ಬ್ರೇಕಿಂಗ್ ನ್ಯೂಸ್
03-07-21 04:11 pm Mangalore Correspondent ಕರಾವಳಿ
ಮೂಡುಬಿದ್ರೆ, ಜುಲೈ 3: ಚಿರತೆಯ ಬಾಯಿಗೆ ಸಿಕ್ಕಿ ಆಹಾರ ಆಗಬೇಕಿದ್ದ ನಾಯಿ, ಅದರ ಬಾಯಿಂದಲೇ ತಪ್ಪಿಸಿಕೊಂಡು ಓಡಿಕೊಂಡು ಬಂದು ಮರಳಿ ಮನೆ ಸೇರಿದ ಘಟನೆ ಇಲ್ಲಿನ ಪಡು ಕೋಣಾಜೆಯಲ್ಲಿ ನಡೆದಿದೆ. ಚಿರತೆ ಬಾಯಿಂದ ಪಾರಾಗಿಬಂದ ನಾಯಿಯ ಸಾಹಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಡುಬಿದ್ರೆ ತಾಲೂಕಿನ ಪಡು ಕೋಣಾಜೆಯ ಸತೀಶ್ ಎಂಬವರ ಮನೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪಡುಕೋಣಾಜೆಯ ಸತೀಶ್ ಎಂಬವರ ಮನೆ ಆವರಣಕ್ಕೆ ನುಗ್ಗಿದ್ದ ಚಿರತೆ ಮೆಲ್ಲನೆ ಹೆಜ್ಜೆ ಇಡುತ್ತಾ ಬಂದು ಜಗುಲಿಯ ಹೊರಗೆ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಓಡಿತ್ತು. ಆದರೆ, ಆನಂತರ ನಾಯಿ ಕೊಸರಾಡುತ್ತಾ ಚಿರತೆ ಬಾಯಿಂದ ತಪ್ಪಿಸಿಕೊಂಡು ಬಂದಿದೆ. ನಾಯಿಯ ಬೊಬ್ಬೆ ಕೇಳಿ ಮನೆಯವರು ಕೂಡ ಎದ್ದು ಬಂದಿದ್ದಾರೆ.
ಅಷ್ಟರಲ್ಲಿ ಇನ್ನೊಂದು ಕಡೆಯಿಂದ ಮನೆಯ ಒಳಕ್ಕೆ ಓಡಿಬಂದು ಚಿರತೆ ಬಾಯಿಂದ ತಪ್ಪಿಸಿಕೊಂಡಿದೆ. ಅಲ್ಲೀ ವರೆಗೂ ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿತ್ತು. ಆದರೆ, ನಾಯಿಯನ್ನು ಇನ್ನೇನು ಹಿಡಿಯುತ್ತೆ ಎನ್ನುವಾಗ ನಾಯಿ ನೇರವಾಗಿ ಮನೆ ಬಳಿಯ ಶೆಡ್ ಒಳ ಸೇರಿತ್ತು. ಅರಣ್ಯ ಉಪ ವಿಭಾಗದ ಅಧಿಕಾರಿ ಮಂಜುನಾಥ್ ಗಾಣಿಗ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರಲ್ಲಿ ಚಿರತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಚಿರತೆಯನ್ನು ಹಿಡಿಯಲು ಬೋನು ಹಾಕಲು ರೆಡಿ ಮಾಡಿದ್ದಾರೆ.
Video: Click
In an incident that occurred on Thursday night, a leopard reportedly ventured into the compound of a residence and caught a dog, but the canine managed to escape the leopard’s mouth and save itself when the wild animal leaped across the compound wall at Padukonaje in the Taluk. The entire episode was captured on CCTV, it is learned.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 05:24 pm
Mangalore Correspondent
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
08-06-25 03:59 pm
HK News Desk
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm