ಬ್ರೇಕಿಂಗ್ ನ್ಯೂಸ್
24-07-21 04:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 24: ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಅದೇ ನಾಯಿಯನ್ನು ಪಳಗಿಸಿ, ಅಪರಾಧ ಪತ್ತೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಷ್ಟೇ ತಾಕತ್ತು ಇರುವ ವ್ಯಕ್ತಿಯ ರೀತಿ ಪೊಲೀಸರು ರೂಪಿಸುತ್ತಾರೆ. ಹೌದು.. ಡಾಬರ್ ಮನ್, ಮುಧೋಳ ಜಾತಿಯ ನಾಯಿಗಳು ಜಗತ್ತಿನಲ್ಲೇ ಹೆಸರು ಮಾಡಿರುವ ತಳಿಗಳು. ಇವತ್ತು ಮಂಗಳೂರಿನ ಡಾಗ್ ಸ್ಕ್ವಾಡ್ ನಲ್ಲಿ ಡಾಬರ್ ಮನ್ ನಾಯಿಯೊಂದು ಅಕಾಲ ಮೃತ್ಯುಗೀಡಾಗಿತ್ತು. ತಮ್ಮ ಸಿಬಂದಿ ಜೊತೆಗೇ ನಿಷ್ಠಾವಂತ ಸದಸ್ಯನಾಗಿದ್ದ ಶ್ವಾನ ಇನ್ನಿಲ್ಲವಾಗಿದ್ದು ಅಲ್ಲಿದ್ದ ಎಲ್ಲ ಸಿಬಂದಿಯ ಕಣ್ಣಂಚು ಒದ್ದೆ ಮಾಡಿತ್ತು.
2011ರ ಮಾರ್ಚ್ 15ರಂದು ಜನಿಸಿದ್ದ ಈ ಡಾಬರ್ ಮನ್ ನಾಯಿಗೆ ಸುಧಾ ಎಂದು ಹೆಸರಿಡಲಾಗಿತ್ತು. ಹುಟ್ಟಿದಂದಿನಿಂದ ಈ ನಾಯಿಯನ್ನು ಡಾಗ್ ಸ್ಕ್ವಾಡ್ ನಲ್ಲಿ ಪೊಲೀಸ್ ಸಿಬಂದಿಯಾಗಿದ್ದ ಸಂದೀಪ್ ಅವರೇ ಸಾಕಿ ಬೆಳೆಸಿದ್ದರು. ಮಂಗಳೂರಿನ ಡಾಗ್ ಸ್ಕ್ವಾಡ್ ನಲ್ಲಿ ಅದನ್ನು ಪಳಗಿಸಿ, ಒಂದೇ ವರ್ಷದಲ್ಲಿ ಕ್ರೈಮ್ ಡಿಟೆಕ್ಟಿವ್ ಆಗಿ ಡಾಗ್ ಸ್ಕ್ವಾಡ್ ತಂಡಕ್ಕೆ ಸೇರಿಸಲಾಗಿತ್ತು. ಹತ್ತು ವರ್ಷಗಳಿಂದ ಸಂದೀಪ್ ಅವರೇ ಅದನ್ನು ನೋಡಿಕೊಳ್ಳುತ್ತಿದ್ದರು. ಮಂಗಳೂರಿನಲ್ಲಿ ಹಲವಾರು ಕೊಲೆ, ಇನ್ನಿತರ ಅಪರಾಧ ಪತ್ತೆ ಕೃತ್ಯಗಳಲ್ಲಿ ತೊಡಗಿಸಿದ್ದ ಸುಧಾ ಪ್ರಭಾವಿ ಡಿಟೆಕ್ಟಿವ್ ಆಗಿ ಬೆಳೆದಿತ್ತು.








ಎಂಟು ವರ್ಷಗಳ ಹಿಂದೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದಿದ್ದ ವಾಚ್ ಮನ್ ಕೊಲೆ, ಐದು ವರ್ಷಗಳ ಹಿಂದೆ ಮುಚ್ಚೂರಿನ ಗಂಜಿಮಠದಲ್ಲಿ ಮಗನೇ ತಂದೆಯನ್ನು ಕೊಲೆಗೈದ ಕೃತ್ಯ, ವಾಮಂಜೂರಿನಲ್ಲಿ ನಡೆದ ಕೊರಗಜ್ಜ ಕಟ್ಟೆ ಕಳವು ಸೇರಿದಂತೆ ಹಲವಾರು ಕೊಲೆ, ಕಳವು ಪ್ರಕರಣಗಳಲ್ಲಿ ಸುಳಿವುಗಳನ್ನು ಕೊಟ್ಟಿದ್ದ ಬಗ್ಗೆ ಶ್ವಾನವನ್ನು ಸಾಕಿದ್ದ ಸಂದೀಪ್ ನೆನಪಿಸುತ್ತಾರೆ.
