ಬ್ರೇಕಿಂಗ್ ನ್ಯೂಸ್
08-08-21 10:05 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 8: ಕಂಬಳದ ಅಪ್ಪಟ ಅಭಿಮಾನಿ, ಕಂಬಳ ಕೋಣಗಳ ಸಾಧಕ ಗುರುಪುರ ನಿವಾಸಿ ಕೆದುಬರಿ ಗುರುವಪ್ಪ ಪೂಜಾರಿ (78) ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಕಂಬಳದ ಸಾಧನೆಯೊಂದಿಗೆ ಸ್ವತಃ ಕೃಷಿಕನಾಗಿದ್ದ ಗುರುವಪ್ಪ ಪೂಜಾರಿ ದಿನವೂ ಹಾಲು ಡೈರಿಗೆ ಒಯ್ಯುವ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ತನ್ನ ಸ್ಕೂಟಿಯಲ್ಲಿ ಹಾಲನ್ನು ಒಯ್ಯುತ್ತಿದ್ದಾಗ ಗುರುಪುರದ ಬಳಿಯ ಕುಕ್ಕುದಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಗುರುವಪ್ಪ ಪೂಜಾರಿಯವರು ತೀವ್ರ ಗಾಯಗೊಂಡಿದ್ದು ಬಳಿಕ ಆಸ್ಪತ್ರೆ ತಲುಪುವಷ್ಟರಲ್ಲಿ ನಿಧನರಾಗಿದ್ದಾರೆ.
ನಾಲ್ಕು ದಶಕಗಳಿಂದ ತಮ್ಮ ಕೃಷಿಯೊಂದಿಗೆ ಕೋಣಗಳನ್ನು ಸಾಕುತ್ತಾ ಕಂಬಳಕ್ಕೆ ಒಯ್ಯುತ್ತಿದ್ದ ಕೆದುಬರಿ ಗುರುವಪ್ಪ ಪೂಜಾರಿ ಕಂಬಳ ಕ್ಷೇತ್ರದ ಅನನ್ಯ ಸಾಧಕರು. ಕಂಬಳದ ಮೇಲಿದ್ದ ಪ್ರೇಮದಿಂದ ಕೋಣಗಳನ್ನು ಒಯ್ಯುತ್ತಿದ್ದರೇ ವಿನಾ ಅವರು ಪದಕ ಗೆಲ್ಲುವತ್ತ ಮನಸ್ಸು ನೆಟ್ಟಿರಲಿಲ್ಲ. ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ, ಕನೆಹಲಗೆ ಹೀಗೆ ಕಂಬಳದ ಎಲ್ಲ ಪ್ರಕಾರಗಳಲ್ಲೂ ಕೋಣಗಳನ್ನು ಓಡಿಸಿದ್ದ ಹಿರಿಮೆ ಅವರದ್ದು. ಹಾಗಿದ್ದರೂ ಬಿರುಸಿನ ಸ್ಪರ್ಧೆಯ ನಡುವೆ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಕೆದುಬರಿ ಹೆಸರಿಗೆ ಗುರುವಪ್ಪ ಪೂಜಾರಿಯವರು ತನ್ನದೇ ಛಾಪು ಮೂಡಿಸಿದ್ದರು. ಪೂಜಾರಿಯವರ ನಿಧನ ಕಂಬಳಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Mangalore Kambala Player Guruvappa Poojary dies of Road Accident
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm