ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರುತ್ತೇನೆ ; ಸಿಎಂ ಸಿದ್ದರಾಮಯ್ಯ ಖಡಕ್ ಮಾತು 

27-10-25 05:56 pm       Mangalore Correspondent   ಕರಾವಳಿ

ಯಾರು ಸಿಎಂ ಆಗಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡೋದು. ಯಾರು ಕೂಡ ಹೇಳಿದ ಮಾತ್ರಕ್ಕೆ ಸಿಎಂ‌ ಆಗಲ್ಲ. ನಾನು ಕೂಡ ಹೈಕಮಾಂಡ್ ತೀರ್ಮಾನ ಮಾಡಿದ್ರೆ ಮಾತ್ರ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಮಂಗಳೂರು, ಅ.27 : ಯಾರು ಸಿಎಂ ಆಗಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡೋದು. ಯಾರು ಕೂಡ ಹೇಳಿದ ಮಾತ್ರಕ್ಕೆ ಸಿಎಂ‌ ಆಗಲ್ಲ. ನಾನು ಕೂಡ ಹೈಕಮಾಂಡ್ ತೀರ್ಮಾನ ಮಾಡಿದ್ರೆ ಮಾತ್ರ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಆಗಲಿ ಸಿಎಂ ವಿಚಾರದಲ್ಲಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯಗಳು. ಯಾರು ಚೀಫ್ ಮಿನಿಸ್ಟರ್ ಅಭ್ಯರ್ಥಿ ಆಗಬೇಕಿದ್ದರೂ ಅದರ ಬಗ್ಗೆ ಹೈಕಮಾಂಡ್ ಹೇಳಬೇಕು ಎ‌ಂದರು. ರಾಜಣ್ಣ ನೀವೇ ಐದು ವರ್ಷ ಸಿಎಂ ಆಗಬೇಕು ಅಂತ ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಹೇಳಿಕೆ ಎಂದರು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಾದ ವಿಚಾರದಲ್ಲಿ, ಯಾರೇ ದ್ವೇಷ ಭಾಷಣ ಮಾಡಿದರೂ ಎಫ್ಐಆರ್ ದಾಖಲು ಮಾಡ್ತೀವಿ. ಯಾರಿಗೂ ದ್ವೇಷ ಭಾಷಣಕ್ಕೆ ಅವಕಾಶ ಇಲ್ಲ ಎಂದು ಹೇಳಿದರು. ‌

ಧರ್ಮಸ್ಥಳ ಎಸ್ಐಟಿ ತನಿಖೆ ಇದೇ ತಿಂಗಳಲ್ಲಿ ಮುಗಿಸಬೇಕೆಂಬ ಸೂಚನೆ ಬಗ್ಗೆ ಕೇಳಿದ ಪ್ರಶ್ನೆಗೆ, ಎಸ್ಐಟಿ ತ‌ನಿಖೆ ಅವರಿಗೆ ಬಿಟ್ಟದ್ದು. ಈ ತಿಂಗಳ ಅಂತ್ಯದಲ್ಲಿ ಮುಗಿಸಬಹುದು, ವರದಿಯನ್ನು ಸಲ್ಲಿಸಬಹುದು ಎಂದು ಗೃಹ ಸಚಿವರು ಹೇಳಿದ್ದಾರೆ. ಸಲ್ಲಿಸಲೂ ಬಹುದು ಅಂತ. ವರದಿ ಸಲ್ಲಿಸುವುದು ಎಸ್ಐಟಿ ವಿವೇಚನೆ. ನಮ್ಮ ತಕರಾರು ಇಲ್ಲ ಎಂದರು.

Chief Minister Siddaramaiah has asserted that the decision on who will be Karnataka’s Chief Minister lies entirely with the Congress High Command, stating that he will continue as CM for the full five-year term only if the High Command decides so.