ಆದರೆ, ಏಳು ತಿಂಗಳ ಹಿಂದೆ ಶ್ವಾನದ ಸ್ವೀಟ್ ಹಾರ್ಟ್ ಆಗಿದ್ದ ಸಂದೀಪ್ ಬೇರೆ ಕಡೆಗೆ ವರ್ಗಾವಣೆ ಆಗಿದ್ದರು. ಆಬಳಿಕ ಸೊರಗಿದ ನಾಯಿಗೆ ತಲೆಯ ಭಾಗದಲ್ಲಿ ಮೂರು ತಿಂಗಳ ಹಿಂದೆ ಕ್ಯಾನ್ಸರ್ ರೀತಿಯ ಗಡ್ಡೆ ಕಾಣಿಸಿತ್ತು. ಆನಂತರ ತೀವ್ರವಾಗಿ ಬಳಲಿದ ನಾಯಿ ಇಂದು ಬೆಳಗ್ಗೆ ಸಾವು ಕಂಡಿದೆ. ಆದರೆ, ನಿಷ್ಠಾವಂತ ನಾಯಿ ಸತ್ತಿದ್ದನ್ನು ಸಂದೀಪ್ ಮತ್ತು ಡಾಗ್ ಸ್ಕ್ವಾಡ್ ತಂಡದ ಸದಸ್ಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದುಕೊಂಡೇ ಇಂದು ಶ್ವಾನದ ಅಂತ್ಯಕ್ರಿಯೆಗೆ ಬಂದಿದ್ದರು.






ಡಾಗ್ ಸ್ಕ್ವಾಡ್ ನಲ್ಲಿದ್ದ ನಾಯಿ ಕರ್ತವ್ಯದಲ್ಲಿದ್ದಾಗಲೇ ಸತ್ತಿದ್ದರಿಂದ ಪೊಲೀಸ್ ಗ್ರೌಂಡಿನಲ್ಲಿ ರಾಜ್ಯ ಸರಕಾರಿ ಮರ್ಯಾದೆ ನೀಡಲಾಯ್ತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಸಹೋದ್ಯೋಗಿ ನಾಯಿಗೆ ಹೂಹಾರ ತೊಡಿಸಿ, ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಆಬಳಿಕ ಸಿಎಆರ್ ಪಡೆಯಿಂದ ಮೂರು ಸುತ್ತು ಕುಶಾಲು ತೋಪು ಹಾರಿಸಿ ಸರಕಾರಿ ಗೌರವ ಸಲ್ಲಿಸಲಾಯ್ತು. ಸಿಡಿ ಗುಂಡನ್ನು ಗಾಳಿಯಲ್ಲಿ ಹಾರಿಸಿ, ಶ್ವಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು.
ಇದೇ ವೇಳೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ನಿಷ್ಠಾವಂತ ಶ್ವಾನದ ಗುಣಗಾನ ಮಾಡಿದ್ರು. ಅಲ್ಲದೆ, ನಾಯಿ ಸಾಕಿ ಬೆಳೆಸಿದ ಸಿಬಂದಿ ಸಂದೀಪ್ ಅವರ ಬಳಿ ತೆರೆಳಿ ಸಮಾಧಾನ ಸೂಚಿಸುವ ಮಾತನಾಡಿದ್ದು ವಿಶೇಷವಾಗಿತ್ತು. ಡಾಗ್ ಸ್ಕ್ವಾಡ್ ತಂಡದ ನಿಷ್ಠೆಯ ಸದಸ್ಯನಾಗಿದ್ದ ಸುಧಾ ಮರಳಿ ಮಣ್ಣಿಗೆ ಸೇರಿದೆ. ಆದರೆ, ತನ್ನ ವೃತ್ತಿಯ ಉದ್ದಕ್ಕೂ ತೋರಿದ ಛಾಪು ಮಾತ್ರ ಡಾಗ್ ಸ್ಕ್ವಾಡ್ ತಂಡದ ಸದಸ್ಯರಿಗೆ ಶಾಶ್ವತ ಆಗಿರುತ್ತದೆ.
Video:
Karnataka's Mangalore police In Saturday conducted with full police honors including a Gun Salute, the last rites of detective sniffer dog Sudha who died today morning after putting in a decade of service. Sudha, a Doberman who had helped to cracked many crimes had fallen sick two months back and passed away on Monday night. Police sniffer dog Sudha laid to rest with full state honor in Mangalore.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm