ಬ್ರೇಕಿಂಗ್ ನ್ಯೂಸ್
18-05-21 02:52 pm Mangalore Correspondent ಕರಾವಳಿ
ಮಂಗಳೂರು, ಮೇ 18 : ಕೋವಿಡ್ ಲಸಿಕೆಗೆ ಒಂದೆಡೆ ಭಾರೀ ಬೇಡಿಕೆ ಬಂದಿದ್ದರೆ, ಇನ್ನೊಂದೆಡೆ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದವರು ಕೂಡ ಲಸಿಕೆ ಪಡೆಯಲು ಆರಂಭಿಸಿದ್ದಾರೆ. ಈ ನಡುವೆ ಮಾಜಿ ಸಚಿವ ಯು.ಟಿ ಖಾದರ್ ಮೊದಲು ಲಸಿಕೆಗೆ ವಿರೋಧಿಸಿ, ಈಗ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿರುವುದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಗರ ಬಾಯಿಗೆ ಆಹಾರವಾಗಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಖಾದರ್ ತಮ್ಮ ಮನೆಯಲ್ಲಿಯೇ ಲಸಿಕೆ ಪಡೆದಿದ್ದರು. ಖಾದರ್ ಲಸಿಕೆ ಪಡೆದಿದ್ದ ಫೋಟೊ ಜಾಲತಾಣದಲ್ಲಿ ಬರುತ್ತಿದ್ದಂತೆ ವಿರೋಧಿಗಳು ಮಾಜಿ ಸಚಿವ ಯು.ಟಿ ಖಾದರ್ ಮೇಲೆ ಪ್ರಶ್ನೆಗಳ ಛೂಬಾಣ ಬಿಟ್ಟಿದ್ದು, ವ್ಯಂಗ್ಯ ಮಾತಿನಿಂದ ತಿವಿಯುತ್ತಿದ್ದಾರೆ.
ದೇಶದಲ್ಲಿ ಲಸಿಕೆ ಪ್ರಕ್ರಿಯೆ ಆರಂಭವಾದಾಗ ಯು.ಟಿ ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಸರ್ಕಾರ ಜನರನ್ನು ಬಲವಂತವಾಗಿ ಲಸಿಕೆ ಪಡೆಯುವಂತೆ ಮಾಡುತ್ತಿದೆ. ಜನ ಭಯದಿಂದ ಲಸಿಕೆ ಪಡೆಯುವ ರೀತಿಯ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ.
ಮೊದಲ ಲಸಿಕೆಯನ್ನು ಆಸ್ಪತ್ರೆಗಳ "ಡಿ' ಗ್ರೂಪ್ ನೌಕರರಿಗೆ ನೀಡಿ ಅವರ ಜೀವದ ಮೇಲೆ ಚೆಲ್ಲಾಟವಾಡುತ್ತಿದೆ ಎಂಬಿತ್ಯಾದಿ ಟೀಕಾಸ್ತ್ರವನ್ನು ಸರ್ಕಾರದ ಮೇಲೆ ಖಾದರ್ ಸುರಿದಿದ್ದರು. ಅಂದಿನ ಯು.ಟಿ ಖಾದರ್ ಹೇಳಿಕೆ ಸುದ್ದಿ ವರದಿಯನ್ನು ಈಗ ಬಿಜೆಪಿಗರು ಅಸ್ತ್ರವಾಗಿ ಬಳಸಿಕೊಂಡಿದ್ದು, ಜಾಲತಾಣದಲ್ಲಿ ಚುಚ್ಚಿದ್ದಾರೆ.
ಖಾದರ್ ಸುದ್ದಿಗೋಷ್ಠಿಯ ವರದಿಯ ಚಿತ್ರವನ್ನು ಹಾಕಿ, ಅಂದಿನ ಹೇಳಿಕೆಯನ್ನು ಮತ್ತು ಖಾದರ್ ನಗುನಗುತ್ತಾ ಲಸಿಕೆ ಪಡೆದಿರುವ ಫೋಟೋವನ್ನು ಹಾಕಿ ಕಥೆ ಹೇಳುವ ಎರಡು ಚಿತ್ರಗಳು ಅಂತಾ ಗೇಲಿ ಮಾಡಿದ್ದಾರೆ.
Mysore MP Pratap Simha took his Facebook to mock UT Khader for getting Covid Vaccine. Previously Khader had alleged that people are scared to take BJP made vaccine so MP took to taunt why was then vaccine required now.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm