ಬ್ರೇಕಿಂಗ್ ನ್ಯೂಸ್
02-07-21 10:03 pm Mangaluru Correspondent ಕರಾವಳಿ
ಉಳ್ಳಾಲ, ಜು.2: ಮುಸ್ಲಿಂ ಶಾಸಕ ಯು.ಟಿ.ಖಾದರ್ ಅವರು ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಅಳವಡಿಸಲು ಇನ್ಪೋಸಿಸ್ ನಂತಹ ಅಂತರಾಷ್ಟ್ರೀಯ ಕಂಪೆನಿಯಿಂದ ಒಂದೂವರೆ ಕೋಟಿ ಅನುದಾನ ತಂದುದರ ವಿರುದ್ಧ ಭೂಕಬಳಿಕೆ ಸ್ವರೂಪ ನೀಡುವುದು ಸಲ್ಲದೆಂದು ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟಿನಲ್ಲಿ ಪತ್ರಿಕಾಗೋಷ್ಟಿ ಕರೆದು ಅವರು ಮಾತನಾಡಿದರು. ಯು.ಟಿ.ಖಾದರ್ ಅವರು ತಾನೊಬ್ಬ ಮುಸ್ಲಿಮನಾದರೂ ಸಹ ಬಹಳ ಮುತುವರ್ಜಿ ವಹಿಸಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್ಫೋಸಿಸ್ ಕಂಪನಿಯಿಂದ ಒಂದೂವರೆ ಕೋಟಿ ಅನುದಾನ ತಂದಿದ್ದಾರೆ. ಆದರೆ ಕೆಲವರು ಷಡ್ಯಂತರ ನಡೆಸಿ ಭೂಕಬಳಿಕೆ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಇರುವ ಒಂದೂವರೆ ಕೋಟಿ ಅನುದಾನದಲ್ಲಿ ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿಯಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಸಾಧ್ಯ ,ಹತ್ತಿರದ ಶವ ಹೂಳುವ 45 ಸೆಂಟ್ಸ್ ಜಾಗದಲ್ಲಿ ನಿರ್ಮಿಸೋದಾದರೆ 50 ಲಕ್ಷ ಹೆಚ್ಚು ಹಣ ಬೇಕೆಂದು ಕಂಪನಿ ಪ್ರಮುಖರು ಹೇಳಿದ್ದಾರೆ. ಉಳ್ಳಾಲದ ಇತಿಹಾಸದಲ್ಲೇ ಯಾರೊಬ್ಬ ನಾಯಕರೂ ರುದ್ರಭೂಮಿಗೆ ಇಷ್ಟೊಂದು ದೊಡ್ಡ ಅನುದಾನ ತಂದಿಲ್ಲ. ಆದರೂ ಭೂಕಬಳಿಕೆ ಎಂದು ಗುಳ್ಳೆಬ್ಬಿಸಿ ಶಾಸಕ ಯು.ಟಿ.ಖಾದರ್ ಅವರನ್ನು ಎತ್ತಿ ಕಟ್ಟುತ್ತಿರುವುದು ಸರಿಯಲ್ಲ. ಬದಲಾವಣೆ ಬೇಕಿದ್ದರೆ ಶಾಸಕರೊಂದಿಗೆ ಮಾತನಾಡಲಿ, ಅದು ಬಿಟ್ಟು ಈ ರೀತಿ ಅಪಪ್ರಚಾರ ಮಾಡೋದನ್ನ ನಿಲ್ಲಿಸಲಿ ಎಂದರು.



ಮುಖಂಡರಾದ ಸುರೇಶ್ ಭಟ್ನಗರ ಮಾತನಾಡಿ ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಗೆ ಅನೇಕ ವರುಷಗಳ ಇತಿಹಾಸವಿದೆ. ಇನ್ನು ಇದನ್ನ ಕಬಳಿಸೋ ಪ್ರಶ್ನೆ ಎಲ್ಲಿಂದ ಬರುತ್ತೆ. ಇನ್ಫೋಸಿಸ್ ನಿಂದ ವಿದ್ಯುತ್ ಚಿತಾಗಾರ ನಿರ್ಮಾಣವಾಗೋ ವಿಚಾರವನ್ನ ಸ್ಮಶಾನದ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅವರಲ್ಲಿ ಹೇಳಿದಾಗ ಅವರೂ ಆ ಯೋಜನೆಯನ್ನ ಪ್ರಶಂಸಿಸಿದ್ದಾರೆ. ಪ್ರಸ್ತುತ ಸ್ಮಶಾನದಲ್ಲಿ ಶವ ಸುಡಲು ಸುಮಾರು 4000 ರೂಪಾಯಿ ಖರ್ಚು ತಗಲುತ್ತಿದ್ದು, ಕೇವಲ 200 ರೂಪಾಯಿ ಖರ್ಚಲ್ಲಿ ಜನರು ಶವ ಸುಡುವಂತಾಗಲಿ ಎಂಬ ಸದುದ್ದೇಶದಿಂದ ಯು.ಟಿ.ಖಾದರ್ ಅವರು ಈ ಯೋಜನೆಯನ್ನ ತಂದಿದ್ದಾರೆ. ಸುಖಾಸುಮ್ಮನೆ ಸ್ಮಶಾನದ ಜಾಗ ಕಬಳಿಸುತ್ತಿದ್ದಾರೆ ಎಂದು ಷಡ್ಯಂತರದಿಂದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು. ಚೆಂಬುಗುಡ್ಡೆ ಪ್ರದೇಶ ಎತ್ತರ ಇರೋದರಿಂದ ಸ್ಮಶಾನಕ್ಕೆ ಕಾಯ್ದಿರಿಸಿದ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲಾಯಿತು. ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಸಿಗಬೇಕೆಂಬ ಸದುದ್ದೇಶದಿಂದ ಶಾಸಕರು ಈ ಕಾಮಗಾರಿ ನಡೆಸಿದರೂ ಅದಕ್ಕೂ ಸ್ಮಶಾನದ ಜಾಗ ಮಾರಾಟ ನಡೆಸಿದ್ದಾರೆಂದು ಅಪಪ್ರಚಾರ ನಡೆಸಿದರು. ಶಾಸಕ ಯು.ಟಿ ಖಾದರ್ ಅವರಿಂದ ಹಿಂದೂಗಳಿಗೆ ಎಂದಿಗೂ ಅನ್ಯಾಯವಾಗಿಲ್ಲ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ, ಸದಸ್ಯರಾದ ಶಶಿಕಲಾ, ಪ್ರಮುಖರಾದ ದೀಪಕ್ ಪಿಲಾರ್, ನಾಗೇಶ್ ಶೆಟ್ಟಿ, ವಸಂತ್ ಭಟ್ನಗರ, ಕಿಶೋರ್ ಮೊದಲಾದವರು ಇದ್ದರು.
Ullal Ishwar Ullal appreciates MLA UT Khaders efforts for Chembugudde Electric Crematorium implementation
28-08-26 12:13 pm
HK News Staffer
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am