Mahesh Vikram Hegde Arrested, Post Card Kannada: ಮಸೀದಿಗೆ ಬುಲ್ಡೋಜರ್ ನುಗ್ಗಿಸಿ ಎಂದು ಜಾಲತಾಣದಲ್ಲಿ ಪೋಸ್ಟ್ ; ಬಲಪಂಥೀಯ ಕಾರ್ಯಕರ್ತ ಮಹೇಶ್ ವಿಕ್ರಂ ಹೆಗ್ಡೆ ಬಂಧನ, ಬೆಂಗಳೂರಿನಲ್ಲಿ ಸೆರೆಹಿಡಿದು ಜೈಲಿಗಟ್ಟಿದ ಮೂಡುಬಿದ್ರೆ ಪೊಲೀಸರು 

12-09-25 09:25 pm       Mangalore Correspondent   ಕರಾವಳಿ

ಪೋಸ್ಟ್ ಕಾರ್ಡ್ ಜಾಲತಾಣದ ಮುಖ್ಯಸ್ಥ, ಬಲಪಂಥೀಯ ಕಾರ್ಯಕರ್ತ ಮೂಡುಬಿದ್ರೆ ಮೂಲದ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಸೆ.12: ಪೋಸ್ಟ್ ಕಾರ್ಡ್ ಜಾಲತಾಣದ ಮುಖ್ಯಸ್ಥ, ಬಲಪಂಥೀಯ ಕಾರ್ಯಕರ್ತ ಮೂಡುಬಿದ್ರೆ ಮೂಲದ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಹಿಂದು - ಮುಸ್ಲಿಂ ಮಧ್ಯೆ ದ್ವೇಷ ಹಬ್ಬಿಸುವ ರೀತಿ ಪೋಸ್ಟ್ ಹಾಕಿದ ಬಗ್ಗೆ ದಾಖಲಾದ ಪ್ರಕರಣ ಸಂಬಂಧಿಸಿ ಬಂಧಿಸಲಾಗಿದೆ. 

ಪೋಸ್ಟ್ ಕಾರ್ಡ್ ಎಂಬ ಫೇಸ್ಬುಕ್ ಖಾತೆಯಲ್ಲಿ ಮದ್ದೂರು ಗಣೇಶ ಮೆರವಣಿಗೆ ಪ್ರಕರಣ ಸಂಬಂಧಿಸಿ "ಮಾನ್ಯ ಮುಖ್ಯಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿಯ ಮೇಲೆ ಬುಲ್ಡೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ, ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂತಹ ಪ್ರಕರಣ ಮರುಕಳಿಸುವುದಿಲ್ಲ" ಎಂಬ ಬರಹವನ್ನು Post ಪೋಸ್ಟ್ ಮಾಡಿದ್ದು, ಈ ವಿಷಯ ಸಂಬಂಧ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ 353(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. 

 

ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡ ಮೂಡುಬಿದರೆ ಪೊಲೀಸರು ಬೆಂಗಳೂರಿನಲ್ಲಿ ಮಹೇಶ್ ವಿಕ್ರಂ ಹೆಗ್ಡೆಯವರನ್ನು ವಶಕ್ಕೆ ಪಡೆದು ಸೆ.12 ರಂದು ಮೂಡಬಿದರೆ ಸಿ.ಜೆ ಮತ್ತು ಕೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಮಹೇಶ್ ವಿಕ್ರಂ ಹೆಗ್ಡೆ (45) ಅವರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Right-wing activist and founder of the controversial social media page Postcard, Mahesh Vikram Hegde, was arrested by Moodbidri police for allegedly inciting communal hatred through a provocative post on Facebook on Post Card Kannada.