ಬ್ರೇಕಿಂಗ್ ನ್ಯೂಸ್
11-05-21 05:20 pm Udupi Correspondent ಕರಾವಳಿ
ಕುಂದಾಪುರ, ಮೇ 11: ಲಾಕ್ಡೌನ್ ಇರುವುದರಿಂದ ಗ್ರೋಸರಿ ತರುವುದಕ್ಕೂ ವಾಹನ ಬಳಸುವಂತಿಲ್ಲ ಎಂದು ರಾಜ್ಯ ಸರಕಾರ ನಿಯಮ ಹೇರಿರುವುದರಿಂದ ಹೆಚ್ಚಿನ ಕಡೆ ಪೊಲೀಸರು ಲಾಠಿ ಬೀಸಿದ್ದು ಪರ- ವಿರೋಧ ಟೀಕೆಗೂ ಕಾರಣವಾಗಿದೆ. ಇದೇ ವೇಳೆ, ಇಲ್ಲಿನ ಕುಂಭಾಸಿಯ ಯುವಕನೊಬ್ಬ ಪೊಲೀಸರ ಲಾಠಿರುಚಿಯನ್ನು ಅಣಕಿಸುವುದಕ್ಕಾಗಿಯೇ ಹೊಸ ತಂತ್ರಕ್ಕೆ ಮೊರೆಹೋಗಿರುವ ಫೋಟೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬವರು ಸೈಕಲ್ ನಲ್ಲಿ ಪೇಟೆಗೆ ಹೊರಟಿದ್ದು ತಲೆಗೆ ಹೆಲ್ಮೆಟ್ ಮತ್ತು ಬೆನ್ನಿಗೆ ತಗಡು ಶೀಟನ್ನು ಕಟ್ಟಿಕೊಂಡಿದ್ದಾರೆ. ಬೆನ್ನಿಗೆ ಪೆಟ್ಟು ಬಿದ್ದರೂ ತಗಡು ಶೀಟ್ ಇದೆಯೆಂಬ ರೀತಿ ಬಿಂಬಿಸಿ, ಸೈಕಲಿನಲ್ಲಿ ಹೊರಟಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಲಾಠಿಗೆ ಪ್ರತಿತಂತ್ರ ಎನ್ನುವ ರೀತಿ ಬಿಂಬಿತವಾಗುತ್ತಿದೆ.

ಬೆಳಗ್ಗೆ ಹತ್ತು ಗಂಟೆ ವರೆಗೆ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ನೀಡಿದ್ದು ಆದರೆ ನಡೆದುಕೊಂಡೇ ಮನೆ ಪರಿಸರದ ಅಂಗಡಿಗಳಿಂದ ಖರೀದಿ ನಡೆಸಬೇಕು. ಯಾವುದೇ ಕಾರಣಕ್ಕೂ ವಾಹನಗಳಲ್ಲಿ ದೂರಕ್ಕೆ ಪ್ರಯಾಣ ಮಾಡಬಾರದು. ಅಗತ್ಯ ವಸ್ತು ಖರೀದಿಗೆಂದು ಮಾರುಕಟ್ಟೆ ಇನ್ನಿತರ ಪ್ರದೇಶಕ್ಕೆ ಹೋಗಬಾರದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ಈ ನಿಯಮವನ್ನು ಬಹುತೇಕ ಕಡೆ ಜನರು ಮುರಿಯುತ್ತಿದ್ದಾರೆ. ಪೊಲೀಸರು ಅಡ್ಡಗಟ್ಟಿದರೂ ಒಳದಾರಿಗಳಿಂದ ಅಂಗಡಿಗಳಿಗೆ ತೆರಳುತ್ತಿದ್ದಾರೆ. ಈ ವೇಳೆ, ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವ ಘಟನೆ ನಡೆದಿದೆ.
ಪೊಲೀಸರ ಲಾಠಿ ಬೀಸುವ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಯಸ್ಸಾದವರು ತಮ್ಮ ಸ್ಕೂಟರ್ ಬಳಸದೆ ಗ್ರೋಸರಿ ತರುವುದು ಹೇಗೆಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಕೆಲವು ಕಡೆ ವಯಸ್ಸಾದವರು, ಅಸಹಾಯಕರಿಗೆ ಮಾತ್ರ ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಹೀಗಿದ್ದರೂ, ಜನರು ಅಂಗಡಿ ಮುಂದೆ ಸೇರುವುದು, ಮುಗಿ ಬೀಳುವುದು ಕಾಮನ್ ಆಗಿದೆ. ಇಂಥ ಸಂದರ್ಭದಲ್ಲೇ ಯುವಕನೊಬ್ಬ ಬೆನ್ನಿಗೆ ಕಬ್ಬಿಣದ ಶೀಟ್ ಕಟ್ಟಿಕೊಂಡು ಸೈಕಲಿನಲ್ಲಿ ಪೇಟೆಗೆ ಹೊರಟು ಸುದ್ದಿಯಾಗಿದ್ದಾನೆ.
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
26-05-26 09:02 pm
HK News Staffer
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm