ಬ್ರೇಕಿಂಗ್ ನ್ಯೂಸ್
19-12-25 04:43 pm Mangalore Correspondent ಕರಾವಳಿ
ಮಂಗಳೂರು, ಡಿ.19 : ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನು 50 ಶೇಕಡಾ ರಿಯಾಯ್ತಿಯಲ್ಲಿ ಕಟ್ಟಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಂಡ ಸೈಬರ್ ಖದೀಮರು ಸಾರ್ವಜನಿಕರಿಗೆ ಎಪಿಕೆ ಫೈಲ್ಸ್ ಕಳಿಸುವ ಮೂಲಕ ಏಪ್ ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದು ಜನಸಾಮಾನ್ಯರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ.
ಇದರ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು ಟ್ರಾಫಿಕ್ ಫೈನ್ ಕಟ್ಟಲು ಅಂತಹ ಯಾವುದೇ ಏಪ್ಸ್ ಗಳಿಲ್ಲ. ಆ ರೀತಿಯ ಎಪಿಕೆ ಫೈಲ್ಸ್ ಗಳನ್ನು ನಂಬಬೇಡಿ. ಸಾರ್ವಜನಿಕರು ಸಾರಿಗೆ ಇಲಾಖೆಯ ವೆಬ್ ಸೈಟ್ ಅಥವಾ ಕರ್ನಾಟಕ ವನ್ ಸೆಂಟರ್ ಮೂಲಕ ಮಾತ್ರ ಟ್ರಾಫಿಕ್ ದಂಡವನ್ನು ಪಾವತಿ ಮಾಡಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಎಪಿಕೆ ಫೈಲ್ಸ್ ಲಿಂಕ್ ಗಳಲ್ಲಿರುವ ಏಪ್ ಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು. ಆಮೂಲಕ ಮೊಬೈಲ್ ಸಂಪರ್ಕದಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳು ಸೈಬರ್ ವಂಚಕರಿಗೆ ಸಿಗಬಹುದು. ನಿಮ್ಮ ಅಗತ್ಯವೇ ಇಲ್ಲದೆ ಬ್ಯಾಂಕಿನಲ್ಲಿರುವ ಮೊತ್ತವನ್ನು ವಂಚಕರು ಕಬಳಿಸಬಹುದು. ಹೀಗಾಗಿ ಟ್ರಾಫಿಕ್ ಮೊತ್ತವನ್ನು ಪಾವತಿ ಮಾಡುವುದಕ್ಕಾಗಿ ಯಾವುದೇ ರೀತಿಯ ಏಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಯಾವುದೇ ಏಪ್ಸ್ ಗಳನ್ನು ಡೌನ್ಲೋಡ್ ಮಾಡುವುದಿದ್ದರೂ ಪ್ಲೇಸ್ಟೋರ್ ನಿಂದ ಪಡೆಯಬೇಕೇ ವಿನಾ ಇಂತಹ ಡೈರೆಕ್ಟ್ ಫೈಲ್ಸ್ ಗಳಿಂದ ಮಾಡುವಂತಿಲ್ಲ ಅನ್ನೋದು ನೆನಪಿರಲಿ.
ಮೆಸೇಜ್ ಮೂಲಕ ಎಪಿಕೆ ಫೈಲ್ಸ್ ಮೂಲಕ ಬಂದಿದ್ದ ಲಿಂಕ್ ಗಳನ್ನು ನಂಬಿ ಮಂಗಳೂರಿನ ಇಬ್ಬರು ಏಪ್ಸ್ ಡೌನ್ಲೋಡ್ ಮಾಡಿ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಯಾರು ಕೂಡ ಈ ರೀತಿಯ ಫೈಲ್ಸ್ ಬಂದಲ್ಲಿ ಸ್ಪಂದಿಸಬೇಡಿ. ತೊಂದರೆಗೆ ಸಿಲುಕಬೇಡಿ ಎಂದು ಕಮಿಷನರ್ ಸುಧೀರ್ ರೆಡ್ಡಿ ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ.
The Karnataka government has allowed citizens to pay traffic violation fines with a 50% rebate. But cybercriminals are exploiting this opportunity by sending APK file links to the public, urging them to download fake apps — leading many into cyber fraud traps.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 04:43 pm
Mangalore Correspondent
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm