ಬ್ರೇಕಿಂಗ್ ನ್ಯೂಸ್
11-11-24 05:36 pm Mangalore Correspondent ಕರಾವಳಿ
ಮಂಗಳೂರು, ನ.11: ನಗರದ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹೊರಕ್ಕೆ ಹಾರಿ ಬಾಣಂತಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಮುನಿಯಾಲು ನಿವಾಸಿ ರಂಜಿತಾ (28) ಮೃತ ಮಹಿಳೆ.
ಒಂದು ವರ್ಷದ ಹಿಂದೆ ಮುನಿಯಾಲಿನ ಪ್ರಕಾಶ್ ಆಚಾರ್ಯ ಮತ್ತು ರಂಜಿತಾ ಮದುವೆಯಾಗಿತ್ತು. ಆರು ತಿಂಗಳ ಗರ್ಭಿಣಿಯಾಗಿದ್ದ ರಂಜಿತಾಗೆ ಅತಿ ರಕ್ತದೊತ್ತಡ ಇದ್ದುದರಿಂದ ಅ.24ರಂದು ಮಂಗಳೂರಿನ ಆಸ್ಪತ್ರೆಗೆ ತರಲಾಗಿತ್ತು. ಮಹಿಳೆಯ ಆರೋಗ್ಯಕ್ಕೆ ತೊಂದರೆ ಎದುರಾಗಿದ್ದರಿಂದ ಅ.29ರಂದು ಮಗುವನ್ನು ಸಿಸೇರಿಯನ್ ಮೂಲಕ ತೆಗೆಸಲಾಗಿತ್ತು. ನಾಲ್ಕು ದಿನಗಳ ಕಾಲ ಎನ್ಐಸಿಯುನಲ್ಲಿದ್ದ ಮಗು ಬಳಿಕ ಮೃತಪಟ್ಟಿತ್ತು.
ಕೆಲವು ಮಹಿಳೆಯರಿಗೆ ಬಾಣಂತಿ ಸಂದರ್ಭದಲ್ಲಿ ಮಾನಸಿಕ ಖಿನ್ನತೆ ಆವರಿಸುತ್ತದೆ. ಅದೇ ರೀತಿಯ ಖಿನ್ನತೆ ರಂಜಿತಾಗೂ ಇತ್ತು ಎನ್ನಲಾಗುತ್ತಿದೆ. ಮಗು ಮೃತಪಟ್ಟ ವಿಷಯ ತಿಳಿದೋ ಏನೋ ಮಾನಸಿಕವಾಗಿ ಕುಗ್ಗಿದ ರೀತಿ ಇದ್ದರು. ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಕ್ಕೆ ಪ್ರಕ್ರಿಯೆ ನಡೆದಿತ್ತು. ಪತಿ ಪ್ರಕಾಶ್ ಆಚಾರ್ಯ ಕಾರು ತೆಗೆದುಕೊಂಡು ಆಸ್ಪತ್ರೆ ಕಡೆಗೆ ಬರುತ್ತಿದ್ದರೆ, ಮಹಿಳೆಯ ತಮ್ಮ ಮತ್ತು ತಾಯಿ ಆಸ್ಪತ್ರೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮಹಿಳೆ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹೊರಕ್ಕೆ ಹಾರಿದ್ದು ದುರಂತ ಸಾವು ತಂದುಕೊಂಡಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A woman who recently gave birth and lost her newborn to illness ended her life by jumping from the fourth floor of Lady Goschen Hospital on Monday, November 11. The deceased has been identified as Ranjita (28), a resident of Karkala.
15-08-25 03:20 pm
Bangalore Correspondent
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm