ಬ್ರೇಕಿಂಗ್ ನ್ಯೂಸ್
14-05-21 07:01 pm Mangaluru Correspondent ಕರಾವಳಿ
ಮಂಗಳೂರು, ಮೇ 14: ಕೆಎಂಸಿ, ಯೇನಪೋಯ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಸಿಬಂದಿಯನ್ನು ಕೋವಿಡ್ ನಿಯಮ ಉಲ್ಲಂಘಿಸಿ ಬಸ್ಸಿನಲ್ಲಿ ತುಂಬಿಕೊಂಡು ಒಯ್ಯುತ್ತಿದ್ದ ಬಗ್ಗೆ ಹೆಡ್ ಲೈನ್ ಕರ್ನಾಟಕ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಕಟಿಸಿತ್ತು. ಆಸ್ಪತ್ರೆ ಪ್ರತಿನಿಧಿಗಳು ಅಧಿಕಾರಿಗಳಿಗೇ ಆವಾಜ್ ಹಾಕುತ್ತಿದ್ದ ವಿಡಿಯೋ ಮತ್ತು ಸುದ್ದಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಇದರಂತೆ ಕೆಎಂಸಿ ಮತ್ತಿತರ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.
ಅಲ್ಲದೆ, ಮಹಾನಗರ ಪಾಲಿಕೆಯ ಮಹಿಳಾ ಅಧಿಕಾರಿಯ ಕೆಲಸಕ್ಕೆ ಜಿಲ್ಲಾಧಿಕಾರಿ ಶಹಭಾಷ್ ಹೇಳಿದ್ದಾರೆ. ಕೋವಿಡ್ ಮಾರ್ಶಲ್ ಗಳಾಗಿದ್ದವರಿಗೂ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಪ್ರಶಂಸೆಯ ಮಾತನ್ನಾಡಿದ್ದಾರೆ. ಕೆಎಂಸಿ ಆಸ್ಪತ್ರೆಯನ್ನು ಎದುರು ಹಾಕ್ಕೊಂಡು ಸಿಬಂದಿಯಿದ್ದ ಬಸ್ಸನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಗದರಿದ್ದಕ್ಕೆ ಮಹಿಳಾ ಅಧಿಕಾರಿಯ ಮೇಲೆ ಅಧಿಕಾರಸ್ಥರು ಎತ್ತಂಗಡಿ ಶಿಕ್ಷೆ ಕೊಡುತ್ತಾರೆಂದು ಗುಸು ಗುಸು ಕೇಳಿಬಂದಿತ್ತು.
ಈ ಬಗ್ಗೆ ಮಹಿಳಾ ಅಧಿಕಾರಿಯೂ ನೋವು ತೋಡಿಕೊಂಡಿದ್ದರು. ಸಹವರ್ತಿಗಳೇ ಸೇರಿಕೊಂಡು, ಇದೆಲ್ಲ ನಿಂಗೆ ಬೇಕಿತ್ತಾ.. ಟ್ರಾನ್ಸ್ ಫರ್ ಖಚಿತ ಎಂದು ಹೇಳಿಕೊಂಡು ಬೆದರಿಸಿದ್ದರಂತೆ. ಆದರೆ, ಹೆಡ್ ಲೈನ್ ಕರ್ನಾಟಕದಲ್ಲಿ ಸುದ್ದಿ ಬಂದಿದ್ದರಿಂದ ಎತ್ತಂಗಡಿ ಶಿಕ್ಷೆ ಕೊಡುವ ಬದಲು ಸ್ವತಃ ಜಿಲ್ಲಾಧಿಕಾರಿಗಳೇ ಒಳ್ಳೆಯ ಕೆಲಸ ಎಂದು ಪ್ರಶಂಸಿಸಿದ್ದಾರೆ.
ಲಾಕ್ಡೌನ್ ಇದ್ದರೂ, ಆಸ್ಪತ್ರೆ ಸಿಬಂದಿಯನ್ನು ಮಾಸ್ಕ್ ಹಾಕದೇ ಬಸ್ಸಿನಲ್ಲಿ ರಶ್ ಆಗಿ ತುಂಬಿಸಿಕೊಂಡು ಒಯ್ಯಲಾಗುತ್ತಿತ್ತು. ಇದನ್ನು ಮನಗಂಡ ಅಲ್ಲಿನ ಪೊಲೀಸರು ಮತ್ತು ಕೋವಿಡ್ ಮಾರ್ಶಲ್ ಗಳು ಬಸ್ಸನ್ನು ನಿಲ್ಲಿಸಿ, ಎಚ್ಚರಿಕೆ ನೀಡಿದ್ದರು. ಮಾಸ್ಕ್ ಹಾಕದೇ, ಲಾಕ್ಡೌನ್ ನಿಮಯಗಳನ್ನು ನೀವೇ ಗಾಳಿಗೆ ತೂರಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಮೂರನೇ ದಿನ ಪಾಲಿಕೆಯ ಆರೋಗ್ಯ ಅಧಿಕಾರಿ ಬಂದು ರೈಟ್ ಲೆಫ್ಟ್ ತೆಗೆದುಕೊಂಡಿದ್ದರು.
ಪಾಲಿಕೆಯ ಆರೋಗ್ಯಾಧಿಕಾರಿ ಆಸ್ಪತ್ರೆ ಸಿಬಂದಿಗೆ ಬಿಸಿ ಮುಟ್ಟಿಸಿದ ಬಳಿಕ ಮರುದಿನದಿಂದಲೇ ಬಸ್ಸಿನಲ್ಲಿ ಒಂದು ಸೀಟಿನಲ್ಲಿ ಒಬ್ಬರನ್ನೇ ಕೂರಿಸಿಕೊಂಡು ಕಳಿಸಲಾಗುತ್ತಿದೆ. ಮಾಸ್ಕ್ , ಅಂತರ ಕಾಪಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಕೋವಿಡ್ ಮಾರ್ಶಲ್ ಗಳು ತಿಳಿಸಿದ್ದಾರೆ.
Video:
Mangalore DC Rajendra Kumar has issued notice to KMC and Yenepoya Hospital for floating covid rules by placing excess staffs in the College Buses. Headline Karnataka team had exposed the incident at Pumpwell where medical college buses were swamped with staffs following no rules. The buses were held by the Health inspector at Pumpwell in Mangalore two days back.
04-06-25 10:48 pm
Bangalore Correspondent
RCB celebration, Bangalore, Stampede, update:...
04-06-25 09:07 pm
R Ashok, RCB, Bangalore, Death: ಕಿಲ್ಲರ್ RCB ;...
04-06-25 08:06 pm
RCB Victory Celebration, Death, Stampede, Ban...
04-06-25 06:21 pm
ಕ್ಷಮೆ ಕೇಳಲ್ಲ, ಮಾತುಕತೆಗೆ ಸಿದ್ಧ ; ಹೈಕೋರ್ಟಿನಲ್ಲಿ...
03-06-25 10:50 pm
04-06-25 05:05 pm
HK News Desk
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
04-06-25 10:43 pm
Mangalore Correspondent
Mangalore Police, Social Media, Arrest: ಜಾಲತಾ...
04-06-25 09:34 pm
RCB, Mangalore celebration, IPL Cricket 2025:...
04-06-25 02:26 pm
Bomb Threat, Mangalore, Kanachur Hospital: ದೇ...
04-06-25 01:38 pm
ಮಂಗಳೂರಿನಲ್ಲಿ ಟಿಂಟ್ ಗ್ಲಾಸ್ ಕಾರುಗಳ ವಿರುದ್ಧ ವಿಶೇ...
03-06-25 08:13 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm