Police Commissioner Sudheer Reddy, Mangalore: ಬಜ್ಪೆಯಲ್ಲಿ ಪಟಾಕಿ ವ್ಯಾಪಾರಸ್ಥರಿಂದ ಹಫ್ತಾ ಕೇಳಿದ ರೌಡಿಶೀಟರ್ ; ಕ್ರಿಮಿನಲ್ಗಳ ಜೊತೆ ತಿರುಗಬೇಡಿ, ನಿಮ್ಮಿಷ್ಟ ಅಂದ್ರೆ ತೊಂದ್ರೆ ಇಲ್ಲ, ನಮ್ ಕೆಲ್ಸ ನಾವು ಮಾಡ್ತೀವಿ! 

24-10-25 11:57 am       Mangalore Correspondent   ಕರಾವಳಿ

ಬಜ್ಪೆಯಲ್ಲಿ ಪಟಾಕಿ ಮಾರಾಟ ನಡೆಸುತ್ತಿದ್ದವರನ್ನು ಹೆದರಿಸಿ ಹಫ್ತಾ ಕೇಳಿದ ಆರೋಪದಲ್ಲಿ ಫಾಜಿಲ್ ಕೊಲೆ ಪ್ರಕರಣದ ಆರೋಪಿ, ರೌಡಿಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹವರ್ತಿ ಮೇಲೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಅ.24 : ಬಜ್ಪೆಯಲ್ಲಿ ಪಟಾಕಿ ಮಾರಾಟ ನಡೆಸುತ್ತಿದ್ದವರನ್ನು ಹೆದರಿಸಿ ಹಫ್ತಾ ಕೇಳಿದ ಆರೋಪದಲ್ಲಿ ಫಾಜಿಲ್ ಕೊಲೆ ಪ್ರಕರಣದ ಆರೋಪಿ, ರೌಡಿಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹವರ್ತಿ ಮೇಲೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅ.22ರಂದು ಘಟನೆ ನಡೆದಿದ್ದು ಪಟಾಕಿ ಮಾರಾಟ ಮಾಡುತ್ತಿದ್ದವರನ್ನು ಹೆದರಿಸಿ ಹಣ ಕೇಳಿದ್ದಾನೆ. ಇದರಿಂದ ಪಟಾಕಿ ವ್ಯಾಪಾರಸ್ಥರು ಹೆದರಿದ್ದು ಅಂದು ಪೊಲೀಸರಿಗೆ ಮಾಹಿತಿಯನ್ನೂ ನೀಡಿರಲಿಲ್ಲ. ಪೊಲೀಸರು ಮಾಹಿತಿ ತಿಳಿದು ರಕ್ಷಣೆ ಕೊಡ್ತೀವಿ, ದೂರು ಕೊಡಿ ಎಂದು ಧೈರ್ಯ ತುಂಬಿದ್ದರಿಂದ ಅ‌.23ರಂದು ಪಟಾಕಿ ಅಂಗಡಿಯ ದಾಮೋದರ್ ಎಂಬವರು ದೂರು ನೀಡಿದ್ದಾರೆ. ಆರೋಪಿ ಪ್ರಶಾಂತ್, ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿ ಸಹವರ್ತಿಯಾಗಿದ್ದು ಬಜ್ಪೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತನ ಜೊತೆಗಿದ್ದ ಅಶ್ವಿತ್ ಕ್ರಿಮಿನಲ್ ಹಿನ್ನೆಲೆಯವನಲ್ಲ. 

ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಜೊತೆಗೆ ತಿರುಗಾಡದಂತೆ ಈ ಮೊದಲೇ ಹೇಳಿದ್ದೆ. ರೌಡಿಗಳ ಜೊತೆಗಿದ್ದು ಅಪರಾಧದಲ್ಲಿ ಸಿಲುಕಬೇಡಿ ಎಂದೂ ಹೇಳಿದ್ದೆ. ನೀವು ನಮ್ಮ ಮಾತು ಕೇಳ್ತಾ ಇಲ್ಲ ಎನಿಸತ್ತೆ. ನಮ್ಮ ಮಾತು ಕೇಳಲ್ಲಾಂದ್ರೆ ನಾವು ಏನು ಮಾಡಬೇಕೆಂದು ಗೊತ್ತಿದೆ. ನಾವು ನಮ್ಮ ಕೆಲಸ ಮಾಡ್ತೀವಿ. ನಿಮ್ಮ ಇಷ್ಟದಂತೆ ಮಾಡ್ಕೊಂಡ್ರೆ ನಮ್ಗೆ ತೊಂದರೆ ಇಲ್ಲ. ಏನು ಬೇಕಾದರೂ ಮಾಡ್ಕೊಂಡು ಹೋಗಿ‌. ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ವಾರ್ನಿಂಗ್ ಮಾಡಿದ್ದಾರೆ.

In Bajpe, Mangaluru, rowdy-sheeter Prashanth alias “Pachu,” an accused in the Fazil murder case, has been booked for allegedly demanding extortion money from a firecracker trader. The incident occurred on October 22, when Prashanth and an associate reportedly threatened the shop owner for money.