯುಪಡೆ ವಿಮಾನದಲ್ಲಿ ಮರಳಿ ತಾಯ್ನಾಡಿಗೆ ಬಂದಿದ್ದಾರೆ. ಮೆಲ್ವಿನ್ ಕಾಬೂಲ್ ನಲ್ಲಿರುವ ನ್ಯಾಟೋ ಪಡೆಯ ಮಿಲಿಟರಿ ಬೇಸ್ ಕ್ಯಾಂಪ್ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೊನ್ನೆ ಕಾಬೂಲನ್ನು ಉಗ್ರರು ಮುತ್ತಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಜನರು ಏರ್ಪೋರ್ಟ್ ಬಳಿ ಸೇರಿದ್ದರು. ಅಲ್ಲಿನ ನಿವಾಸಿಗಳೆಲ್ಲ ಏರ್ಪೋರ್ಟ್ ಒಳಗೆ ಸೇರಿದ್ದರಿಂದ ವಿಮಾನಗಳು ಇಳಿಯಲಾಗದೆ ಬರಲು ಕಷ್ಟವಾಗಿತ್ತು. ಆದರೂ ನಮ್ಮ ಸಂಸ್ಥೆಯವರು ಸಿಬಂದಿಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ನಡುವೆ, ಭಾರತೀಯ ರಾಯಭಾರ ಕಚೇರಿಯಲ್ಲಿದ್ದ ಸಿಬಂದಿಯನ್ನು ಕರೆತರಲು ವಾಯುಸೇನೆಯ ವಿಮಾನದಲ್ಲಿ ನಮ್ಮ ಸಂಸ್ಥೆಯ ಏಳು ಮಂದಿ ಸೇರಿ ಒಟ್ಟು 160 ಮಂದಿಯನ್ನು ಮಂಗಳವಾರ ಬೆಳಗ್ಗೆ ಕರೆತಂದಿದ್ದಾರೆ. ಗುಜರಾತ್ ನಲ್ಲಿರುವ ಏರ್ ಬೇಸ್ ಕ್ಯಾಂಪ್ ಗೆ ತಂದು ಬಿಟ್ಟಿದ್ದರು. ಅಲ್ಲಿಂದ ಬೆಂಗಳೂರು ಮೂಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾಗಿ ಮೆಲ್ವಿನ್ ಹೇಳಿದ್ದಾರೆ. ಇವರು ಇತ್ತೀಚೆಗಷ್ಟೇ ಪತ್ನಿಗೆ ಕೊರೊನಾ ತಗಲಿದೆ ಎಂದು ಊರಿಗೆ ಬಂದು ಹೋಗಿದ್ದರಂತೆ.



ಮೆಲ್ವಿನ್ ಮೊಂತೇರೊ ಅವರ ತಮ್ಮ ಡಮ್ಸಿ ಮೊಂತೇರೋ ಕೂಡ ಅಫ್ಘಾನಿಸ್ತಾನದಲ್ಲಿದ್ದು ಅಲ್ಲಿ ಏಸಿ ಮೆಕ್ಯಾನಿಕ್ ಆಗಿದ್ದಾರೆ. ಅವರನ್ನು ಕಾಬೂಲ್ ಏರ್ಪೋರ್ಟ್ ನಿಂದ ಕತಾರ್ ಗೆ ಏರ್ ಲಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ದೊರಕಿದೆ ಎಂದು ಮೆಲ್ವಿನ್ ತಿಳಿಸಿದ್ದಾರೆ. ಡಮ್ಸಿ ಎರಡು ದಿನಗಳಿಂದ ಏರ್ಪೋರ್ಟ್ ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದರು. ನೇರ ವಿಮಾನ ಸಿಗದೆ ಕತಾರ್ ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಕಾಬೂಲಿನಲ್ಲಿರುವ ಮಿಲಿಟರಿ ವಾಯುನೆಲೆ ಆಗಸ್ಟ್ 31ರ ವರೆಗೆ ಸುರಕ್ಷಿತ ಎನ್ನಲಾಗುತ್ತಿದೆ. ಅಲ್ಲಿ ವರೆಗೂ ಜಾಗ ಖಾಲಿ ಮಾಡಲು ತಾಲಿಬಾನ್ ಸಂಘಟನೆ ಗಡುವು ನೀಡಿದೆ. ಸ್ಥಳೀಯರು ಸೇರಿದಂತೆ, ಹಲವು ದೇಶಗಳ ನಿವಾಸಿಗಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಬೇರೆ ಬೇರೆ ಕಡೆಗಳಿಂದ ಬರುವ ವಿಮಾನಗಳಲ್ಲಿ ತಮ್ಮ ದೇಶಗಳಿಗೆ ತೆರಳುತ್ತಿದ್ದಾರೆ. ಗುಂಪು ಗುಂಪಾಗಿ ಜನರು ಅಲ್ಲಿಗೆ ಆಗಮಿಸುತ್ತಿದ್ದು, ಇನ್ನೆರಡು ದಿನದಲ್ಲಿ ಅಲ್ಲಿ ಆಹಾರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮೆಲ್ವಿನ್ ಹೇಳಿದ್ದಾರೆ.
Mangalore Ullal Man Melwin stranded in Afghanistan reaches home town safely shares experience. Melwin was working in the air base of Afghan says the Tailbans didn't invade the air base that's how we were safe.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
04-02-26 12:29 pm
Mangalore Correspondent
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm