ಪಾಂಡವರಕಲ್ಲು ಗರಡಿ ಅಪವಿತ್ರ ; ಆರೋಪಿಗಳ ಶೀಘ್ರ ಪತ್ತೆಗೆ ರಾಮಸೇನೆ ಆಗ್ರಹ

16-05-21 02:31 am       Mangaluru Correspondent   ಕರಾವಳಿ

ಕಿಡಿಗೇಡಿಗಳು ನೀಚಕೃತ್ಯವನ್ನು ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಗರಡಿ ಕ್ಷೇತ್ರದ ಮೇಲೆ ಎಸಗಿದ್ದಾರೆ. ಕಿಡಿಗೇಡಿಗಳ ಕೃತ್ಯವನ್ನು ರಾಮಸೇನಾ ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.‌

ಮಂಗಳೂರು, ಮೇ 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 3- 4 ವರ್ಷಗಳಿಂದ ಪುಣ್ಯ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕೃತ್ಯ ನಡೆಯುತ್ತಿದ್ದು ಈಗ ಮತೊಮ್ಮೆ ಕಿಡಿಗೇಡಿಗಳು ಅದೇ ರೀತಿಯ ನೀಚಕೃತ್ಯವನ್ನು ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಗರಡಿ ಕ್ಷೇತ್ರದ ಮೇಲೆ ಎಸಗಿದ್ದಾರೆ. ಕಿಡಿಗೇಡಿಗಳ ಕೃತ್ಯವನ್ನು ರಾಮಸೇನಾ ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.‌

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ರಾಮಸೇನಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮನೀಶ್ ಸಾಲಿಯಾನ್, ಪಾಂಡವರಕಲ್ಲು ಗರಡಿ ಕ್ಷೇತ್ರ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ಸ್ಥಳ. ಹಿಂದುಗಳು ಮಾತ್ರವಲ್ಲದೆ, ಅನ್ಯಧರ್ಮದ ಜನರು ಕೂಡ ಗರಡಿಯನ್ನು ಗೌರವಿಸಿ ಆರಾಧಿಸುತ್ತಿದ್ದರು. ಇಂತಹ ಪವಿತ್ರ ಸ್ಥಳದಲ್ಲಿ ಯಾರೋ ಕಿಡಿಗೇಡಿಗಳು ಬಾಟಲಿಗಳನ್ನು ಒಡೆದು ಗರಡಿ ಆವರಣದಲ್ಲಿ ಭಕ್ತಾದಿಗಳು ಓಡಾಡದಂತೆ ಮಾಡುವ ನೀಚ ಕೃತ್ಯವನ್ನು ಮಾಡಿದ್ದಾರೆ.

ಹಿಂದುಗಳು ಆರಾಧಿಸುವ ಪುಣ್ಯಸ್ಥಳದ ಮೇಲೆ ಮಾಡಿರುವ ನೀಚ ಕೃತ್ಯವನ್ನು ರಾಮ್ ಸೇನಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಪೊಲೀಸ್ ಇಲಾಖೆಯು ಈ ನೀಚ ಕೃತ್ಯ ಮಾಡಿದವರನ್ನು ಶೀಘ್ರವಾಗಿ ಪತ್ತೆಹಚ್ಚಿ ಅವರ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ರಾಮ್ ಸೇನೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

Read: ಪಾಂಡವರಕಲ್ಲು ಗರಡಿ ಕ್ಷೇತ್ರ ಅಪವಿತ್ರ ; ಬಾಟಲಿಗಳನ್ನು ಒಡೆದು ಕಿಡಿಗೇಡಿ ಕೃತ್ಯ !

 Sri Ram Sena Demands strict action for Spoiling Shree Brahma Baidarkala Garodi temple in Bantwal, Mangalore. State Secretary Manish Salin strongly condemns the cruel act of the miscreants