ಬ್ರೇಕಿಂಗ್ ನ್ಯೂಸ್
21-10-24 08:38 pm Mangalore Correspondent ಕರಾವಳಿ
ಮಂಗಳೂರು, ಅ.21: ಕೊಬ್ಬರಿ, ತೆಂಗಿನ ಕಾಯಿಗೆ ಈ ಬಾರಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ. ದೀಪಾವಳಿ ನಂತರ ಇನ್ನೂ ಬೆಲೆ ಹೆಚ್ಚಲಿದ್ದು ತೆಂಗಿನ ಕಾಯಿ ಕೇಜಿಗೆ 60 ರಿಂದ 70 ರೂಪಾಯಿಗೆ ಏರಲಿದೆ. ಬೆಳೆಗಾರರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಬೆಲೆ ಪಡೆಯಲಿದ್ದಾರೆ ಎಂದು ದಕ್ಷಿಣ ಕನ್ನಡ ತೆಂಗು ಉತ್ಪಾದಕ ಮಾರಾಟ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ ತಿಳಿಸಿದ್ದಾರೆ.
ಈ ಬಾರಿ ಮಳೆ ಹೆಚ್ಚಿದ್ದರಿಂದ ತೆಂಗು ಕೃಷಿ ಇಳುವರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಬೆಳೆಯೂ ಕಡಿಮೆಯಾಗಿದ್ದು ಇದರ ಪರಿಣಾಮ ಖಚಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈಗಾಗಲೇ ಎಳನೀರಿಗೆ 60 ರೂ.ನಷ್ಟು ದರ ಏರಿದ್ದು ಬೆಳೆಗಾರರಿಂದ 40-50 ರೂ.ಗೆ ಖರೀದಿಯಾಗುತ್ತಿದೆ. ಇದರಿಂದಾಗಿ ಎಳನೀರನ್ನು ಕೂಡ ಹೆಚ್ಚಾಗಿ ರೈತರು ಮಾರಾಟ ಮಾಡುತ್ತಿದ್ದಾರೆ. ಅಧಿಕ ಪೋಷಕಾಂಶ ಇರುವ ಎಳನೀರಿಗೆ ದರ ಏರಿಕೆಯಾಗುತ್ತಿರುವುದು ಮತ್ತು ಎಳನೀರು ಮಾರಾಟಕ್ಕೆ ರೈತರು ಒಲವು ತೋರುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಉತ್ತಮ ಲಕ್ಷಣ. ಇದು ತೆಂಗು ಕೃಷಿಯಲ್ಲಿ ಆಗಿರುವ ಉತ್ತಮ ಬೆಳವಣಿಗೆಯೂ ಹೌದು. ತೆಂಗು ಕೂಡ ಪರ್ಯಾಯ ಆಹಾರ ಬೆಳೆಯಾಗುತ್ತಿದ್ದು ಇದೆಲ್ಲದರ ಪರಿಣಾಮ ಕೃಷಿಕರ ಪಾಲಿಗೆ ಲಾಭದಾಯಕ ಆಗಲಿದೆ. ಇದರಿಂದ ತೆಂಗು ಮತ್ತು ಕೊಬ್ಬರಿ ಕೇಜಿಗೆ ಬೆಲೆ ಹೆಚ್ಚುವುದು ಖಚಿತ.
ದೀಪಾವಳಿ ನಂತರ ತೆಂಗಿನಕಾಯಿ ಕೆಜಿಗೆ 60ರಿಂದ 70 ರೂ.ನಷ್ಟು ಆಗುವ ಸಾಧ್ಯತೆಯಿದೆ. ಈಗಲೇ ಸಗಟು ಮಾರುಕಟ್ಟೆಯಲ್ಲಿ 55-60 ರು. ತೆಂಗಿನ ಕಾಯಿ ದರ ಇದೆ. ತೆಂಗು ಉತ್ಪಾದಕ ಸಂಸ್ಥೆಯಿಂದ ಬೆಳೆಗಾರರಿಂದ 40-45 ರೂ.ಗೆ ತೆಂಗಿನ ಕಾಯಿ ಖರೀದಿ ಮಾಡಲಾಗುತ್ತಿದೆ. ಈ ದರ ಖಚಿತವಾಗಿಯೂ ದೀಪಾವಳಿ ಬಳಿಕ ಹೆಚ್ಚಲಿದೆ. ಹೀಗಾಗಿ ತೆಂಗು ಬೆಳೆಗಾರರು ದುಡುಕದೆ ಉತ್ತಮ ಇಳುವರಿ ಬರುವ ವರೆಗೆ ತಾಳ್ಮೆ ವಹಿಸಬೇಕು. ತೆಂಗು ದರ ಏರಿಕೆಯಾದರೆ ಕೃಷಿಕರ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಎಂದು ಕುಸುಮಾಧರ ಅವರು ಪ್ರಕಟಣೆಯಲ್ಲಿ ರೈತರಿಗೆ ಸಲಹೆ ಮಾಡಿದ್ದಾರೆ.
Coconut price to increase from 60 to 70 rupees per kg says Coconut Producers Association President Kusumadhar in Mangalore.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm