ಬ್ರೇಕಿಂಗ್ ನ್ಯೂಸ್
06-02-26 09:01 pm Mangalore Correspondent ಕರಾವಳಿ
ಮಂಗಳೂರು, ಫೆ.6 : ಧರ್ಮಸ್ಥಳಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಲ್ಲಿ ನೀವು ಇದೇ ಶಿವರಾತ್ರಿಗೆ ನಿಮ್ಮ ಪಟ್ಟವನ್ನು ಬಿಟ್ಟುಕೊಡಬೇಕು ಎಂದು ಹೇಳಿ ಆವಾಜ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸಪ್ ಮತ್ತು ಇನ್ ಸ್ಟಾ ಗ್ರಾಮಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ವ್ಯಕ್ತಿಯೊಬ್ಬ ವೀರೇಂದ್ರ ಹೆಗ್ಗಡೆಯವರ ಬೂಡಿನ ಮನೆಯ ಒಳಗಡೆ ಇತರೇ ಭಕ್ತರಂತೆ ಸರದಿಯಲ್ಲಿ ಹೋಗಿದ್ದು ಈ ವೇಳೆ ತನ್ನಲ್ಲಿರುವ ಮೊಬೈಲ್ ಕ್ಯಾಮರಾವನ್ನು ರೆಕಾರ್ಡ್ ನಲ್ಲಿ ಇಟ್ಟಿದ್ದು ಕಂಡುಬರುತ್ತದೆ. ಆನಂತರ ತನ್ನ ಸರದಿ ಬಂದಾಗ, ಹೆಗ್ಗಡೆಯವರನ್ನು ಕುರಿತಾಗಿ ನೇರ ಪ್ರಶ್ನೆ ಮಾಡಿದ್ದಾನೆ.

ಈ ಕ್ಷೇತ್ರದಲ್ಲಿ ಧರ್ಮ ಇದೆಯೆಂದು ನೀವು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿರುವ ಆ ವ್ಯಕ್ತಿ, ಆನಂತರ ಹತ್ತು ವರ್ಷಗಳ ಹಿಂದೂ ಇಲ್ಲಿಗೆ ಬಂದು ಪ್ರಶ್ನಿಸಿದ್ದೆ. ನಿಮಗೆ ನೆನಪಿದೆಯಾ ಎಂದು ಕೇಳುತ್ತಾನೆ. ನೆನಪು ಇದೆ ಎಂದು ಹೆಗ್ಗಡೆ ಹೇಳಿದಾಗ, ನೀವು ಈಗಲೂ ಈ ಕ್ಷೇತ್ರದಲ್ಲಿ ಧರ್ಮ ಇದೆ ಎಂದು ಹೇಳುತ್ತೀರಾ.. ನೀವು ಧರ್ಮ ಇದೆಯೆಂದು ಅಣ್ಣಪ್ಪನ ಎದುರಲ್ಲಿ ಹೇಳುತ್ತೀರಾ. ಮುಂದಿನ ಮಕರ ಸಂಕ್ರಾಂತಿಯಂದು ದೈವದ ಮುಂದೆ ಬರಲು ರೆಡಿ ಇದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ನಾನು ಕದ್ರಿ ದೇವಸ್ಥಾನದ ಅಂಗಣಕ್ಕೂ ಬೈಕಿನಲ್ಲಿ ಹೋಗಿದ್ದೆ. ಆನಂತರ, ಒಳಗಡೆ ಹೋಗಿ ದೇವಸ್ಥಾನದ ಶಿಖರಕ್ಕೆ ಹತ್ತಿದ್ದೇನೆ. ಧರ್ಮಸ್ಥಳಕ್ಕೂ ಕದ್ರಿಯೇ ಮೂಲ. ನೀವು ಈ ಕ್ಷೇತ್ರವನ್ನು ಬಿಟ್ಟು ಕೊಡಬೇಕು ಎಂದು ಹೇಳುತ್ತಾನೆ.
ಇದಲ್ಲದೆ, ನಿಮ್ಮ ಜೊತೆಗೆ ಒಬ್ಬನೇ ಮಾತನಾಡಬೇಕೆಂಬ ಬಯಕೆ ಇದೆ, ಸಿಬಂದಿ ಯಾರೂ ಜೊತೆಗೆ ಇರಬಾರದು ಎಂದು ಹೇಳುತ್ತಾನೆ. ಅದಕ್ಕೆ ಹೆಗ್ಗಡೆಯವರು ಅದು ಆಗಲ್ಲ, ಇಲ್ಲಿಯೇ ಪ್ರಶ್ನೆ ಕೇಳಿ ಎನ್ನುತ್ತಾರೆ. ಹೆಗ್ಗಡೆಯವರ ಪರಿಚಾರಕರು, ಸಿಬಂದಿಗಳ ಎದುರಲ್ಲೇ ಈ ವ್ಯಕ್ತಿ ಪ್ರಶ್ನೆ ಮಾಡಿದ್ದು, ಆನಂತರ ಅಣ್ಣಪ್ಪ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತ ಹೊರ ನಡೆದಿದ್ದಾನೆ. ಇದರ ವಿಡಿಯೋವನ್ನು ಸೌಜನ್ಯಾ ಹೋರಾಟಗಾರರು ತಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಕಿದ್ದು ಭಾರೀ ವೈರಲ್ ಆಗಿದೆ. ಈ ರೀತಿ ಮಾತನಾಡಿ ವಿಡಿಯೋ ಮಾಡಿರುವ ವ್ಯಕ್ತಿ ಮಂಗಳೂರಿನ ಉಳ್ಳಾಲದ ನಿವಾಸಿಯೆಂದು ತಿಳಿದುಬಂದಿದೆ.
A video has gone viral on social media showing a man confronting Dharmasthala Dharmadhikari Dr. D. Veerendra Heggade and asking him to relinquish his position by Shivaratri.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am