ಬ್ರೇಕಿಂಗ್ ನ್ಯೂಸ್
06-02-26 09:01 pm Mangalore Correspondent ಕರಾವಳಿ
ಮಂಗಳೂರು, ಫೆ.6 : ಧರ್ಮಸ್ಥಳಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಲ್ಲಿ ನೀವು ಇದೇ ಶಿವರಾತ್ರಿಗೆ ನಿಮ್ಮ ಪಟ್ಟವನ್ನು ಬಿಟ್ಟುಕೊಡಬೇಕು ಎಂದು ಹೇಳಿ ಆವಾಜ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸಪ್ ಮತ್ತು ಇನ್ ಸ್ಟಾ ಗ್ರಾಮಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ವ್ಯಕ್ತಿಯೊಬ್ಬ ವೀರೇಂದ್ರ ಹೆಗ್ಗಡೆಯವರ ಬೂಡಿನ ಮನೆಯ ಒಳಗಡೆ ಇತರೇ ಭಕ್ತರಂತೆ ಸರದಿಯಲ್ಲಿ ಹೋಗಿದ್ದು ಈ ವೇಳೆ ತನ್ನಲ್ಲಿರುವ ಮೊಬೈಲ್ ಕ್ಯಾಮರಾವನ್ನು ರೆಕಾರ್ಡ್ ನಲ್ಲಿ ಇಟ್ಟಿದ್ದು ಕಂಡುಬರುತ್ತದೆ. ಆನಂತರ ತನ್ನ ಸರದಿ ಬಂದಾಗ, ಹೆಗ್ಗಡೆಯವರನ್ನು ಕುರಿತಾಗಿ ನೇರ ಪ್ರಶ್ನೆ ಮಾಡಿದ್ದಾನೆ.

ಈ ಕ್ಷೇತ್ರದಲ್ಲಿ ಧರ್ಮ ಇದೆಯೆಂದು ನೀವು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿರುವ ಆ ವ್ಯಕ್ತಿ, ಆನಂತರ ಹತ್ತು ವರ್ಷಗಳ ಹಿಂದೂ ಇಲ್ಲಿಗೆ ಬಂದು ಪ್ರಶ್ನಿಸಿದ್ದೆ. ನಿಮಗೆ ನೆನಪಿದೆಯಾ ಎಂದು ಕೇಳುತ್ತಾನೆ. ನೆನಪು ಇದೆ ಎಂದು ಹೆಗ್ಗಡೆ ಹೇಳಿದಾಗ, ನೀವು ಈಗಲೂ ಈ ಕ್ಷೇತ್ರದಲ್ಲಿ ಧರ್ಮ ಇದೆ ಎಂದು ಹೇಳುತ್ತೀರಾ.. ನೀವು ಧರ್ಮ ಇದೆಯೆಂದು ಅಣ್ಣಪ್ಪನ ಎದುರಲ್ಲಿ ಹೇಳುತ್ತೀರಾ. ಮುಂದಿನ ಮಕರ ಸಂಕ್ರಾಂತಿಯಂದು ದೈವದ ಮುಂದೆ ಬರಲು ರೆಡಿ ಇದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ನಾನು ಕದ್ರಿ ದೇವಸ್ಥಾನದ ಅಂಗಣಕ್ಕೂ ಬೈಕಿನಲ್ಲಿ ಹೋಗಿದ್ದೆ. ಆನಂತರ, ಒಳಗಡೆ ಹೋಗಿ ದೇವಸ್ಥಾನದ ಶಿಖರಕ್ಕೆ ಹತ್ತಿದ್ದೇನೆ. ಧರ್ಮಸ್ಥಳಕ್ಕೂ ಕದ್ರಿಯೇ ಮೂಲ. ನೀವು ಈ ಕ್ಷೇತ್ರವನ್ನು ಬಿಟ್ಟು ಕೊಡಬೇಕು ಎಂದು ಹೇಳುತ್ತಾನೆ.
ಇದಲ್ಲದೆ, ನಿಮ್ಮ ಜೊತೆಗೆ ಒಬ್ಬನೇ ಮಾತನಾಡಬೇಕೆಂಬ ಬಯಕೆ ಇದೆ, ಸಿಬಂದಿ ಯಾರೂ ಜೊತೆಗೆ ಇರಬಾರದು ಎಂದು ಹೇಳುತ್ತಾನೆ. ಅದಕ್ಕೆ ಹೆಗ್ಗಡೆಯವರು ಅದು ಆಗಲ್ಲ, ಇಲ್ಲಿಯೇ ಪ್ರಶ್ನೆ ಕೇಳಿ ಎನ್ನುತ್ತಾರೆ. ಹೆಗ್ಗಡೆಯವರ ಪರಿಚಾರಕರು, ಸಿಬಂದಿಗಳ ಎದುರಲ್ಲೇ ಈ ವ್ಯಕ್ತಿ ಪ್ರಶ್ನೆ ಮಾಡಿದ್ದು, ಆನಂತರ ಅಣ್ಣಪ್ಪ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತ ಹೊರ ನಡೆದಿದ್ದಾನೆ. ಇದರ ವಿಡಿಯೋವನ್ನು ಸೌಜನ್ಯಾ ಹೋರಾಟಗಾರರು ತಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಕಿದ್ದು ಭಾರೀ ವೈರಲ್ ಆಗಿದೆ. ಈ ರೀತಿ ಮಾತನಾಡಿ ವಿಡಿಯೋ ಮಾಡಿರುವ ವ್ಯಕ್ತಿ ಮಂಗಳೂರಿನ ಉಳ್ಳಾಲದ ನಿವಾಸಿಯೆಂದು ತಿಳಿದುಬಂದಿದೆ.
A video has gone viral on social media showing a man confronting Dharmasthala Dharmadhikari Dr. D. Veerendra Heggade and asking him to relinquish his position by Shivaratri.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 10:19 am
HK News Staffer
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm