ಬ್ರೇಕಿಂಗ್ ನ್ಯೂಸ್
02-12-24 05:42 pm Mangalore Correspondent ಕರಾವಳಿ
ಮಂಗಳೂರು, ಡಿ.2: ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತದ ಎಫೆಕ್ಟ್ ಕರ್ನಾಟಕದ ಕರಾವಳಿಯಲ್ಲೂ ಕಾಣಿಸಿಕೊಂಡಿದೆ. ಮಂಗಳೂರಿನಲ್ಲಿ ಸಂಜೆಯಾಗುತ್ತಲೇ ಭಾರೀ ಮಳೆಯಾಗಿದ್ದು, ನೋಡ ನೋಡುತ್ತಲೇ ರಸ್ತೆಗಳು ಮಳೆಗಾಲದ ರೀತಿ ತುಂಬಿಕೊಂಡಿವೆ. ಕತ್ತಲು ಆವರಿಸುವ ಮುನ್ನವೇ ಬಾನಲ್ಲಿ ಆವರಿಸಿದ ಕಪ್ಪು ಮೋಡಗಳು ಬಿಸಿಲನ್ನು ಓಡಿಸಿದ್ದು, ಜನಮಾನಸದಲ್ಲಿ ಕತ್ತಲನ್ನು ಮೂಡಿಸಿದೆ.
ಚಂಡಮಾರುತದ ಕಾರಣದಿಂದಾಗಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹೊತ್ತಿಗೆ ಕೆಲವೊಂದು ತುಂತುರು ಮಳೆ ಬಿದ್ದರೂ, ಜೋರು ಮಳೆಯ ಲಕ್ಷಣ ಕಾಣಿಸಲಿಲ್ಲ. ಸಂಜೆ ನಾಲ್ಕು ಮೂವತ್ತು ಕಳೆದೊಡನೆ ಒಂದೇ ಸಮನೆ ಮಳೆ ಸುರಿದಿದ್ದು, ಧೋ ಎಂದು ಅಬ್ಬರಿಸಿದೆ. ಒಡನೆಯೇ ಸಿಡಿಲು, ಮಿಂಚು ಕೂಡ ಮಾರ್ದನಿಸಿದ್ದು, ಕರಿಗತ್ತಲ ಮೋಡಗಳು ಕತ್ತಲಾಗದಿದ್ದರೂ ಕತ್ತಲನ್ನು ತಂದಿಟ್ಟಿದೆ.
ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಡಿ.2ರಿಂದ 3ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಇರುವಂತೆ ಸೂಚಿಸಿದೆ. ಅಲ್ಲದೆ, ಡಿ.2ರಿಂದ 6ರ ವರೆಗೆ ಸಮುದ್ರ ಪ್ರಕ್ಷುಬ್ಧವಾಗಲಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಿದೆ. ಕರ್ನಾಟಕ ಕರಾವಳಿ ಭಾಗದಲ್ಲಿ ಡಿ.3, 4ರ ನಡುವೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಅದಕ್ಕೂ ಮೊದಲೇ ಮಳೆ ಆವರಿಸಿಕೊಂಡಿದೆ.
ಮಂಗಳೂರಿನಲ್ಲಿ ಸಂಜೆ ಹೊತ್ತಿಗೆ ಏಕಾಏಕಿ ಮಳೆಯಾಗಿದ್ದರಿಂದ ಜನರು ಕೊಡೆ, ರೈನ್ ಕೋಟ್ ಇಲ್ಲದೆ ಪರದಾಡಿದ್ದಾರೆ. ಪಕ್ಕದ ಕಾಸರಗೋಡು ಜಿಲ್ಲೆಯ ಕೆಲವು ಭಾಗದಲ್ಲಿ ಮಧ್ಯಾಹ್ನವೇ ಭಾರೀ ಮಳೆಯಾಗಿದ್ದು, ಕುಂಬಳೆಯ ಹೊಸ ಹೆದ್ದಾರಿಯಲ್ಲಿ ಮಳೆ ನೀರು ತುಂಬಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೆ, ಶಾಲಾ ಮೈದಾನಗಳಲ್ಲಿ, ಕೆಲವು ಮನೆಗಳ ಒಳಗೆ ಮತ್ತು ಕೃಷಿ ಜಮೀನುಗಳಿಗೆ ನೀರು ನುಗ್ಗಿರುವುದು ವಿಡಿಯೋ ವೈರಲ್ ಆಗಿದೆ.
Fengal cyclone in Tamil Nadu, heavy rain in Mangalore with thunder, and lightning. The India Meteorological Department (IMD) issued a red alert for four districts in Kerala on Sunday, December 1, 2024, forecasting extremely heavy rainfall for December 2. Malappuram, Kozhikode, Wayanad, and Kannur are expected to receive over 20 cm of rain within 24 hours, prompting concerns about flooding and landslides in these regions.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm