ಬ್ರೇಕಿಂಗ್ ನ್ಯೂಸ್
15-05-21 12:53 pm Udupi Correspondent ಕರಾವಳಿ
ಉಡುಪಿ, ಮೇ 15: ಇಲ್ಲಿನ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳೇ ಸೇರಿ ಜೈಲಿನ ಸುಪರಿಡೆಂಟ್ ವಿರುದ್ಧ ಒಂದು ದಿನದ ಉಪವಾಸ ನಡೆಸಿದ್ದಾರೆ. ಜೈಲಿನ ಸುಪರಿಡೆಂಟ್ ಶ್ರೀನಿವಾಸ ಗೌಡ, ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆಂದು ಆರೋಪಿಸಿ ಕೈದಿಗಳು ಉಪವಾಸ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಸರಕಾರದಿಂದ ಕೈದಿಗಳಿಗೆ ಏನೆಲ್ಲಾ ಸೌಲಭ್ಯಗಳನ್ನು ಕೊಡುತ್ತಾರೋ, ಅವನ್ನು ಜೈಲು ಸುಪರಿಡೆಂಟ್ ಕೊಡುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೈದಿಗಳು ಸೇರಿಕೊಂಡು ಶುಕ್ರವಾರ ಇಡೀ ದಿನ ಆಹಾರ ಸ್ವೀಕರಿಸದೆ ನಿರಶನ ನಡೆಸಿದ್ದಾರೆ. ಜೈಲು ಸುಪರಿಡೆಂಟ್ ಮತ್ತು ಮತ್ತೊಬ್ಬ ಅಧಿಕಾರಿ ಸೇರಿ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದು, ಆಹಾರ ಇನ್ನಿತರ ಸೌಲಭ್ಯ ನೀಡಬೇಕಿದ್ದರೆ ಲಂಚ ಕೇಳುತ್ತಿದ್ದರು ಎಂದು ಆರೋಪ ಕೇಳಿಬಂದಿದೆ.
ಅಲ್ಲದೆ, ಕೈದಿಗಳಿಗೆ ಕಳಪೆ ಆಹಾರವನ್ನು ಪೂರೈಸಲಾಗುತ್ತಿದೆ. ಕಾನೂನು ಪ್ರಕಾರ, ವಾರದಲ್ಲಿ ಒಮ್ಮೆಯಾದರೂ ಮಾಂಸ, ಮೀನಿನ ಪದಾರ್ಥ ಕೊಡಬೇಕೆಂದಿದೆ. ಆದರೆ, ಇಲ್ಲಿ ಕೋಳಿಯ ಕಾಲುಗಳನ್ನು ಹಾಕಿ ಸಾರು ಮಾಡಿ ಕೊಡುತ್ತಿದ್ದಾರೆ. ಜೈಲಿನ ಕೈದಿಗಳಿಗೆ ಸಿಗುತ್ತಿದ್ದ ಸೌಲಭ್ಯ, ಇನ್ನಿತರ ರೇಷನ್ ವಸ್ತುಗಳನ್ನು ಜೈಲಿನ ಅಧಿಕಾರಿಗಳು ತಮ್ಮ ಮನೆಗೆ ಒಯ್ಯುತ್ತಿದ್ದಾರೆ. ಪ್ರತಿಯೊಂದಕ್ಕೂ ಶ್ರೀನಿವಾಸ ಗೌಡ ಸೇರಿ ಜೈಲಿನ ಅಧಿಕಾರಿಗಳು ಕೈದಿಗಳ ಬಳಿಯಿಂದಲೇ ಹಣ ಕೇಳುತ್ತಿದ್ದಾರೆ ಎಂದು ಕೈದಿಯೊಬ್ಬ ಅಲ್ಲಿನ ಪರಿಸ್ಥಿತಿ ಹೇಳಿಕೊಂಡಿದ್ದಾನೆ.
ಜೈಲಿನ ಸ್ಥಿತಿಯ ಬಗ್ಗೆ ಕೈದಿಗಳು ಸೇರಿ ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಆಬಳಿಕ ಜಿಲ್ಲಾ ನ್ಯಾಯಾಧೀಶರು ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಜೈಲಿಗೆ ಭೇಟಿ ನೀಡಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರಿಂದ ಕೈದಿಗಳು ತಮ್ಮ ನಿರಶನ ಅಂತ್ಯಗೊಳಿಸಿದ್ದಾರೆ.
Inmates at Kajaraguthu district prison at Hiriadka, Udupi here held a hunger strike accusing the jail superintendent Srinivas Gowda of misusing the facilities given to the prisoners.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm