ಬ್ರೇಕಿಂಗ್ ನ್ಯೂಸ್
15-08-21 11:10 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 15: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತೊಂದು ತುಳು ಹಾಡು ಹಾಡಿದ್ದಾರೆ. ಕೋಟಿ ಚೆನ್ನಯ ತುಳು ಚಿತ್ರದ ‘’ಕೆಮ್ಮಲೆತಾ ಬ್ರಹ್ಮಾ ಎಂಕ್ಲೆ ಕುಲದೈವೋ ಬ್ರಹ್ಮಾ’’ ಎನ್ನುವ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಈ ಹಾಡನ್ನು ತುಳು ಭಾಷೆಯ ಬಗ್ಗೆ ತಿಳಿಯದವರು ಹಾಡುವುದು ಕಷ್ಟ. ಒರಿಜಿನಲ್ ಪದ್ಯವನ್ನು ಪಿ.ಬಿ.ಶ್ರೀನಿವಾಸ್ ತಮ್ಮ ಮಧುರ ಕಂಠದಲ್ಲಿ ಹಾಡುವ ಮೂಲಕ ಆ ಹಾಡನ್ನು ಅಜರಾಮರವಾಗಿಸಿದ್ದರು. ಅವರು ಕೂಡ ತುಳುವರಲ್ಲ. ಆದರೆ, ತಮ್ಮ ಗಾಯನದ ಮೂಲಕವೇ ಹಾಡಿಗೆ ಸತ್ವ ತಂದುಕೊಟ್ಟಿದ್ದರು. ಉಚ್ಚಾರ, ಅರ್ಥಗಳ ಬಗ್ಗೆ ತಿಳಿದುಕೊಂಡು ಸಾಕಷ್ಟು ಅಭ್ಯಾಸ ನಡೆಸಿ ಹಾಡಿಗೆ ಸ್ವರ ತುಂಬಿದ್ದರು.
ಹಾಗೆಯೇ, ಮಂಗಳೂರು ಕಮಿಷನರ್ ಆಗಿರುವ ಶಶಿಕುಮಾರ್ ಸ್ವತಃ ಹಾಡುಗಾರರೇನಲ್ಲ. ತುಳು ಭಾಷೆಯ ಗಂಧ ಗಾಳಿಯೂ ತಿಳಿದವರಲ್ಲ. ಆದರೆ, ಹಾಡು, ಗಾಯನದ ಬಗ್ಗೆ ಅಪಾರ ಒಲವುಳ್ಳವರು. ಮಂಗಳೂರಿಗೆ ಬರುವುದಕ್ಕಿಂತಲೂ ಹಿಂದೆ ತಾವು ಕರ್ತವ್ಯದಲ್ಲಿದ್ದ ಜಾಗದಲ್ಲೆಲ್ಲ ಹಾಡುಗಳನ್ನು ಹಾಡಿ ರಂಜಿಸಿದ್ದರು. ಮಂಗಳೂರಿಗೆ ಪೊಲೀಸ್ ಕಮಿಷನರ್ ಆಗಿ ಬಂದ ಬಳಿಕವೂ ಶಶಿಕುಮಾರ್ ತಮ್ಮ ಗಾಯನ ಪ್ರತಿಭೆಯನ್ನು ಮುಂದುವರಿಸಿದ್ದಾರೆ. ಅದರ ಜೊತೆಗೆ, ಕರಾವಳಿಯ ನೆಲದ ಭಾಷೆ ತುಳುವನ್ನು ಕಲಿಯಲು, ಇಲಾಖೆಯ ಸಹೋದ್ಯೋಗಿಗಳಿಗೆ ತುಳುವನ್ನು ತಜ್ಞರಿಂದ ಕಲಿಸುವುದಕ್ಕೂ ಮುಂದಾಗಿದ್ದಾರೆ.
ಇದೀಗ ತುಳು ಚಿತ್ರದ ಕಠಿಣ ಹಾಡೊಂದನ್ನು ಹಾಡುವ ಮೂಲಕ ತುಳುವರ ಮನ ಗೆದ್ದಿದ್ದಾರೆ. ಎರಡು ತಿಂಗಳ ಹಿಂದೆ ಮೋಕೆದ ಸಿಂಗಾರಿ ಎನ್ನುವ ತುಳು ಹಾಡನ್ನು ಹಾಡಿದ್ದ ಕಮಿಷನರ್, ಆಬಳಿಕ ಯಾರೋ ಸಲಹೆ ಕೊಟ್ಟರೆಂದು ಕೋಟಿ ಚೆನ್ನಯ ಚಿತ್ರದ ಹಾಡನ್ನು ಹಾಡಲು ಕಲಿಯತೊಡಗಿದ್ದರು. ಕೊನೆಗೂ ಅದರಲ್ಲಿ ಯಶಸ್ಸು ಕಂಡಿದ್ದಾರೆ.
Independence Day Special 2021 Mangalore Police Commissioner Shashi Kumar Sings Koti Chennaya tulu song.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
04-02-26 12:29 pm
Mangalore Correspondent
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm