ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ತಾಯಿ, ಮಗು ಮೃತ್ಯು 

21-08-20 04:15 pm       Mangalore Reporter   ಕರಾವಳಿ

ಕಡಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದು ತಾಯಿ ಮತ್ತು ಮಗು ಮೃತಪಟ್ಟ ಘಟನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಬೋಳಂತಕೋಡಿಯಲ್ಲಿ ನಡೆದಿದೆ. 

ಮಂಜೇಶ್ವರ, ಆಗಸ್ಟ್ 21: ಕಡಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದು ತಾಯಿ ಮತ್ತು ಮಗು ಮೃತಪಟ್ಟ ಘಟನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಬೋಳಂತಕೋಡಿಯಲ್ಲಿ ನಡೆದಿದೆ. 

ಮಳೆ, ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಮನೆಯ ಹಿಂಭಾಗದಲ್ಲಿ ಬಿದ್ದಿತ್ತು. ಇದನ್ನು ಗಮನಿಸದೆ 5 ವರ್ಷದ ಮಗು ಆಶ್ರಯ್ ಆ ದಾರಿಯಲ್ಲಿ ಸಾಗಿದ್ದ. ತಂತಿ ತುಳಿಯುತ್ತಿದ್ದಂತೆ ವಿದ್ಯುತ್ ಶಾಕ್ ಹೊಡೆದಿದ್ದು ಮನೆ ಒಳಗಿದ್ದ ತಾಯಿ ವಿಜಯಾ(35) ಹೊರಗೆ ಓಡಿ ಬಂದು ಮಗುವನ್ನು ಎತ್ತಲು‌ ಮುಂದಾಗಿದ್ದಾರೆ. ಆದರೆ, ಮಗು ಮತ್ತು ತಾಯಿ ಇಬ್ಬರೂ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದಾರೆ. 

ಹಿರಿಯ ಮಗಳು ಸಾನಿಕ ಕೂಡ ಅದೇ ದಾರಿಯಿಂದ ಓಡಿಕೊಂಡು ಹೋಗಿದ್ದಳು. ಆದರೆ ಸಾನಿಕ ಅದೃಷ್ಟದಿಂದ ತಂತಿಯನ್ನು ತುಳಿಯದೆ ಮುಂದಕ್ಕೆ ಹೋಗಿದ್ದಾಳೆ. ಹಿಂದಿನಿಂದ ಓಡಿಬಂದ ತಮ್ಮ ತಂತಿಯನ್ನು ತುಳಿದು ದುರಂತಕ್ಕೆ ಈಡಾಗಿದ್ದಾನೆ. ಆಟೋ ಚಾಲಕ ವಿಶ್ವನಾಥ ಎಂಬವರ ಮಕ್ಕಳಾಗಿದ್ದು ಇಬ್ಬರೂ ಕಳಿಯೂರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದರು. ಹಿರಿಯ ಮಗಳು ನಾಲ್ಕನೇ ತರಗತಿ ಆಗಿದ್ದರೆ, ಆಶ್ರಯ್ ಎಲ್ ಕೆಜಿ ಕಲಿಯುತ್ತಿದ್ದ. ಲಾಕ್ ಡೌನ್ ಕಾರಣ ಶಾಲೆ ಇಲ್ಲದೆ ಮನೆಯಲ್ಲಿ ಆಟದಲ್ಲಿ ತೊಡಗಿದ್ದರು.