ಬ್ರೇಕಿಂಗ್ ನ್ಯೂಸ್
25-07-21 11:03 pm Mangaluru Correspondent ಕರಾವಳಿ
ಮಂಗಳೂರು, ಜುಲೈ 25: ಟಿವಿ ಜಾಹೀರಾತಿನಲ್ಲಿ ಯುವತಿಯೊಬ್ಬಳು ತಾಯಿ ಜೊತೆಗೆ ಕಾರಿನಲ್ಲಿ ತೆರಳಿದ್ದಾಗ ಟೈರ್ ಪಂಕ್ಚರ್ ಆಗಿ ಬಳಿಕ ಯುವತಿಯೇ ಟೈರ್ ತೆಗೆದು ಹಾಕುತ್ತಾಳೆ. ಕೊನೆಯಲ್ಲಿ ಅಪ್ಪನನ್ನು ನೋಡಿದ್ದೆ ಎಂದುಸುರುತ್ತಾ ಟಾನಿಕ್ ಬಗ್ಗೆ ಹೇಳುತ್ತಾಳೆ. ಅದು ಜಾಹೀರಾತು. ನಿಜ ಜೀವನದಲ್ಲಿ ಯುವತಿ ಕಾರು ಡ್ರೈವ್ ಮಾಡುವಾಗ ಟೈರ್ ಪಂಕ್ಚರ್ ಆದರೆ ಏನು ಗತಿ ? ಇಂಥಾದ್ದೇ ಪ್ರಸಂಗ ಮಂಗಳೂರಿನಲ್ಲಿ ಇವತ್ತು ಆಗಿತ್ತು.
ಮಹಿಳೆ ಮತ್ತು ಮಗು ಮಾತ್ರ ಇದ್ದ ಕಾರೊಂದು ನಾಗುರಿಯಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದಾಗ ಟಯರ್ ಪಂಕ್ಚರ್ ಆಗಿತ್ತು. ಕೂಡಲೇ ಕಾರಿನಿಂದಿಳಿದ ಮಹಿಳೆ ಹೊರಗೆ ನಿಂತು ಏನು ಮಾಡುವುದೆಂದು ತೋಚದೆ ನಿಂತಿದ್ದರು. ಆಕೆ ಕುಂದಾಪುರ ಮೂಲದ ಮಹಿಳೆಯಾಗಿದ್ದರಿಂದ ಸಂಬಂಧಿಕರು ಹತ್ತಿರ ಇರಲಿಲ್ಲವೋ ಏನೋ..ಮಹಿಳೆಯ ಅಸಹಾಯಕತೆ ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ತಾವೇ ಟೈರ್ ಬಿಚ್ಚಿಸಲು ನೆರವಾಗಿದ್ದಾರೆ. ರಸ್ತೆ ಬದಿ ಕಾರನ್ನು ಪಾರ್ಕ್ ಮಾಡಿ, ಟೈರ್ ತೆಗೆದು ಬೇರೆ ಸ್ಟೆಪಿನ್ ಟಯರ್ ಅಳವಡಿಸಿ ಮಾನವೀಯತೆ ಕಾರ್ಯ ಮಾಡಿದ್ದಾರೆ.

ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿತ್ತು. ಇದೇ ಸಂದರ್ಭ ಹೈವೇ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ನೆರವಿಗೆ ನಿಂತಿದ್ದಾರೆ. ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾಡ್೯ ಆಸಿಫ್ ಸೇರಿ ಮಾಡಿರುವ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
Mangalore Kankandy Traffic Police help a woman fix the car tyre. Traffic police SI Lasrado, Mahesh and Home guard Asif help in fixing the punctured car. The Picture of this goes viral on social media.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am