ಬ್ರೇಕಿಂಗ್ ನ್ಯೂಸ್
19-07-21 02:40 pm Mangaluru Correspondent ಕರಾವಳಿ
ಬೆಳ್ತಂಗಡಿ, ಜುಲೈ 19: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದರು. ವಿಪರೀತ ಮಳೆಯಿಂದಾಗಿ ಶಾಮಿಯಾನ ಹಾಕಿ ಪತ್ನಿಯ ಅಂತ್ಯಕ್ರಿಯೆ ವಿಧಿಯನ್ನು ನಡೆಸಲಾಗಿತ್ತು. ಆದರೆ, ಮರುದಿನ ಅಂತ್ಯವಿಧಿಗೆ ಹಾಕಿದ್ದ ಶಾಮಿಯಾನದ ಕಂಬಕ್ಕೆ ಗಂಡನೂ ನೇಣು ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನಡೆದಿದೆ.
ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ಘಟನೆ ನಡೆದಿದ್ದು ಚಂದ್ರಾವತಿ (49) ಮತ್ತು ಆಕೆಯ ಗಂಡ ಶಿವಪ್ಪ ಗೌಡ (56) ಮೃತರು.
ಚಂದ್ರಾವತಿ ಶನಿವಾರ ಮಧ್ಯಾಹ್ನ ದನಕ್ಕೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದರು. ಆದರೆ, ತೋಟಕ್ಕೆ ಹೋದವರು ಮರಳಿ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ, ಆಕೆ ತೋಟದ ಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು.
ಗಂಡನ ವಿಪರೀತ ಕುಡಿತದ ಚಟದಿಂದಾಗಿ ಬೇಸತ್ತಿದ್ದ ಪತ್ನಿ ಚಂದ್ರಾವತಿ ಮನೆಯಲ್ಲಿ ಬದುಕುವುದೇ ಕಷ್ಟ ಎನ್ನುವ ಸ್ಥಿತಿಗೆ ತಲುಪಿದ್ದರು. ಗಂಡನ ಪೀಡನೆಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಅಂದು ರಾತ್ರಿಯೇ ಸ್ಥಳೀಯರು ಸೇರಿ ಮನೆಯ ಆವರಣದಲ್ಲಿ ಮತ್ತು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶಾಮಿಯಾನ ಹಾಕಿ, ರಾತ್ರಿ ವೇಳೆಗೆ ಚಂದ್ರಾವತಿಯ ಅಂತ್ಯವಿಧಿ ಮುಗಿಸಿದ್ದರು.
ಮರುದಿನ ಬೆಳಗ್ಗೆ ನೋಡಿದರೆ, ಶಿವಪ್ಪ ಗೌಡ ಅಂತ್ಯ ವಿಧಿಗೆ ಹಾಕಿದ್ದ ಶಾಮಿಯಾನದ ರಾಡಿಗೆ ನೇಣು ಹಾಕ್ಕೊಂಡು ಮೃತಪಟ್ಟಿದ್ದು ಕಂಡುಬಂದಿದೆ. ಶಿವಪ್ಪ ಗೌಡ ಕೂಡ ಅದೇ ರೀತಿ ಅಂತ್ಯ ಕಂಡಿದ್ದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ. ಶಿವಪ್ಪ - ಚಂದ್ರಾವತಿ ದಂಪತಿಗೆ ಮಕ್ಕಳು ಇರಲಿಲ್ಲ. ತನ್ನ ತಾಯಿ ನಾಗಮ್ಮ ಜೊತೆ ಮುಡಿಪಿರೆಯಲ್ಲಿ ಶಿವಪ್ಪ ಗೌಡ ವಾಸವಿದ್ದರು. ಈಗ ಮಗ ಮತ್ತು ಸೊಸೆ ಸಾವು ಕಂಡಿದ್ದರಿಂದ ಮನೆಯಲ್ಲಿ ವೃದ್ಧ ತಾಯಿ ಒಬ್ಬಂಟಿಯಾಗಿದ್ದಾರೆ. ಘಟನೆ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident reported from Mudipire in Machina village in the taluk, a man ended his life hanging himself from the rod of the shamiyana erected at the funeral site of his wife. Chandravathi (49), wife of Shivappa Gowda (56), had ended her life on Saturday. Shivappa ended his life in the early hours of Sunday July 18.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am