ಬ್ರೇಕಿಂಗ್ ನ್ಯೂಸ್
19-06-21 04:57 pm Mangaluru Correspondent ಕರಾವಳಿ
ಉಳ್ಳಾಲ, ಜೂ.19: ಕಂಠ ಪೂರ್ತಿ ಕುಡಿದು ಸ್ಕೂಟರ್ ಚಲಾಯಿಸುತ್ತಿದ್ದ ಯುವಕರಿಬ್ಬರು ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದರೂ, ಆಸ್ಪತ್ರೆಗೆ ದಾಖಲಿಸಲು ಬಂದ ಜನರಿಗೆ ಹಿಂದುತ್ವದ ಪಾಠ ಹೇಳಿದ ಘಟನೆ ತೊಕ್ಕೊಟ್ಟು ಬಳಿಯ ಬಬ್ಬುಕಟ್ಟೆ ಶಾಲೆ ಬಳಿ ನಡೆದಿದೆ.
ಮಧ್ಯಾಹ್ನ 3.15ರ ಸುಮಾರಿಗೆ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಶಾಲೆಯ ಬಳಿ ಯುವಕರಿಬ್ಬರು ಚಲಾಯಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದೆ. ಕೂಡಲೇ ವಾಹನ ಸವಾರರು, ಸ್ಥಳೀಯರು ಯುವಕರ ಸಹಾಯಕ್ಕೆ ಓಡೋಡಿ ಬಂದಿದ್ದಾರೆ. ಘಟನೆಯಲ್ಲಿ ಸ್ಕೂಟರ್ ನಲ್ಲಿದ್ದ ಓರ್ವ ಯುವಕನ ಮುಖ ಮೂತಿ ಒಡೆದು ರಕ್ತದೋಕುಳಿ ಹರಿಯುತ್ತಿತ್ತು. ಗಾಯಾಳು ಯುವಕರನ್ನು ಆಸ್ಪತ್ರೆಗೆ ಸೇರಿಸಲು ನೆರೆದಿದ್ದವರು ಮುಂದಾಗಿದ್ದ ವೇಳೆ ಸ್ಕೂಟರ್ ನಿಂದ ಬಿದ್ದು ಓರೆ, ಕೋರೆಯಾಗಿ ನಿಂತಿದ್ದ ಯುವಕರ ಬಾಯಲ್ಲಿ ಅವಾಚ್ಯ ಶಬ್ದಗಳೇ ಹೊರಬಿದ್ದಿವೆ. ಗಾಯಾಳು ಯುವಕರಿಬ್ಬರು ಕುಡಿದ ಮತ್ತಿನಲ್ಲಿ ನಿಲ್ಲುವುದಕ್ಕೆ ಆಗದಿದ್ದರೂ ಹಿಂದುತ್ವದ ಪಾಠ ಹೇಳಿದ್ದಾರೆ. ಯುವಕರು ಬಬ್ಬುಕಟ್ಟೆಯಲ್ಲಿ ಬಿದ್ದಿದ್ದರೂ ಸಹ ಫೋನಲ್ಲಿ ತಾವು ರೈಲ್ವೇ ಸ್ಟೇಷನ್ ಎದುರು ಬಿದ್ದಿರುವುದಾಗಿ ಹೇಳುತ್ತಿದ್ದು ಅವರು ಎಷ್ಟು ಕುಡಿದಿದ್ದಾರೆ ಎನ್ನುವುದನ್ನು ತೋರಿಸುತ್ತಿತ್ತು.




ನೆರೆದಿದ್ದ ಮಂದಿ ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಕ್ರುದ್ದಗೊಂಡ ಗಾಯಾಳು ಯುವಕರು ನೀವೊಂದು ಹಿಂದೂಗಳಾ, ಹಿಂದುತ್ವ ಗೊತ್ತಿದ್ಯಾ ನಿಮಗೆ ಎಂದು ಹಿಂದುತ್ವದ ಹೆಸರಲ್ಲಿ ಬೈದಿದ್ದಾರೆ.
ಅರ್ಧ ತಾಸಿನ ಕಾಲ ನಶೆಯಲ್ಲಿದ್ದ ಯುವಕರು ರಸ್ತೆ ಮಧ್ಯದಲ್ಲೇ ದೊಂಬರಾಟ ನಡೆಸಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದು ಉಳ್ಳಾಲ ಪೊಲೀಸರು ಸ್ಥಳಕ್ಕೆ ಬಂದಾಗ ಯುವಕರ ನಶೆ ಸ್ವಲ್ಪ ಮಟ್ಟಿಗೆ ಇಳಿದಿದ್ದು ಪೊಲೀಸರು ನಶೆಯಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಯುವಕರ ಸ್ಕೂಟರ್ ಪಲ್ಟಿ ; ನಡುರಸ್ತೆಯಲ್ಲಿ ಹಿಂದುತ್ವದ ಪಾಠ !Mangalore: ಕುಡಿದ ಮತ್ತಿನಲ್ಲಿ ಯುವಕರ ಸ್ಕೂಟರ್ ಪಲ್ಟಿ ; ಮುಖದಲ್ಲಿ ರಕ್ತ ಒಸರುತ್ತಿದ್ದರೂ ನಡುರಸ್ತೆಯಲ್ಲಿ ಹಿಂದುತ್ವದ ಪಾಠ ! https://bit.ly/3gLhzkP #thokottunews #newsmangalore #mangalorelatestnews #mangalore #bikeaccidentmangalore #tulu #kannadanews #ullalnews
Posted by Headline Karnataka on Saturday, June 19, 2021
Mangalore Bike skids off-road in Thokottu Injured Drunk Men gives Speech on Hindutva. Ullal police reached the spot and took both and have admitted them to the hospital.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm