ಬ್ರೇಕಿಂಗ್ ನ್ಯೂಸ್
27-03-21 03:29 pm Mangaluru correspondent ಕರಾವಳಿ
ಮಂಗಳೂರು, ಮಾ.27: ಕಾರು ಮಾರಾಟ ಪ್ರಕರಣದಲ್ಲಿ ಸಸ್ಪೆಂಡ್ ಆಗಿರುವ ಮಂಗಳೂರು ಸಿಸಿಬಿಯಲ್ಲಿದ್ದ ಎಸ್ಐ ಕಬ್ಬಾಳರಾಜ್ ವಿರುದ್ಧ ಮತ್ತೆ ಆರೋಪ ಕೇಳಿಬಂದಿದೆ. ಕಬ್ಬಾಳರಾಜ್, ಕುಂದಾಪುರದ ಕೋಟದಲ್ಲಿ ಎಸ್ಐ ಆಗಿದ್ದಾಗಲೇ ಭ್ರಷ್ಟನಾಗಿದ್ದ. ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದ. ಹಣಕ್ಕಾಗಿ ಜನರನ್ನು ಪೀಡಿಸಿ ಕೋಟ ಠಾಣೆಯಲ್ಲೇ ಆತನ ವಿರುದ್ಧ ಮೂರು ಎಫ್ಐಆರ್ ದಾಖಲಾಗಿದ್ದವು ಎನ್ನೋ ಮಾಹಿತಿ ಬಯಲಾಗಿದೆ.
ಕುಂದಾಪುರದ ಸಾಮಾಜಿಕ ಕಾರ್ಯಕರ್ಯ ದಿನೇಶ್ ಗಾಣಿಗ ಎಂಬವರು ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಭ್ರಷ್ಟ ಅಧಿಕಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಬ್ಬಾಳರಾಜ್ ಪುತ್ತೂರಿನಲ್ಲಿ ಪ್ರೊಬೇಷನರಿ ಮುಗಿಸಿ 2015ರಲ್ಲಿ ಕೋಟ ಠಾಣೆಗೆ ಬಂದಿದ್ದ. ಎರಡು ವರ್ಷ ಕರ್ತವ್ಯದಲ್ಲಿದ್ದಾಗಲೇ ಸ್ವಿಫ್ಟ್ ಕಾರು ಮತ್ತು ಕೋಟ ಸಮೀಪದ ಗೋಪಾಡಿ ಎಂಬಲ್ಲಿ ಹೈವೇ ಬದಿಯಲ್ಲೇ 12 ಸೆಂಟ್ಸ್ ಜಾಗ ಖರೀದಿ ಮಾಡಿದ್ದ. ಸೆಂಟ್ಸ್ ಗೆ ಮೂರು ಲಕ್ಷ ರೂ. ಬೆಲೆಬಾಳುವ ಈ ಜಾಗವನ್ನು ತನ್ನ ಮಾವ ರಾಮಚಂದ್ರ ದೇವಾಡಿಗ ಹೆಸರಲ್ಲಿ 2016ರ ಸೆ.20ರಂದು ರಿಜಿಸ್ಟರ್ ಮಾಡಿದ್ದಾನೆ. ಬಳಿಕ, 2017ರಲ್ಲಿ ಅದೇ ಜಾಗವನ್ನು ಪತ್ನಿ ಸುನೀತಾ ದೇವಾಡಿಗ ಹೆಸರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾನೆ.

2015ರಲ್ಲಿ ಸ್ವಿಫ್ಟ್ ಹೊಸ ಕಾರು ಖರೀದಿಸಿದ್ದು ಪತ್ನಿ ಸುನೀತಾ ದೇವಾಡಿಗ ಹೆಸರಲ್ಲಿ ಬಂಟ್ವಾಳದ ವಿಳಾಸದಲ್ಲಿ ರಿಜಿಸ್ಟರ್ ಆಗಿದೆ. ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ಈತ ಬೆಲೆಬಾಳುವ ಜಾಗ ಮತ್ತು ಕಾರು ಖರೀದಿಸಿದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಅದೇ ವೇಳೆ, ಕಬ್ಬಾಳರಾಜ್ ದೂರು ಹೇಳಿಕೊಂಡು ಬಂದ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದ ಬಗ್ಗೆ ಹಲವರು ದೂರು ಹೇಳಿದ್ದರು. ಎಸ್ಪಿಗೂ ದೂರು ಸಲ್ಲಿಸಿದ್ದರು. ಅದರಂತೆ, ಕೋಟ ಠಾಣೆಯಲ್ಲೇ ಈತನ ವಿರುದ್ಧ ಮೂರು ಎಫ್ಐಆರ್ ದಾಖಲಾಗಿದ್ದವು. ಬಳಿಕ ಆಗಿನ ಉಡುಪಿ ಎಸ್ಪಿ ಆಗಿದ್ದ ಅಣ್ಣಾಮಲೈ, ಕಬ್ಬಾಳರಾಜನನ್ನು ಪನೀಶ್ಮೆಂಟ್ ಟ್ರಾನ್ಸ್ ಫರ್ ಆಗಿ ಮಂಗಳೂರಿನ ಮೆಸ್ಕಾಂಗೆ ವರ್ಗಾವಣೆ ಮಾಡಿದ್ದರು. ಇಂಥ ಭ್ರಷ್ಟ ವ್ಯಕ್ತಿಯನ್ನು ಅದ್ಹೇಗೆ ಮಂಗಳೂರಿನ ಸಿಸಿಬಿಗೆ ಎಸ್ಐ ಆಗಿ ನೇಮಕ ಮಾಡಿಕೊಂಡಿದ್ದರೋ ಗೊತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಈ ನಡುವೆ, ಮಂಗಳೂರಿನ ಸಿಸಿಬಿಯಲ್ಲಿಯೂ ಲಂಚಾವತಾರ ತೋರಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿವೆ. ಇತ್ತೀಚೆಗೆ ಆರೋಪಿಗಳಿಗೆ ಸೇರಿದ ಕಾರು ಮಾರಾಟ ಪ್ರಕರಣದಲ್ಲಿ ಈತನನ್ನು ಸಸ್ಪೆಂಡ್ ಮಾಡಲಾಗಿದೆ. ಹೀಗಿದ್ದರೂ, ಈ ವ್ಯಕ್ತಿಗೆ ಮುಖ್ಯಮಂತ್ರಿಯಿಂದ ಪದಕ ಕೊಡಿಸಿದ್ದಾರೆ. ಕರ್ತವ್ಯದುದ್ದಕ್ಕೂ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಮುಖ್ಯಮಂತ್ರಿ ಪದಕ ಕೊಡಿಸಿದ್ದಾರೆಯೇ ಎಂದು ಪ್ರಶ್ನೆ ಮಾಡಿದ ದಿನೇಶ್ ಗಾಣಿಗ, ಕೂಡಲೇ ಮುಖ್ಯಮಂತ್ರಿ ಪದಕವನ್ನು ಆತನಿಂದ ವಾಪಸ್ ಪಡೆಯಬೇಕು. ಕಬ್ಬಾಳರಾಜ್ ವಿರುದ್ಧ ಈಗಾಗ್ಲೇ ಎಸಿಬಿಗೆ ದೂರು ನೀಡಿದ್ದೇನೆ. ಮುಂದಿನ ವಾರ ಕಾರು ಮಾರಾಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೂ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಪರಿ ಭ್ರಷ್ಟಾಚಾರ ಮಾಡಿದವರನ್ನು ಇಲಾಖೆಯಲ್ಲಿ ಉಳಿಸಿಕೊಳ್ಳಬಾರದು. ಪೊಲೀಸ್ ಹುದ್ದೆಯಿಂದ ವಜಾ ಮಾಡಬೇಕು ಎಂದು ದಿನೇಶ್ ಗಾಣಿಗ ಒತ್ತಾಯಿಸಿದ್ದಾರೆ.
RTI activist Dinesh Ganiga states that he will file a complaint with CID officials against the now suspended CCB sub-inspector (SI) Kabbal Raj, urging them to probe into his alleged misconduct and misuse of power.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm