ಬ್ರೇಕಿಂಗ್ ನ್ಯೂಸ್
11-01-25 10:34 pm Mangalore Correspondent ಕರಾವಳಿ
ಉಳ್ಳಾಲ, ಜ.11: ಎಲ್ಲಾ ಜಾತಿ, ಧರ್ಮದವರನ್ನ ಒಟ್ಟುಗೂಡಿಸಿ ನಡೆಯುವ ಕರಾವಳಿಯ ಕಂಬಳ ಕ್ರೀಡೆ ಜಾತ್ಯಾತೀತ ಕ್ರೀಡೆಯಾಗಿದೆ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಮಾಡಲು ಸ್ಪೀಕರ್ ಯು.ಟಿ ಖಾದರ್ ಮತ್ತು ಶಾಸಕ ಅಶೋಕ್ ರೈ ಒತ್ತಾಯಿಸಿದ್ದು, ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಕುರ್ಚಿಯಲ್ಲಿ ಕೂತ್ಕೋಬಹುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ತೃತೀಯ ವರ್ಷದ ಹೊನಲು ಬೆಳಕಿನ ನರಿಂಗಾನ ಲವ-ಕುಶ ಜೋಡುಕರೆ ಕಂಬಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಂಬಳವು ಕರಾವಳಿಯ ಪುರಾತನ ಜನಪ್ರಿಯ ಗ್ರಾಮೀಣ ಕ್ರೀಡೆ. ಕಂಬಳವನ್ನ ಸುಪ್ರೀಮ್ ಕೋರ್ಟ್ ನಿಷೇಧಗೊಳಿಸಿತ್ತು. ನಮ್ಮ ಅಂದಿನ ಕಾಂಗ್ರೆಸ್ ಸರಕಾರವು ಕಂಬಳಕ್ಕೆ ವಿಧಿಸಲಾಗಿದ್ದ ನಿಷೇಧವನ್ನ ತೆರವುಗೊಳಿಸಿತ್ತು. ರೈತರಿಗೆ ಪ್ರಾಣಿಗಳ ಜೊತೆ ಅವಿನಾಭಾವ ಸಂಬಂಧ ಇದೆ. ಅದರ ಭಾಗವಾಗಿ ಈ ಕಂಬಳ ಕ್ರೀಡೆ ನಡೆಯುತ್ತಿದೆ. ರೈತರು ಕಂಬಳದ ಕೋಣಗಳನ್ನ ಬಹಳಷ್ಟು ಮುತುವರ್ಜಿ ವಹಿಸಿ ಸಾಕುತ್ತಾರೆ. ತುಳುವರು ಎಷ್ಟೇ ವಿದ್ಯಾವಂತರಾದರೂ ಕಂಬಳ ಕ್ರೀಡೆಯನ್ನ ಪ್ರೋತ್ಸಾಹಿಸುತ್ತಾರೆ.
ಕಂಬಳ ಕ್ರೀಡೆಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕಂಬಳಕ್ಕೆ ಒಂದೂವರೆ ಕೋಟಿ ರೂಪಾಯಿ ಅನುದಾನ, ರಾಜ್ಯದಲ್ಲಿ ನಡೆಯುವ ಇಪ್ಪತ್ತನಾಲ್ಕು ಕಂಬಳ ಉತ್ಸವಗಳಿಗೆ ತಲಾ 5 ಲಕ್ಷ ಅನುದಾನವನ್ನು ರಾಜ್ಯ ಸರಕಾರ ನೀಡಿದೆ ಎಂದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ಹಿರಿಯರು ಪರಿಚಯಿಸಿದ ಕಂಬಳ ಸಂಸ್ಕೃತಿಯನ್ನ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ನರಿಂಗಾನ ಕಂಬಳದ ಮುಖೇನ ನಡೆಯುತ್ತಿದೆ. ಆರ್ಥಿಕ ಕಷ್ಟ ಇದ್ದರೂ ಕಂಬಳ ಪ್ರೇಮಿಗಳು ಕಂಬಳವನ್ನ ಕೈಬಿಟ್ಟಿಲ್ಲ. ಕಂಬಳ ಕ್ರೀಡೆಯು ಪ್ರಾಣಿಗಳಿಗೆ ಎಂದಿಗೂ ಹಿಂಸೆ ನೀಡಿಲ್ಲ, ಬದಲಾಗಿ ಪ್ರಾಣಿಗಳನ್ನ ಪ್ರೀತಿಸಲು ಕಲಿಸಿದೆ ಎಂದರು. ಕಂಬಳಕ್ಕೆ ಐದು ಲಕ್ಷ ಅನುದಾನ ಮತ್ತು ತಾನು ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಒಂದು ಸಾವಿರ ಕೋಟಿ ಅನುದಾನ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನ ಖಾದರ್ ಅಭಿನಂದಿಸಿದರು.
ಕಂಬಳ ಕ್ಷೇತ್ರದ ಸಾಧಕರಾದ ಗುಣಪಾಲ ಕಡಂಬ, ರಾಜೀವ ಶೆಟ್ಟಿ ಎಡ್ತೂರು, ಅಪ್ಪು ಯಾನೆ ಜಾನ್ ಸಿರಿಲ್ ಡಿ ಸೋಜ, ಚಂದ್ರಹಾಸ್ ಶೆಟ್ಟಿ ಮೋರ್ಲ, ಚಿತ್ರನಟಿ ಸಾನ್ವಿ ಶ್ರೀವಾತ್ಸವ ಅವರನ್ನ ಮುಖ್ಯಮಂತ್ರಿಗಳು ಸನ್ಮಾನಿಸಿದರು. ಸಚಿವರಾದ ದಿನೇಶ್ ಗುಂಡೂರಾವ್, ರಹೀಂ ಖಾನ್, ಕಾಸರಗೋಡು ಸಂಸದ ಉನ್ನಿತ್ತಾನ್, ಶಾಸಕರಾದ ಅಶೋಕ್ ರೈ, ಎಮ್ಮೆಲ್ಸಿಗಳಾದ ಮಂಜುನಾಥ್ ಭಂಡಾರಿ, ನಝೀರ್ ಅಹ್ಮದ್, ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Chief Minister Siddaramaiah on Saturday, said Kambala has been a secular and traditional sport of coastal Karnataka that unites people. It was his government that eventually lifted the ban on Kambala, he stated.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm