ಬ್ರೇಕಿಂಗ್ ನ್ಯೂಸ್
18-01-25 09:27 pm Mangalore Correspondent ಕರಾವಳಿ
ಮಂಗಳೂರು, ಜ.18: ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು ಕುದುರೆ, ಹುಲಿಗಳು, ಯಕ್ಷಗಾನ, ಕಥಕ್ಕಳಿ ಸೇರಿದಂತೆ ನೂರಾರು ಬಗೆಬಗೆಯ ಗಾಳಿಪಟಗಳು ಗಮನ ಸೆಳೆದವು. ಟೀಮ್ ಮಂಗಳೂರು, ಹವ್ಯಾಸಿ ಗಾಳಿಪಟ ತಂಡವು 'ಕರಾವಳಿ ಉತ್ಸವ'ದ ಅಂಗವಾಗಿ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಈ ಸಲ ಎಂಟನೇ ಬಾರಿಗೆ ಅಂತಾರಾಷ್ಟ್ರೀಯ ಕೈಟ್ ಫೆಸ್ಟ್ ಆಯೋಜಿಸಿದೆ.
ಜನವರಿ 18 ಮತ್ತು 19 ರಂದು ಅಂತಾರಾಷ್ಟ್ರೀಯ ಗಾಳಿಪಟ ನಡೆಯುತ್ತಿದ್ದು ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಸ್ವೀಡನ್, ಇಂಡೋನೇಶಿಯಾ, ಪೊರ್ಚುಗಲ್ ದೇಶಗಳಿಂದ ಗಾಳಿಪಟ ತಂಡಗಳು ಆಗಮಿಸಿವೆ. ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದಲೂ ಗಾಳಿಪಟ ತಂಡಗಳು ಉತ್ಸವದಲ್ಲಿ ಪಾಲ್ಗೊಂಡಿವೆ.
ಟೀಮ್ ಮಂಗಳೂರು ತಂಡವು ಕರಾವಳಿಯ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಬಾನೆತ್ತರದಲ್ಲಿ ಕಮಾನು ಸೃಷ್ಟಿಸಿದೆ. ಈ ಬಾರಿ 'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯ ವಾಕ್ಯ ಮುಂದಿಟ್ಟು ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ್ ಗಾಳಿಪಟಗಳು ಜನರ ಗಮನಸೆಳೆದಿದೆ. ಮಧ್ಯಾಹ್ನ ಹೊತ್ತಿಗೆ ಶುರುವಾದರೆ ರಾತ್ರಿ 9ರ ವರೆಗೂ ಬಾನಂಗಳದಲ್ಲಿ ಗಾಳಿಪಟಗಳು ಚಿತ್ತಾರ ಮೂಡಿಸಿ ಹಾರಾಡುತ್ತಿದ್ದು ಜನರನ್ನು ಆಕರ್ಷಿಸಿದೆ.
ಕುದುರೆ, ಐಸ್ ಕ್ರೀಂ, ಮೀನು, ಅಕ್ಟೋಪಸ್, ಹುಲಿ, ಗಣಪತಿ, ಕಥಕ್ಕಳಿ, ಸನ್ ಫ್ಲವರ್, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್ ರೂಪದ ಗಾಳಿಪಟಗಳು ಗಮನ ಸೆಳೆಯುತ್ತಿದೆ. ಇದರಲ್ಲಿ ಪಿನಾಕಿಯೋ ಕಾರ್ಟೂನ್ ಅತೀ ದೊಡ್ಡದಾಗಿದ್ದು, ಆಕರ್ಷಕವಾಗಿದೆ.
ಗಾಳಿಪಟ ಉತ್ಸವದಲ್ಲಿ ಹಲವಾರು ವಿದೇಶಿಗರು ಸಂತಸದಿಂದ ಭಾಗಿಯಾಗಿದ್ದಾರೆ. ಹಲವರು ಪ್ರತಿ ವರ್ಷವೂ ಭಾರತಕ್ಕೆ ಬಂದು ತಮ್ಮ ಕೈಚಳಕ ತೋರುತ್ತಾರೆ. ನಾವೇ ಗಾಳಿಪಟ ತಯಾರಿಸಿ, ನಾವೇ ಹಾರಿಸುತ್ತೇವೆ. ಇಲ್ಲಿ ಸನ್ ಫ್ಲವರ್, ಕ್ರಿಕೆಟ್, ಪಿನಾಕಿಯೊ, ಬೌಲ್ ಹಾರಿಸಿದ್ದೇವೆ. ಮಂಗಳೂರಿನಲ್ಲಿ ಗಾಳಿಪಟ ಹಾರಾಟಕ್ಕೆ ಉತ್ತಮ ವಾತಾವರಣ ಇದೆ ಎಂದು ರಷ್ಯಾ ಮೂಲದ ದಂಪತಿ ಸಂತಸ ವ್ಯಕ್ತಪಡಿಸಿದರು. ಈ ಬಾರಿ 11 ದೇಶಗಳಿಂದ 22 ವಿದೇಶಿಯರು ಬಂದಿದ್ದಾರೆ. ನಮ್ಮ ದೇಶದ ವಿವಿಧ ಭಾಗದಿಂದ 30 ಮಂದಿ ಬಂದಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
Massive crowds throngs to see the stunning displays at International Kite Festival 2025 at Thannirbhavi Beach in Mangalore. The 8th ONGC-MRPL International Kite Festival, held on January 18 and 19 at Thannirbhavi Beach, Mangaluru, was inaugurated by district in-charge minister Dinesh Gundurao.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 06:57 pm
Mangalore Correspondent
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm