ಬ್ರೇಕಿಂಗ್ ನ್ಯೂಸ್
02-01-25 02:09 pm Mangalore Correspondent ಕರಾವಳಿ
ಮಂಗಳೂರು, ಜ.2: ಕರಾವಳಿ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ತೆಂಗಿನಕಾಯಿ ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಬೇಡಿಕೆ ಹೆಚ್ಚಿರುವುದರಿಂದ ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಣ ಕೊಡುತ್ತೇವೆ ಎಂದರೂ, ತೆಂಗಿನ ಕಾಯಿ ಸಿಗುತ್ತಾ ಇಲ್ಲ.
ಪ್ರಸ್ತುತ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೆ.ಜಿಗೆ 60 ರೂ. ಇದ್ದರೆ, ಸಾಧಾರಣ ಮಟ್ಟದ ವ್ಯಾಪಾರಸ್ಥರು, ಅಂಗಡಿಗಳಲ್ಲಿ ಕೆ.ಜಿಗೆ 70-75 ರೂ. ಲಗೆ ಮಾರುತ್ತಿದ್ದಾರೆ. ಬಹುತೇಕ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ತೆಂಗಿನಕಾಯಿ ಕೊಯ್ಲು ಆಗುವುದರಿಂದ ದರ ಕಡಿಮೆ ಆಗಬೇಕಿತ್ತು. ಆದರೆ ಮಂಗಳೂರು, ಕಾಸರಗೋಡು, ಉಡುಪಿ ಭಾಗದಲ್ಲಿ ದರ ಹೆಚ್ಚುತ್ತಲೇ ಇದೆ.
ಇದುವರೆಗೂ ಅಗತ್ಯದಷ್ಟು ತೆಂಗಿನಕಾಯಿ ಕರಾವಳಿ ಜಿಲ್ಲೆಗಳಲ್ಲಿ ಲಭಿಸುತ್ತಿತ್ತು. ಒಂದೆಡೆ ಹಬ್ಬಗಳ ಸೀಸನ್, ಮತ್ತೊಂದು ಕಡೆ ಶಬರಿಮಲೆ ಸೀಸನ್ ಇರುವುದರಿಂದ ತೆಂಗಿನಕಾಯಿಗೆ ಬೇಡಿಕೆ ವಿಪರೀತ ಹೆಚ್ಚಾಗಿದೆ. ತೆಂಗು ಬೆಳೆ ಹೆಚ್ಚಿರುವ ಮಂಡ್ಯ, ತುಮಕೂರಿನಲ್ಲಿಯೂ ಈ ಬಾರಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಆ ಕಡೆಯಿಂದ ಬರುವ ಎಳನೀರು ದರವೂ ಹೆಚ್ಚಾಗಿದೆ.
ಇದೇ ವೇಳೆ, ಕೊಬ್ಬರಿ ಕ್ವಿಂಟಾಲ್ಗೆ 17 ಸಾವಿರ ರೂ.ಗೆ ಏರಿದೆ. ಕೊಬ್ಬರಿ, ತೆಂಗಿನಕಾಯಿ ದರ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ತೆಂಗಿನೆಣ್ಣೆ ಬೆಲೆಯಲ್ಲೂ ಹೆಚ್ಚಳವಾಗಿದೆ. ಒಂದು ಲೀಟರ್ ತೆಂಗಿನ ಎಣ್ಣೆ ದರ 250 ರೂ. ದಾಟಿದೆ. ಇನ್ನೊಂದೆಡೆ ಬಿಸಿಲ ಝಳ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಎಳನೀರು ಒಂದಕ್ಕೆ 40 ರಿಂದ 50 ರೂ. ವರೆಗೆ ಇದ್ದರೆ, ನಗರ ಪ್ರದೇಶಗಳಲ್ಲಿ 65 ರೂ. ವರೆಗೆ ಇದೆ. ಎಳನೀರು ಪೂರೈಕೆಯೂ ಕುಸಿದಿದೆ.
Coconut Prices raise in price for new year Mangalore, 70 per kilo in Dakshina Kannada. Mandya and Tumkuru has seen price drop in coconut.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 03:23 pm
HK News Desk
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
05-08-25 04:29 pm
Mangalore Correspondent
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm